ಪತಿಯ ಸಹಕಾರದಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರದ ಬೆಳಕು ಹರಿಸಿದ ಡಾ, ವೀಣಾ ಟಿ.
ಬೆಂಗಳೂರು ನಗರ ಜಿಲ್ಲೆಯ ತಾವರೆಕೆರೆ ಹೋಬಳಿಯ ಲಕ್ಷ್ಮೀಪುರದ ಶಾಲೆಯ ಕನ್ನಡ ಶಿಕ್ಷಕಿ ಡಾ, ವೀಣಾ ಟಿ ಇವರು ಈ ಶಾಲೆಗೆ ಶಿಕ್ಷಕಿಯಾಗಿ 2003ರಲ್ಲಿ ಸೇವೆ ಆರಂಭಿಸಿದರು, ಆಗ ಈ ಶಾಲೆಯಲ್ಲಿ ಕೇವಲ ಒಂಬತ್ತು ಮಕ್ಕಳು, ಯಾವುದೇ ಭೌತಿಕ ಸೌಲಭ್ಯಗಳು ಇರಲಿಲ್ಲ, ಈ ಗ್ರಾಮಕ್ಕೆ ಬಸ್ ಸೌಲಭ್ಯವೂ ಇರಲಿಲ್ಲ, ಇವರು ಹೇಗಾದರೂ ಮಾಡಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿ,ಈ ಶಾಲೆಯನ್ನು ಉಳಿಸಿ ಬೆಳೆಸಬೇಕು ಎಂಬ ಛಲದಿಂದ ತಾವು ವಾಸವಿರುವ ಊರು ತಾವರೆಕೆರೆ ಗ್ರಾಮದಿಂದ, ಆ ಗ್ರಾಮದಲ್ಲಿ ಉತ್ತರ ಕರ್ನಾಟಕ ಮತ್ತು ಇತರೇ ಭಾಗಗಳಿಂದ ದುಡಿಯಲು ಬಂದ ಕೃಷಿ ಕೂಲಿ ಕಾರ್ಮಿಕರ ಮಕ್ಕಳನ್ನು ಗುರುತಿಸಿ, ಶಿಕ್ಷಣದಿಂದ ವಂಚಿತರಾದ, ಆ ಮಕ್ಕಳಿಗೆ ಲಕ್ಷ್ಮೀಪುರದ ಶಾಲೆಗೆ ದಾಖಲು ಮಾಡಿ, ಅಕ್ಷರದ ಬೆಳಕನ್ನು ನೀಡಿದ್ದಾರೆ,ಈ ಶಿಕ್ಷಕಿ ವೀಣಾ ಇವರು ಮೂಲತಃ ತಾವರೆಕರೆ ಗ್ರಾಮದಲ್ಲಿ ಲೇಟ್ ಉಗ್ರ ನಾರಾಯಣ ಹಾಗೂ ಗಿರಿಜಮ್ಮನವರ ಎರಡನೇ ಮಗಳಾಗಿ 22 ಜುಲೈ 1978ರಂದು ಜನಿಸಿದರು,
ಇವರ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಾವರೆಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಡೆದು ಪ್ರೌಢಶಾಲಾ ಶಿಕ್ಷಣವನ್ನು ಅನುದಾನಿತ ಶಾಲೆ, ಪಂಚಮುಖಿಗಣಪತಿ ಪ್ರೌಢ ಶಾಲೆಯಲ್ಲಿ ಪಡೆದರು ಕಾಲೇಜು ಶಿಕ್ಷಣವನ್ನು ಬೆಂಗಳೂರಿನ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.
