ಮಕರ ಸಂಕ್ರಾಂತಿ
ಸೂರ್ಯನ ಪರಿಭ್ರಮಣದೊಳು
ಭೂತಾಯಿಯ ಮಡಿಲು
ನವಕಾಂತಿಯ ಯುಗವನು ಕಾಣುತಿರೆ
ಋತು ಚಕ್ರದೊಳು ವಸಂತನ ಆಗಮನ
ನವಕಳೆಯೊಳು ಪ್ರಕೃತಿ
ಸಂಕ್ರಾಂತಿಯ ಆಗಮನ
ಎಳ್ಳು-ಬೆಲ್ಲವ ಮೆದ್ದು
ಒಳ್ಳೆಯ ನುಡಿಗಳನಾಡುತ
ಸಕಲರೂ ಕೂಡಿ
ಸಡಗರದಿ ದಿನವನು ಕಳೆಯೋಣ
ವರ್ಷವಿಡೀ ಬದುಕಲಿ ಸುಖ-ಶಾಂತಿ
ನೆಮ್ಮದಿಯ ಬಯಸುತ
ಬದುಕಿನ ಸಂತಸ ಮೆರೆಯೋಣ
ಹೊಸದಿಗಂತದಿ ಮೂಡಲಿ ಆಶಾಭಾವ
ಹೊಸತನದಿ ಬದುಕು ಹೊರಹೊಮ್ಮಲಿ
ನವನವೋಲ್ಲಾಸ ತರಲಿ ದಿನದಿನವು
ಸಂಕ್ರಾಂತಿಯ ಸವಿಯನರಸುತ
ಮುಂಬರುವ ಹಬ್ಬಗಳ ಕರೆಯೋಣ
ವರ್ಷವಿಡೀ ಸುಖಸಮೃದ್ದಿ ಬಾಳಲಿ ತರಲಿ
ಎನುತ ದೇವರಲಿ ಪ್ರಾರ್ಥಿಸೋಣ
ಚಳಿಯ ಬಿಡಿಸುತ ಎಳೆ ಬಿಸಿಲು
ಶಿವರಾತ್ರಿಗೆ ಶಿವಶಿವ ಎನಿರೆನುತ
ಬೇಸಗೆಯ ಕರೆತರುವ ಸಂಕ್ರಾಂತಿ
ಎಲ್ಲ ಕಾಲಕು ಹೊಂದಿಕೆಯಿರಲೆನುತ
ಬದುಕಲು ಕಲಿಸುವ ಸಂಕ್ರಾಂತಿ
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ,ಶಿಂದೋಗಿಕ್ರಾಸ್,ಮುನವಳ್ಳಿ-೫೯೧೧೧೭
ತಾಲೂಕ;ಸವದತ್ತಿ ಜಿಲ್ಲೆ;ಬೆಳಗಾವಿ
೮೯೭೧೧೧೭೪೪೨ ೯೪೪೯೫೧೮೪೦
ಮಕರ ಸಂಕ್ರಾಂತಿ
ಸೂರ್ಯನ ಪರಿಭ್ರಮಣದೊಳು
ಭೂತಾಯಿಯ ಮಡಿಲು
ನವಕಾಂತಿಯ ಯುಗವನು ಕಾಣುತಿರೆ
ಋತು ಚಕ್ರದೊಳು ವಸಂತನ ಆಗಮನ
ನವಕಳೆಯೊಳು ಪ್ರಕೃತಿ
ಸಂಕ್ರಾಂತಿಯ ಆಗಮನ
ಎಳ್ಳು-ಬೆಲ್ಲವ ಮೆದ್ದು
ಒಳ್ಳೆಯ ನುಡಿಗಳನಾಡುತ
ಸಕಲರೂ ಕೂಡಿ
ಸಡಗರದಿ ದಿನವನು ಕಳೆಯೋಣ
ವರ್ಷವಿಡೀ ಬದುಕಲಿ ಸುಖ-ಶಾಂತಿ
ನೆಮ್ಮದಿಯ ಬಯಸುತ
ಬದುಕಿನ ಸಂತಸ ಮೆರೆಯೋಣ
ಹೊಸದಿಗಂತದಿ ಮೂಡಲಿ ಆಶಾಭಾವ
ಹೊಸತನದಿ ಬದುಕು ಹೊರಹೊಮ್ಮಲಿ
ನವನವೋಲ್ಲಾಸ ತರಲಿ ದಿನದಿನವು
ಸಂಕ್ರಾಂತಿಯ ಸವಿಯನರಸುತ
ಮುಂಬರುವ ಹಬ್ಬಗಳ ಕರೆಯೋಣ
ವರ್ಷವಿಡೀ ಸುಖಸಮೃದ್ದಿ ಬಾಳಲಿ ತರಲಿ
ಎನುತ ದೇವರಲಿ ಪ್ರಾರ್ಥಿಸೋಣ
ಚಳಿಯ ಬಿಡಿಸುತ ಎಳೆ ಬಿಸಿಲು
ಶಿವರಾತ್ರಿಗೆ ಶಿವಶಿವ ಎನಿರೆನುತ
ಬೇಸಗೆಯ ಕರೆತರುವ ಸಂಕ್ರಾಂತಿ
ಎಲ್ಲ ಕಾಲಕು ಹೊಂದಿಕೆಯಿರಲೆನುತ
ಬದುಕಲು ಕಲಿಸುವ ಸಂಕ್ರಾಂತಿ
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ,ಶಿಂದೋಗಿಕ್ರಾಸ್,ಮುನವಳ್ಳಿ-೫೯೧೧೧೭
ತಾಲೂಕ;ಸವದತ್ತಿ ಜಿಲ್ಲೆ;ಬೆಳಗಾವಿ
೮೯೭೧೧೧೭೪೪೨ ೯೪೪೯೫೧೮೪೦