ಶಿಕ್ಷಕಿ ಸುನಂದಾ ಜಾಲವಾದಿ ಬಿಜಿವಿಎಸ್ ಬಾಗಲಕೋಟ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ
ಬಾಗಲಕೋಟ,
ಭಾರತ ಜ್ಞಾನ ವಿಜ್ಞಾನ ಸಮಿತಿಯ ಬಾಗಲಕೋಟ ಜಿಲ್ಲೆಯ ಜಿಲ್ಲಾ ಅಧ್ಯಕ್ಷರಾಗಿ ಬಾಗಲಕೋಟೆಯ ಕ್ರಿಯಾಶೀಲ ಶಿಕ್ಷಕಿ ಸುನಂದಾ ಜಾಲವಾದಿಯವರನ್ನು ಬಾಗಲಕೋಟೆಯಲ್ಲಿ ಜರುಗಿದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಘಟಕದ ಸದಸ್ಯ ಎಲ್ ಐ ಲಕ್ಕಮ್ಮನವರ ತಿಳಿಸಿದರು, ಮಕ್ಕಳ ವಿಜ್ಞಾನ ಹಬ್ಬ ಹಾಗೂ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದಂತಹ ಹತ್ತು ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಯಶಸ್ವಿಯಾಗಿ ಕಾರ್ಯಕ್ರಮ ರೂಪಿಸುರುವ ಸುನಂದಾ ಜಾಲವಾದಿ, ಒಳ್ಳೆಯ ಗಾಯಕಿ, ಚೇತನ ಫೌಂಡೇಶನ್ ಹುಬ್ಬಳ್ಳಿ ಇವರಿಂದ ಶಿಕ್ಷಕರತ್ನ , ಪುನೀತ್ ಪ್ರಶಸ್ತಿ, ಖ್ಯಾತ ಗಾಯಕಿ ಪ್ರಶಸ್ತಿ ಪಡೆದಿರುವ ಇವರು ಜಿಲ್ಲೆಯ ಎಲ್ಲಾ ತಾಲೂಕಿನ ಪರಿಚಯ ಇವರಿಗಿದೆ ಎಂದು ಲಕ್ಕಮ್ಮನವರ ತಿಳಿಸಿದರು. ಜೂನ ತಿಂಗಳಿನಲ್ಲಿ ಜರುಗಲಿರುವ ಮಕ್ಕಳ ಸಾಹಿತ್ಯ ಸಂಬ್ರಮವನ್ನು ಬಾಗಲಕೋಟ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ಸಂಘಟಿಸಲು, ಜಿಲ್ಲೆಯ ಕ್ರಿಯಾಶೀಲ ಶಿಕ್ಷಕರಾದ ಡಾ,ಕಾಡೆ ಎಸ್ ಆರ್ ಎಮ್ಮಿಮಠ ಬಿಇಒ ಎಂ ಎಸ್ ಬಡದಾನಿ ಮುಂತಾದವರ ಸಲಹೆ ಪಡೆದು, ಬಿಜಿವಿಎಸ್ ಸಂಘಟನೆಯನ್ನು ಪ್ರಗತಿಪತದತ್ತ ಕೊಂಡೊಯ್ಯಬೇಕು, ಇದು ಶಿಕ್ಷಕರ ಸಂಘಟನೆಯಲ್ಲ, ಇದೊಂದು ಸರ್ವಜನಾಂಗದ ವಿಜ್ಞಾನ ಆಸಕ್ತರ ಸಂಘಟನೆಯಾಗಿದೆ ಎಂದು ಲಕ್ಕಮ್ಮನವರ ತಿಳಿಸಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಭಾಗಲಕೋಟೆಯ ಜಿಲ್ಲಾ ಅಧ್ಯಕ್ಷರಾಗಿ ಸುನಂದಾ ಜಾಲವಾದಿ ಪ್ರಧಾನ ಕಾರ್ಯದರ್ಶಿ ಯಾಗಿ ಜಿಲ್ಲೆಯ ಅತ್ಯಂತ ಕ್ರಿಯಾಶೀಲ ಶಿಕ್ಷಕಿ ನಿರ್ಮಲಾ ಪತ್ತಾರ
ಉಪಾಧ್ಯಕ್ಷರು:
ಡಾ:ವ್ಹಿ.ಆರ್.ಯಡಹಳ್ಳಿ
ಪ್ರಿಯಾ ಕಟ್ಟಿ
ಕೋಶಾಧ್ಯಕ್ಷರು: ರೇಣುಕಾ,ಡಿಗ್ಗಿ
ಸಹ ಕಾರ್ಯದರ್ಶಿಗಳು: ಡಾ:ದ್ವಾರಕಾ ಬೆಳ್ಳಣ್ಣವರ
ಕೀರ್ತಿ ಕಟ್ಟಿಮನಿ
ಜಿಲ್ಲಾ ಪದಾಧಿಕಾರಿಗಳು: ಪಾಂಡುರಂಗ ಸಣ್ಣಪ್ಪನವರ
ಎಮ್ ಎಸ್ ಅಳ್ಳಿಮಟ್ಟಿ
ಎಚ್ ಎನ್ ಬಿರಾದಾರ
ರಮೇಶ ಭಜಂತ್ರಿ
ಎಸ್ ಎಚ್ ಕಂದಗಲ್ ರಾಹುಲ್ ಚವ್ಹಾಣ
ಅಶೋಕ ಬಳ್ಳಾ ಹಣಮಂತಗೌಡ ಬಳಗಾನೂರ
ಬಸಮ್ಮ ನಾಟಿಕಾರ
ಕಸ್ತೂರಿ ಪತ್ತಾರ ಸಂಗಮೇಶ ಅರಕೇರಿ
ಪರಶುರಾಮ ಲಮಾಣಿ.
ಆಯ್ಕೆಯಾಗಿದ್ದು ಒಟ್ಟು 102 ಜನ ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಬಿಜಿವಿಎಸ್ ಸದಸ್ಯತ್ವವನ್ನು ಪಡೆದಿದ್ದಾರೆ ಎಂದು ಜಿಲ್ಲಾ ಅಧ್ಯಕ್ಷರಾದ ಸುನಂದಾ ಜಾಲವಾದಿ, ಪ್ರಧಾನ ಕಾರ್ಯದರ್ಶಿ ನಿರ್ಮಲಾ ಪತ್ತಾರ ಪ್ರಕಟಣೆಯಲ್ಲಿ ತಿಳಿಸಿದರು.