ಜೊತೆಗೆ ಶಿಕ್ಷಕ ತರಬೇತಿಯನ್ನು ಮಾರ್ಕೆಟಿನ SLN ಸಂಸ್ಥೆಯಲ್ಲಿ ಪಡೆದರು1999ನವೆಂಬರ್ 10ರಂದು ಈ ಪವಿತ್ರವಾದ ವೃತ್ತಿಗೆ ಶಿಕ್ಷಕಿಯಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬ್ಯಾಲಾಳು ಶಾಲೆಗೆ ಸೇವೆಗೆ ಸೇರಿ ಕರ್ತವ್ಯವನ್ನು ನಿರ್ವಹಿಸಿ 2003 ಡಿಸೆಂಬರ್ ತಿಂಗಳಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಲಕ್ಷ್ಮಿಪುರ ಶಾಲೆಗೆ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಿ 20 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ದೇಶದ ಭವಿಷ್ಯ ತರಗತಿ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ ಎಂಬ ರಾಧಾಕೃಷ್ಣನ್ ರವರ ಮಾತು ಒಂದು ದೇಶದ ಪ್ರಗತಿ ಆದೇಶದ ಶಿಕ್ಷಣ ವ್ಯವಸ್ಥೆ ಮೇಲೆ ನಿಂತಿರುತ್ತದೆ ಎಂಬುದನ್ನು ಸೂಚಿಸುತ್ತದೆ ಈ ನಿಟ್ಟಿನಲ್ಲಿ ಶಾಲೆಗಳು ಮತ್ತು ಶಿಕ್ಷಕರ ಪಾತ್ರ ಗಣನೀಯವಾದದ್ದು ಮಕ್ಕಳು ಮನಕುಲದ ಆಶಾ ಜ್ಯೋತಿಗಳು ಮನೆ ಅಂಗಳ ಬೆಳಗುವ ಮಂಗಳ ದ್ವೀಪಗಳು ಭವ್ಯ ಭವಿಷ್ಯನ ಭಾವಿ ಪ್ರಜೆಗಳು ಬದುಕಿನ ಭವ್ಯ ಚಿತ್ತಾರದಲ್ಲಿ ನಿರ್ಮಿಸುವ ವರು teacher is a one profession is creators all other professions ಈ ಹೇಳಿಕೆಯು ಶಿಕ್ಷಣದ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಅದಕ್ಕಾಗಿ ಒಂದರಿಂದ 14ನೇ ವರ್ಷದ ವರೆಗಿನ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ನಿಯಮ ಜಾರಿಯಲ್ಲಿದೆ ಆದರೂ ಇಂದು ಖಾಸಗಿ ಶಾಲೆಗಳ ಪ್ರಭಾವದಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗುತ್ತಿರುವುದು ಆತಂಕದ ವಿಚಾರ.
