ಲೇಖನ :- ಚಲನಚಿತ್ರ ಮುಖಾಂತರ ದಾಸರ ಚರಿತ್ರೆ ಸಾರಿದರು ಮಧುಸೂದನ ಹವಾಲ್ದಾರರು
ಹರಿದಾಸರು ಎಂದರೆ ಎಲ್ಲವನ್ನು ತ್ಯಾಗ ಮಾಡಿ
ಭಗವಂತನ ಸಂಕೀರ್ತನೆಗಳ ಮುಖಾಂತರ ಸಾಮಾಜಿಕವಾಗಿ ಹರಿಭಕ್ತಿಯನ್ನು ಬಿತ್ತಿದ್ದಾರೆ.
ಹರಿದಾಸರು ದೇವರ ಮತ್ತು ನಮ್ಮಂತಹ ಸಾಮಾನ್ಯರ ನಡುವೆ ಸೇತುವೆಯಾಗಿದ್ದಾರೆ. ಏಕೆಂದರೆ ಜನರ ಮನಸ್ಸಿನಲ್ಲಿ ಭಗವಂತನ ಮೇಲಿನ ಭಕ್ತಿ ಪ್ರಚುರವಾಗಿ ಬೆಳೆಯಲು ಧೃಡವಾಗಿ ನಂಬಿಕೆ ವಿಶ್ವಾಸದಿಂದ ನಡೆಯಲು ಹರಿದಾಸರ ಕೀರ್ತನಗಳೇ ನಮಗೆ ದಾರಿದೀಪವಾಗಿದೆ.
ಇಂತಹ ಹಲವಾರು ದಾಸವರಣ್ಯೆರ ಜೀವನ ಚರಿತ್ರೆಯನ್ನು ಚಲನಚಿತ್ರದ ಮುಖಾಂತರವಾಗಿ ಮಾರ್ಮಿಕವಾಗಿ ಮನ ಮಿಡಿಯುವಂತೆ ಮನ ಸೂರೆಗೊಳ್ಳುವಂತೆ
ಜನಮಾನಸ ತಲುಪುವ೦ತೆ ಮಾಡುತ್ತಿರುವ
ಶ್ರೀ ಮಧುಸೂಧನ ಹವಾಲ್ದಾರ ಮತ್ತು ಅವರ ಸಮೂಹ ಕಾರ್ಯ ಶಾಘ್ಲನೀಯವಾಗಿದೆ.
ಒಂದು ಪುಸ್ತಕ ಓದಿದರೆ ಓದುಗ ಒಬ್ಬನಿಗೆ ತಿಳಿದು ಆ ಓದುಗನಿಂದ ಇನ್ನಷ್ಟು ಜನರಿಗೆ ವಿಷಯ ತಲಪಬಹುದು.
ಆದರೆ ಒಂದು ಚಲನಚಿತ್ರ ಏಕಕಾಲದಲ್ಲಿ ಹಲವಾರು ಊರುಗಳಲ್ಲಿ ಸಹಸ್ರ ಜನಮಾನಸಕ್ಕೆ ತಲುಪುವುದು ಎಂದರೆ ಇದು ಅಸಾಮಾನ್ಯ ಕೆಲಸವಲ್ಲ. ಏಕೆಂದರೆ
ಚಲನ ಚಿತ್ರವಾಗಲಿ ಅಥವಾ ಚಲನ ಚಿತ್ರ ರಂಗಮಂದಿರ ಏಳುಬೀಳು ಸರ್ವಸಾಮಾನ್ಯ ಎಲ್ಲ ಜನರಿಗೆ ಗೊತ್ತಿರುವ ವಿಷಯ.
ಇಂತಹ ಆಧುನಿಕ ಯುಗದಲ್ಲಿ ಯುವಜನತೆ ಹಾಗೂ ಎಲ್ಲ ವಯೋಮಾನದ ಎಲ್ಲ ಜನರಿಗೂ ಮನಮುಟ್ಟುವಂತೆ ಚಿತ್ರ ನಿರ್ಮಿಸುವುದು ಎಂದರೆ, ಇದು ಒಂದು ತರಹ
ಕೂಸಿಗೆ ಜನ್ಮವಿತ್ತಂತೆ, ಇಂತಹ ಸ್ಪರ್ಧಾತ್ಮಕ ಚಲನಚಿತ್ರಗಳ ನಡುವೆಯೂ ಇಂತಹ ಧಾರ್ಮಿಕ, ವಿಷಯವುಳ್ಳ ಹರಿದಾಸರ ಚಲನಚಿತ್ರ ಮಾಡುವುದು ಎಂದರೆ ಅಸಾಮಾನ್ಯ. ಯಾವ ಫಲಫೇಕ್ಷೆ ಇಲ್ಲದೇ ಚಿತ್ರ ನಿರ್ಮಿಸಿದ ನಿರ್ಮಾಪಕರು, ನಿರ್ದೇಶಕರು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲ ವೃ೦ದವು ಅಭಿನಂದನಾರ್ಹವಾಗಿವೆ.
