ಮುನವಳ್ಳಿಯ ಪಂಚಮುಖಿ ಹನುಮಾನ ಮಂದಿರ.
ಮುನವಳ್ಳಿಯ ಪಂಚಮುಖಿ ಹನುಮಾನ ಮಂದಿರ. ಸವದತ್ತಿ ತಾಲೂಕಿನ ಇತಿಹಾಸ ಪ್ರಸಿದ್ದ ಪಟ್ಟಣ ಪ್ರದೇಶ ಮುನವಳ್ಳಿ.ಇದು ದೇವಗಿರಿ ಯಾದವರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಪಂಚಲಿಂಗೇಶ್ವರ ದೇವಾಲಯ.ವಿಷ್ಣುತೀರ್ಥರ ಆಶ್ರಮ ಕಟ್ಟೆ, ಪ್ರಸಿದ್ದ ಮಲಪ್ರಭೆ ನದಿಯ ಪಾತ್ರದಲ್ಲಿರುವ ಮುನಿಗಳ ಹಳ್ಳಿ.ಇಲ್ಲಿ ಅನೇಕ ಮಠಮಾನ್ಯಗಳು ದೇವಾಲಯಗಳು ಪ್ರಸಿದ್ದಿ ಹೊಂದಿವೆ.ಸವದತ್ತಿಯಿಂದ ೧೬ ಕಿ.ಮೀ ಅಂತರದಲ್ಲಿರುವ ಈ ಗ್ರಾಮದಲ್ಲಿ ಬೆಟ್ಟದ ಮೇಲೆ ಶಿರಡಿ ಸಾಯಿಬಾಬಾ ಮಂದಿರದ ಹತ್ತಿರದಲ್ಲಿ ದಕ್ಷಿಣಾಭಿಮುಖವಾಗಿರುವ ಪಂಚಮುಖಿ ಹನುಮಾನ ಮಂದಿರವಿದೆ. ಪಂಚಮುಖಿ ಹನುಮನ ಉದಯದ ಹಿನ್ನಲೆ ರಾಮಾಯಣದಲ್ಲಿ ಬರುವ ವಿವರಣೆಯ ಪ್ರಕಾರ ರಾಮ…