ಇಂತಹ ಸವಾಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಶಾಲೆಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರ ಅಭಿವೃದ್ಧಿ ಶ್ರಮಿಸುತ್ತಿರುವುದು ಶಿಕ್ಷಕರ ಪೈಕಿ ಒಬ್ಬರಾದ ವೀಣಾ ರವರು ಲಕ್ಷ್ಮಿಪುರವು 35ರ 40 ಕುಟುಂಬಗಳಿರುವ ಒಂದು ಪುಟ್ಟ ಗ್ರಾಮ ಇದು ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಪುಟ್ಟ ಗ್ರಾಮವಾಗಿದ್ದು ಈ ಶಾಲೆಗೆ ಶಿಕ್ಷಕಿ ಬಂದಾಗ ಕೇವಲ 9 ಮಕ್ಕಳು ಇವರ ಸೇವಾ ಬದ್ಧತೆ ಆಸಕ್ತಿ ಮತ್ತು ಇವರು ರೂಪಿಸಿದ ಯೋಜನೆಗಳು. ಕೈಗೊಂಡ ಚಟುವಟಿಕೆಗಳು, ಇಂದು ಶಾಲೆಯಲ್ಲಿ 30 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ, ಇದಕ್ಕಾಗಿ ಶಿಕ್ಷಕಿ ರೂಪಿಸಿದ ಚಟುವಟಿಕೆಗಳು ಗಮನಾರ್ಹವಾದದ್ದು, ತಾನು ವಾಸಿಸುತ್ತಿರುವ ಗ್ರಾಮವಾದ ತಾವರೆಕೆರೆಯಿಂದ ತಮ್ಮ ಪತಿ ನಟೇಶರವರ ಸಹಕಾರದಿಂದ ಸ್ವತಃ ವಾಹನವನ್ನು ಖರೀದಿಸಿ, ತನ್ನ ಶಾಲೆಗೆ ತಮ್ಮ ಜವಾಬ್ದಾರಿಯಿಂದ 20 ಮಕ್ಕಳನ್ನು ನಿತ್ಯ ಕರೆದುಕೊಂಡು ಹೋಗಿ ಬರುತ್ತಿದ್ದಾರೆ. ಇದರಲ್ಲಿ ಬಹುತೇಕ ಮಕ್ಕಳು ವಲಸಿಗಮಕ್ಕಳು ಶಾಲೆಗೆ ದಾಖಲಾಗದ ಹಾಗೂ ಶಾಲೆ ಬಿಟ್ಟ ಮಕ್ಕಳು ಆಗಿರುತ್ತಾರೆ ಎಂಬುದು ಮುಖ್ಯ ಸಂಗತಿಯಾಗಿದೆ ಎಲ್ಲರನ್ನೂ ಶಿಕ್ಷಣದ ಮುಖ್ಯ ವಾಹಿನಿಗೆ ತರಬಲ್ಲ ಶಿಕ್ಷಕಿಯ ಈ ನಡೆ ಅಭಿನಂದನಾರ್ಹ ನಂತರ ಶಿಕ್ಷಕಿಯ ತನ್ನ ಪತಿರಾಯರ ಸಹಕಾರದಿಂದ ತಮ್ಮ ಶಾಲೆಗೆ ಈಗ ಶಾಲಾ ಸಮಯಕ್ಕೆ ಸರಿಯಾಗಿ ಬಿಎಂಟಿಸಿ ಬಸ್ಸಿನ ವ್ಯವಸ್ಥೆಮಾಡಿಸಿಕೊಂಡಿರುವದು ತಮ್ಮ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಯಾಗಿದೆ ಕನ್ನಡಿಯಾಗಿದೆ .ಈ ವ್ಯವಸ್ಥೆಗೆ ಸಂಪೂರ್ಣ ಸಹಕರಿಸಿದರು, N K ಬಸವರಾಜು ರವರು ಬಿಎಂಟಿಸಿಯಲ್ಲಿ ಉನ್ನತ ಅಧಿಕಾರಿಯಾಗಿರುವವರು. ನಾವಿನ್ಯಪೂರ್ಣ ಬೋಧನಾ ವಿಧಾನಗಳು ಕಲಿಕೋ ಉಪಕರಣ ಮತ್ತು ತಂತ್ರಜ್ಞಾನ ಬಳಸಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಶ್ರಮಿಸುತ್ತಿದ್ದಾರೆ ಮಕ್ಕಳೇ ಪಠ್ಯ ವಿಷಯಗಳ ಜೊತೆಗೆ ಮಾನವೀಯ ಮೌಲ್ಯಗಳನ್ನು ಬಿತ್ತಲು ಹಲವಾರು ಚಟುವಟಿಕೆಗಳನ್ನು ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.
