ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿದ ಸಿಸಿ ಟಿವಿ ಕ್ಯಾಮೆರ ಗಳನ್ನು ಕಿತ್ತು ಹಾಳುಮಾಡಿದ ಕಿಡಿಗೇಡಿಗಳನ್ನು ವಾಡಿ ಪೊಲೀಸ್ ರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ..
ವಾಡಿ:
ಪಟ್ಟಣದ ನಿವಾಸಿಗಳಾದ ವಿಜಯ ಪವಾರ, ರೋಷನ್ ಬಾಬು ಪವಾರ್, ಕರಣ ಚೌವ್ಹಾಣ್, ರೋಹಿತ ರಾಥೋಡ್, ಸಚಿನ್ ಬಂದಿತ ಆರೋಪಿಗಳಾಗಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪಾರದರ್ಶಕವಾಗಿ ನಡೆಯುವಂತೆ ಮಾಡಲು ಜಿಲ್ಲಾಡಳಿತ ಎಲ್ಲಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ವೇಬ್ ಕಾಸ್ಟಿಂಗ್ ಮಾಡಲು ಸೂಚಿಸಿತು,
ಅದರಂತೆ ಕೋಂಚೂರಿನ ಏಕಲವ್ಯ ಮಾದರಿ ವಸತಿ ಶಾಲೆಯ ಪರೀಕ್ಷಾ ಕೋಣೆ ಯಲ್ಲಿಸಿ ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು,
ಆದರೆ ಮಾ. 25ರಂದು ಮೋದಲ ದಿನದ ಪರೀಕ್ಷೆಗೆ ವಿದ್ಯಾರ್ಥಿ ಗಳೊಂದಿಗೆ ಪರಿಕ್ಷಾ ಕೋಣೆಯೊಳಗೆ ಬಂದ ಕಿಡಿಗೇಡಿಗಳು ಸಿಸಿ ಕ್ಯಾಮೆರಾಗಳನ್ನು ಕಿತ್ತು ಹಾಕಿ ದ್ದು ಅಲ್ಲದೆ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಹಾಕಿದ ಡೆಸ್ಕ್ ಗಳನ್ನು ಅದಲು ಬದಲು ಮಾಡಿ ಪರಾರಿಯಾಗಿದ್ದರು.ಈ ಕುರಿತು ಮಾ.27ರಂದು ಪರಿಕ್ಷಾ ಕೇಂದ್ರದ ಉಸ್ತುವಾರಿ ರಿಯಾಜ್ ಅಹ್ಮದ ಅವರು ವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಪ್ರಕರಣದ ಕೈಗೆತ್ತಿಕೊಂಡ ತನಿಖೆಯನ್ನು ಪಿಎಸ್ಐ ಅವರ ಮಂಜುನಾಥ ರೇಡ್ಡಿ ನೇತ್ರತ್ವದಲ್ಲಿ ಕಾರ್ಯಪ್ರವೃತರಾದ ತಂಡ ಸಿಸಿ ಟಿವಿ ದೃಶ್ಯಾವಳಿಗಳಿಗಳನ್ನು ಪರಿಶೀಲಿಸಿ ಸಂಶಯಾಸ್ಪದ ಆರೋಪಿ ಗಳನ್ನು ತೀವ್ರ ವಿಚಾರಣೆಗೊಳಪಡಿಸಿ 5 ಜನ ಆರೋಪಿಗಳನ್ನು ಬಂದಿ ಸಿದ್ದಾರೆ.
ನಂತರ ಆರೋಪಿತರನ್ನು ನ್ಯಾ ಯಾಲಯಕ್ಕೆ ಹಾಜರುಪಡಿ ಸಲಾಗಿದೆ ಎಂದು ಪಿಎಸ್ಐ ಮಂಜುನಾಥ ರೇಡ್ಡಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಎಸ್ಐ ಚನ್ನಮಲ್ಲಪ್ಪ ಗೌಡ, ಪೇದೆಗಳಾದ ಸಿದ್ರಾಮ ರೇಡ್ಡಿ, ಕಲಕ್ಷ್ಮಣ ತಳಕೇರಿ, ರವಿ, ಆರಿಫ್ ಸೇರಿದಂತೆ ಇತರರು ಇದ್ದರು.