ಭಾವಾಂತರಂಗದಲ್ಲಿ ಏನೇನೋ ಯುವ ಮನಸುಗಳ ತುಡಿತ ಬರಹ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ ಬರಹಕ್ಕೆ ಪೂರಕವಾದ ರೇಖಾಚಿತ್ರವನ್ನು ಅಣ್ಣಿಗೇರಿ ಯ ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ ನೀಡಿರುವರು
ಭಾವಾಂತರಂಗದಲ್ಲಿ ಏನೇನೋ.. ಕಳೆದ ಎರಡು ದಿನಗಳಿಂದ ನಂದಿನಿ ಒಂದು ಪೋನ್ ಮತ್ತು ಸಂದೇಶ ಏನೂ ಮಾಡುತ್ತಿಲ್ಲವಲ್ಲ. ಏನಾಗಿರಬಹುದು ಇವಳಿಗೆ.?ಎಂದು ವಿಜಯ್ ಯೋಚಿಸುತ್ತಿದ್ದನು.ತಾನೇ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲವಲ್ಲ. ಪೋನ್ ಕಟ್ ಮಾಡ್ತಿದ್ದಾಳೆ ಏನಾದರೂ ಆಗಿದೆಯೇ.? ನಮ್ಮ ಸ್ನೇಹದ ನಡುವೆ ಬಿರುಕು ಮೂಡಿಸುವ ಘಟನೆ ಏನಾದರೂ ಜರುಗಿರಬಹುದೇ.? ಏನೆಲ್ಲ ಆಲೋಚನೆಗಳು. ದಿನ ರಾತ್ರಿ ಮಲಗುವ ಮುಂಚೆ ಗುಡ್ ನೈಟ್ ಎಂದು ಹೇಳುತ್ತಿದ್ದಳು. ಬೆಳಿಗ್ಗೆ ಗುಡ್ ಮಾರ್ನಿಂಗ್ ಡಿಯರ್ ಎದ್ದಿದ್ದೀರಾ.!? ಎಂದು ಕೇಳುತ್ತಿದ್ದಳು. ದಿಢೀರ್ ಯಾಕೆ ನಿಲ್ಲಿಸಿರಬಹುದು.!? ಹಾಸಿಗೆಯ ಮೇಲೆ ಹೊರಳಾಡುತ್ತ…