ಆ ಸತ್ಯ ಸಾಯಿ ಅನ್ನಪೂರ್ಣೇಶ್ವರಿ ಟ್ರಸ್ಟ್ ಹಾಗೂ ನಾರಾಯಣ health ಸೆಂಟರ್ ವತಿಯಿಂದ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಮಾಡಿಸಿದ್ದಾರೆ ಅಷ್ಟೇ ಅಲ್ಲದೆ ಹಿಂದುಳಿದ ಪುಟ್ಟ ಗ್ರಾಮವಾಗಿದ್ದರೂ ಸಹ ತನ್ನ ಹಲವಾರುಕಾರ್ಯಕ್ರಮಗಳನ್ನು ಮಕ್ಕಳಿಗಾಗಿ, ಆಯೋಜಿಸಿ ಮಕ್ಕಳನ್ನು ಪರಿಸರ ಚಟುವಟಿಕೆಗಳಲ್ಲಿ ತೊಡಗಿಸಿರುವುದು, ಆಶಾದಾಯಕ ಬೆಳವಣಿಗೆಯಾಗಿದೆ. ಸಮುದಾಯ ಶಾಲೆಗೆ ತಳಪಾಯ ಎಂಬ ನುಡಿ ಶಾಲೆಯ ಪ್ರಗತಿಯಲ್ಲಿ ಸಮುದಾಯದ ಮತ್ತು ನೆರೆಯವರ ಹೊಣೆಗಾರಿಕೆ ಪ್ರತಿನಿಧಿಸುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಶಿಕ್ಷಕಿ ದಾನಿಗಳಿಂದ ಶಾಲೆಗೆ ಬೇಕಾದ ಪೀಠೋಪಕರಣಗಳು ಸಮವಸ್ತ್ರ ಕ್ರೀಡಾ ಸಾಮಗ್ರಿಗಳು ಬೇಕಾದಂತಹ ಡ್ರೆಸ್ ಗಳು ಹೇಗೆ ಕಂಪ್ಯೂಟರ್ ಪ್ರೊಜೆಕ್ಟರ್ laptop ಗಳನ್ನು ಸಂಗ್ರಹಿಸಿ ಭೌತಿಕವಾಗಿ ಹಾಗೂ ಶೈಕ್ಷಣಿಕವಾಗಿ ಪ್ರಗತಿಯತ್ತ ಮುನ್ನಡೆಸುತ್ತಿದ್ದಾರೆ ಶಿಕ್ಷಕರ ಬಗ್ಗೆ ಅಲ್ಲೊಂದು ಇಲ್ಲೊಂದು ಅಪಸ್ವರಗಳು ಕೇಳಿಬರುತ್ತಿರುವ ಸಂದರ್ಭಗಳಲ್ಲಿ ನಮ್ಮ ನಡುವೆ ಇಂತಹ ಪ್ರಾಮಾಣಿಕ ಶಿಕ್ಷಕರು ಇದ್ದಾರೆ ಎಂಬುದು ಹರ್ಷದಾಯಕವಾದ ಸಂಗತಿ ಇವರ ಈ ಸೇವೆಯನ್ನು ಪರಿಗಣಿಸಿ, ಶಿಕ್ಷಣ ಇಲಾಖೆಯಿಂದ ತಾಲೂಕು ಹಾಗೂ ಜಿಲ್ಲಾ ಉತ್ತಮ ಶಿಕ್ಷಕರು ಪ್ರಶಸ್ತಿಯೂ ಸಹ ದೊರೆತಿದೆ. ಹೆಣ್ಣು ಜಗದ ಕಣ್ಣು ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ ಅಕ್ಷರ ತಾಯಿ ಲೂಸಿ ಸಾಲ್ದಾನ ಸಂಸ್ಥೆಯಿಂದ ಶಿಕ್ಷಕರತ್ನ ಪ್ರಶಸ್ತಿ ದೊರೆತಿದೆ ಜನಶ್ರೀ ಫೌಂಡೇಶನ್ ವತಿಯಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಈ ಬಾರಿ ಪುನೀತ್ ಪ್ರಶಸ್ತಿ ಸಂಚಲನ ಚಲನಚಿತ್ರೋತ್ಸವ ವತಿಯಿಂದ ದೊರೆತಿದೆ ಬೆಂಗಳೂರಿನ ಬೆಂಗಳೂರು ನಗರ ವಾಯು ನಿಯಂತ್ರಣ ಮಂಡಳಿಯವರಿಂದ ಹಸಿರು ಶಾಲಾ ಪ್ರಶಸ್ತಿ ದೊರೆತಿದೆ ಇಂಟರ್ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಯೂನಿವರ್ಸಿಟಿ ಇವರ ವತಿಯಿಂದ ಶಿಕ್ಷಣ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.