ಸಮಾಜದಲ್ಲಿ ಒಂದು ಹೊಸ ವಿಷಯದ ಬದಲಾವಣೆ ಬರಬೇಕಾದರೆ, ಹಲವು ದಿನಗಳು ಬೇಕಾಗುತ್ತದೆ. ಹಾಗೇ ಶ್ರೀ ಮಧುಸೂದನ ಹವಾಲ್ದಾರ ಅವರು ಇತ್ತೀಚಿನ ಮೂರು ವರುಷಗಳಲ್ಲಿ ಹರಿದಾಸರ ಚಲನಚಿತ್ರ ನಿರ್ಮಿಸಿ ಗೆದ್ದಿದ್ದಾರೆ.
ಶ್ರೀ ಜಗನ್ನಾಥ ದಾಸರು, ಶ್ರೀ ಪ್ರಸನ್ನ ವೆಂಕಟ ದಾಸರು, ಶ್ರೀ ವಿಜಯ ದಾಸರು ಈ ಎಲ್ಲ ಚಲನಚಿತ್ರ ನೋಡಿದ ಎಲ್ಲ ಪ್ರೇಕ್ಷಕ ವರ್ಗದ ಮನದ ಮಾತುಗಳು ಏನೆಂದರೆ ಭಕ್ತಿ, ಭಾವ ಹಾಗೂ ಮನಸ್ಸಿಗೆ ಹತ್ತಿರವಾಗುವಂತೆ ದೃಶ್ಯ ಸೆರೆಹಿಡಿದ ಕ್ಷಣಗಳು, ಕೆಲವೊಮ್ಮೆ ಎಲ್ಲರ ಕಣ್ಣಾಲಿಗಳಲ್ಲಿ ತೇವ ಆಗಿದೆ ಹೀಗೆ ಎಲ್ಲರೂ *ಬಾಳ ಚಂದತಗದಾರ* ಅಂತ ಅನ್ನುತ್ತ ಹಾಡುಗಳು ಬಂದಾಗ ಕೈ ತಟ್ಟುತ್ತಾ, ಕುಣಿಯುತ್ತಾ ಭಾವ ಪರವಷತೆಯು ಆಗಿದೆ.
ಈ ಮೊಬೈಲ್ ಮಾಯಾಜಾಲ ಬಿಟ್ಟು ಸಣ್ಣವರಿಂದ ಹಿಡಿದು ಹಿರಿಯರು ಮನೆಮಂದಿ ಎಲ್ಲರೂ ಒಂದಡೆ ಕುಳಿತು ನೋಡುವ ಅದೃಷ್ಟ ಒದಗಿ ಬಂದಿದೆ.
ಎಲ್ಲರೂ ನೋಡಿ ಪ್ರೋತ್ಸಾಹಿಸಿ,
ಹೀಗೆ ಮುಂದಿನ ಯುವ ಜನತೆಯಲ್ಲಿ ಹರಿದಾಸ ಪರಂಪರೆಯು ತಿಳಿಯುವ ಹಾಗೇ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುವ ಈ ನಿಮ್ಮ ಕಾರ್ಯ ಹೀಗೆ ಮುಂದೆವರೆದು ಹರಿವಾಯು ಗುರುಗಳ ಅನುಗ್ರಹ ಸದಾ ನಿಮ್ಮ ಮತ್ತು ನಿಮ್ಮ ತಂಡದ ಮೇಲೆ ಇರಲಿ ಎಂಬ ಸಮಸ್ತ ಜನತೆಯ ಪರವಾಗಿ ಅಭಿನಂದನೆಗಳು, ಅಭಿವoದನೆಗಳು.
✍️ *ಪ್ರಿಯಾ ಪ್ರಾಣೇಶ ಹರಿದಾಸ*
*ವಿಜಯಪುರ(ಕಾಖಂಡಕಿ)*