ಪತಿ ಎಸ್ ಕೆ ನಟೇಶ್ ಮಗ ಮುರಳಿಧರ್ N ಮಗನ ವಿದ್ಯಾಭ್ಯಾಸ ಎಂಬಿ ಎ ಮಗಳು, ಲಕ್ಷ್ಮೀಶ್ರೀ ಏನ್ ಪ್ರಥಮ ಪಿಯುಸಿ ಮಗಳು ಕೆಪಿಎಸ್ ಶಾಲೆ ಹೊನ್ನಗನಹಟ್ಟಿ ವ್ಯಾಸಂಗ ಮಾಡಿ 95 ಪ್ರತಿಶತ ಅಂಕಗಳನ್ನು ಪಡೆದಿದ್ದಾಳೆ. ಕನ್ನಡದಲ್ಲಿ 125 ಕ್ಕೆ 125 ಅಂಕವನ್ನು .ಒಟ್ಟಾರೆಯಾಗಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸಹಕರಿಸಿದವರು ಸಹಶಿಕ್ಷಕರು ಗ್ರಾಮಸ್ಥರು ಹಳೆಯ ವಿದ್ಯಾರ್ಥಿಗಳು ಅಕ್ಕಪಕ್ಕದ ಗ್ರಾಮಸ್ಥರು ತಾವರೆಕೆರೆ ಗ್ರಾಮಸ್ಥರು ಕುಟುಂಬ ವರ್ಗದವರು ಸಾರಿಗೆ ಇಲಾಖೆಯವರು ಹಾಗೂ ಸಾರ್ವಜನಿಕರು ಸ್ನೇಹಿತರು ಶಿಕ್ಷಣ ಇಲಾಖೆಯವರ ಸಹಕಾರ ಪ್ರೋತ್ಸಾಹವನ್ನು ನೀಡಿರುತ್ತಾರೆ.. ಈ ಒಂದು ವೃತ್ತಿ ಜೀವನಕ್ಕೆ ಬರಲು ಪ್ರಮುಖ ಕಾರಣಕರ್ತರು ಅವರ ತಾಯಿ ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದಂತಹ, ವೀಣಾ ಬಾಲ್ಯ ವಿವಾಹ ಮಾಡಲು ತಯಾರು ನಡೆಸಿದ್ದರು, ಆದರೆ ತಾಯಿಯ ಹಠದಿಂದ ಶಿಕ್ಷಣವನ್ನು ಪಡೆದರು. ಈ ಒಂದು ಹುದ್ದೆಗೆ ಬರಲು ಹೆಚ್ಚು ಪ್ರೋತ್ಸಾಹ ನೀಡಿದವರು ಅವರ ತಾಯಿ ಹಾಗು ಅವರ ತಂದೆ.ಶಾಲಾ ಅಭಿವೃದ್ಧಿಗಾಗಿ ಪ್ರಮುಖವಾಗಿ ಕ್ರಿಯಾಯೋಜನೆಯನ್ನು ರೂಪಿಸಿಕೊಳ್ಳಲಾಯಿತು ಶಾಲೆ ಸರ್ವತೋಮುಖ, ಅಭಿವೃದ್ಧಿಗಾಗಿ ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಿಕೊಳ್ಳುವುದು, ಭೌತಿಕ ಪರಿಸರ ಉತ್ತಮ ಪರಿಸರ ಕೈಗೊಂಡ ಕ್ರಮಗಳೆಂದರೆ ಪ್ರಥಮವಾಗಿ ಶಾಲೆಯ ಮುಂದೆ ಬಹಳ ಗುಂಡಿಗಳುದಿದ್ದರಿಂದ ಶಾಲೆಯನ್ನು ಸಮತಟ್ಟ ಮಾಡಿಕೊಳ್ಳಲು ಶಾಲೆಗೆ ಗುಂಡಿ ಮುಚ್ಚಲು ಸುಮಾರು 5 ಲೋಡು ಮಣ್ಣನ್ನು ಗಂಗೆನಹಳ್ಳಿ ಗ್ರಾಮದ ವಾಸಿಗಳು ಆದಂತಹ ಲೇಟ್ ರೇಣುಕಪ್ಪನವರು ಮಣ್ಣಿನ ವ್ಯವಸ್ಥೆಯನ್ನು ಮಾಡಿಕೊಟ್ಟರು ಎಸ್ ಎಸ್ ಎ ವತಿಯಿಂದ ನಮ್ಮ ಶಾಲೆಗೆ 2010ರಲ್ಲಿ ಮತ್ತೊಂದು ಕೊಠಡಿ ವ್ಯವಸ್ಥೆಯಾಯಿತು. ಪಂಚಾಯಿತಿ ವತಿಯಿಂದ ಅಡುಗೆ ಕೋಣೆ, ನಿರ್ಮಿಸಲಾಯಿತು. ಶಾಲೆಗೆ ನೀಡುತ್ತಿದ್ದ ನಿರ್ವಹಣಾ ಅನುದಾನಗಳನ್ನು ಕೊಡಿಸಿ ಶಾಲೆಯ ಮುಂದೆ ಆರ್ಚ್ ಜೋಕಾಲಿ ಜಾರುಬಂಡಿ ಮಾಡಿಸಲಾಯಿತು. ಶಾಲಾ ಆವರಣಕ್ಕೆ ಸಿಮೆಂಟ್ ವ್ಯವಸ್ಥೆ ಮಾಡಿಸಲಾಯಿತು. ಶಾಲೆಯಲ್ಲಿರುವ ಪೀಠೋಪಕರಣಗಳ ವ್ಯವಸ್ಥೆಯನ್ನು ದಿಲೀಪ್ ಕುಮಾರ್ ಮಣ್ಣೇ ಅವರು ಸುಮಾರು ಮೂರು ಲಕ್ಷ ಬೆಲೆಬಾಳುವ ಪೀಠೋಪಕರಣಗಳನ್ನು ವ್ಯವಸ್ಥೆ ಮಾಡಿಕೊಟ್ಟರು ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗೆನಳ್ಳಿ ಗ್ರಾಮದಲ್ಲಿ ವಾಸಿಗಳಾದ ಶ್ರೀಯುತ ಮಂಜುನಾಥ್ ರವರು ಶಾಲೆಗೆ ಒಂದು ಕೊಠಡಿಗೆ ಸಿಮೆಂಟ್ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು ಧ್ವಜಸ್ಥಂಭದ ವ್ಯವಸ್ಥೆಯನ್ನು ಮಾಡಿಸಿಕೊಟ್ಟರು ನನ್ನ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶುದ್ಧ ಕುಡಿಯುವ ನೀರಿನ ಯಂತ್ರವನ್ನು ನೀಡಿದರು ರಾಷ್ಟ್ರ ನಾಯಕರ ಹಾಗೂ ಕವಿಗಳ ಆಕರ್ಷಣೀಯವಾದ ಭಾವಚಿತ್ರಗಳ ಫೋಟೋಗಳನ್ನು ಗ್ರಾಮದ ಎಸ್ ಡಿ ಎಂ ಸಿ ಯವರು. ಶಾಲೆಯಲ್ಲಿರುವ ಪ್ರೊಜೆಕ್ಟರ್ ಹಾಗೂ ಲ್ಯಾಪ್ಟಾಪ್ ವ್ಯವಸ್ಥೆಯನ್ನು ತಾವರೆಕೆರೆ ಗ್ರಾಮದ ಸಂತೋಷ್ ಬ್ಯಾಂಕರ್ಸ್ ಮಾಲೀಕರಾದ ನರೇಶ್ ರವರು, ಮಾಡಿಕೊಟ್ಟರು. ಖುಷಿ ಕನ್ಸ್ಟ್ರಕ್ಷನ್ಸ್ ಮಾಲೀಕರಾದ ವೆಂಕಟೇಶ್ ರವರು ಹಾಗೂ ಶಿಕ್ಷಣ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂತಹ ಅಶೋಕ್ ಸಿ ರವರು ನಮ್ಮ ಮಕ್ಕಳಿಗೆ ಟ್ರ್ಯಾಕ್ ಸೂಟ್ ವ್ಯವಸ್ಥೆಯನ್ನು ಮಾಡಿಸಿಕೊಡುತ್ತಾರೆ. ತಾವರೆಕೆರೆ ಗ್ರಾಮದ ಅಯ್ಯಪ್ಪ ಸ್ವಾಮಿ ಬಳಗದ ವತಿಯಿಂದ ನಮ್ಮ ಶಾಲೆಗೆ ಗ್ರೀನ್ ಬೋರ್ಡ್ ವ್ಯವಸ್ಥೆಯನ್ನು ಮಾಡಿಸಿಕೊಟ್ಟಿದ್ದಾರೆ . ಆರ್ ಕೆ ಫೌಂಡೇಶನ್ ವತಿಯಿಂದ ಪ್ರತಿ ವರ್ಷ ಮಕ್ಕಳಿಗೆ ಪುಸ್ತಕಗಳನ್ನು ನೀಡುತ್ತಿದ್ದಾರೆ ಹಾಗೂ ನಲಿ ಕಲಿ ಟೇಬಲ್ ಗಳನ್ನು ನೀಡಿದ್ದಾರೆ ಮಾರುತಿ ಫುಟ್ ವೇರ್ ಮಾಲೀಕರಾದ ಉಮೇಶ್ ರವರು ಗಾಡ್ರೇಜ್ ಬೀರನ್ನು ಶಾಲೆಗೆ ದಾನವಾಗಿ ನೀಡಿದ್ದಾರೆ.ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಎಸ್ ಎಸ್ ಎಲ್ ಸಿ ಓದಿ ನಿಲ್ಲಿಸುವಂತಹ ಮಕ್ಕಳಿಗೆ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಅವರ ತಮ್ಮನವರು ಶಿಕ್ಷಣಕ್ಕೆ ಸಹಾಯ ನೀಡಿ ಶಿಕ್ಷಣವನ್ನು ಮುಂದುವರಿಸಲು ಪ್ರೋತ್ಸಾಹ ನೀಡುತ್ತಿದ್ದಾರೆ ಈ ರೀತಿ ಐದು ಮಕ್ಕಳನ್ನು ಇಲ್ಲಿಯವರೆಗೆ ವ್ಯಾಸಂಗಕ್ಕೆ ಸಹಾಯ ಮಾಡಿದ್ದಾರೆ. ತಾವರೆಕೆರೆ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಟಿಎಲ್ ಕೆಂಪೇಗೌಡರವರು ಶಾಲೆಗೆ ಬಣ್ಣದ ವ್ಯವಸ್ಥೆಯನ್ನು ಮಾಡಿಸಿ ಕೊಟ್ಟಿದ್ದಾರೆ, ಇದೆಲ್ಲಕ್ಕಿಂತ ಮಿಗಿಲಾಗಿ ಒಂದು ಮಹತ್ವದ ಸಂಗತಿಯನ್ನು ನಾವು ಗಮನಿಸಲೇಬೇಕು ಅದು ಏನೆಂದರೆ, ತಾವರೆಕೆರೆಯ ಕೂಲಿ ಕಾರ್ಮಿಕರ ಕೆಲವು ಮಕ್ಕಳು ಶಾಲೆ ಬಿಟ್ಟ ಮೇಲೆ, ತಂದೆ ತಾಯಿ ಕೂಲಿ ಯಿಂದ ಮರಳಿ ಮನೆಗೆ ಬರುವವರೆಗೂ ಈ ಶಿಕ್ಷಕಿಯ ಮನೆಯಲ್ಲಿ ಉಪಹಾರ ಚಹ ಸೇವಿಸುತ್ತಾ ಆಟಪಾಠ ಮಾಡುತ್ತಾರೆ ಗಂಡ ಮಕ್ಕಳಿಗೆ ಈ ಮಕ್ಕಳು ಅಂದರೆ ಪಂಚ ಪ್ರಾಣ . ಒಟ್ಟಾರೆಯಾಗಿ, ಸರಕಾರಿ ಶಾಲೆಯನ್ನು ಉಳಿಸಿ,ಬೆಳೆಸಲು ನಾನು ಪ್ರಾಮಾಣಿಕ ಸೇವೆಯನ್ನು ಮಾಡಿದ ತೃಪ್ತಿ ನನಗಿದೆ ಎನ್ನುತ್ತಾರೆ ಈ ಶಿಕ್ಷಕಿ ಡಾ, ವೀಣಾ
ಲೇಖನ ಶ್ರೀ ಎಲ್ ಐ ಲಕ್ಕಮ್ಮನವರ ರಾಜ್ಯ ಸಮಿತಿ ಸದಸ್ಯ ಬಿಜಿವಿಎಸ್ ಬೆಂಗಳೂರು..