ಮಹಾ ಪರಿನಿರ್ವಾಣ
ಡಿಸೆಂಬರ್ ೬ ಅನ್ನು ಮಹಾ ಪರಿನಿರ್ವಾಣ ದಿವಸ್ ಅಥವಾ ಭಾರತೀಯ ಸಂವಿಧಾನದ ಪಿತಾಮಹ ಡಾ ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ಎಂದು ಆಚರಿಸಲಾಗುತ್ತದೆ. ‘ಪರಿನರ್ವಾನ್’ ಅನ್ನು ಸಾವಿನ ನಂತರ ‘ನಿರ್ವಾಣ’ ಎಂದು ಹೇಳಬಹುದು, ಅಥವಾ ಜೀವನ ಮತ್ತು ಸಾವಿನ ಚಕ್ರಗಳಿಂದ ಮುಕ್ತಿ ಎಂದು ಅರ್ಥೈಸಬಹುದು.
ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಎರಡು ತಿಂಗಳೊಳಗೆ ಡಿಸೆಂಬರ್ ೬, ೧೯೫೬ ರಂದು ತಮ್ಮ ಕೊನೆಯುಸಿರೆಳೆದರು ,
“ನಾನು ಹಿಂದೂವಾಗಿ ಸಾಯುವುದಿಲ್ಲ” ಎಂಬ ಅವರ ಘೋಷಣೆಯನ್ನು ಪೂರೈಸಿದರು.
ಬೌದ್ಧ ಧರ್ಮದಲ್ಲಿ ಪರಿನರ್ವಾಣ ಎಂದರೆ ತೀರಿಹೋದ ನಂತರ ನಿರ್ವಾಣವಾಗುವುದು, ಜೀವಿತಾವಧಿಯಲ್ಲಿ ನಿರ್ವಾಣವನ್ನು ಪಡೆದವರು ಎಂದರ್ಥ. ಅಂದರೆ ಈ ಭೌತಿಕ ಜಗತ್ತಿನಿಂದ, ಧರ್ಮ ಮತ್ತು ಮರುಹುಟ್ಟಿನಿಂದ ಬಿಡುಗಡೆ ಹೊಂದುವುದು ಎಂದು.
ಬೌದ್ಧ ಧರ್ಮದ ಪ್ರಕಾರ, ನಮ್ಮ ಜೀವನದ ಧರ್ಮವನ್ನು ದೇಹದ ಮರಣದ ನಂತರ ನಮ್ಮ ಆತ್ಮ ಅಥವಾ ಆತ್ಮದ ಮೂಲಕ ಮುಂದಿನದಕ್ಕೆ ಸಾಗಿಸಲಾಗುತ್ತದೆ. ಭೌತಿಕ ದೇಹವು ಶಿಥಿಲಗೊಂಡಾಗ, ನಾವು ನಮ್ಮ ಮುಂದಿನ ಜೀವನದಲ್ಲಿ ಹಿಂದಿನ ಧರ್ಮದದ ಋಣದೊಂದಿಗೆ ಮರುಜನ್ಮ ಪಡೆಯುತ್ತೇವೆ.
ಒಮ್ಮೆ ನೀವು ನಿರ್ವಾಣವನ್ನು ಸಾಧಿಸಿದರೆ, ಈ ಪುನರ್ಜನ್ಮದ ಚಕ್ರವು ನಿಲ್ಲುತ್ತದೆ, ಏಕೆಂದರೆ ಯಾವುದೇ ಧರ್ಮದ ಸಾಲವು ಉಳಿಯುವುದಿಲ್ಲ.ಈ ಆಲೋಚನೆ ಮಾಡಿ ತಮ್ಮ ಕೊನೆಯ ದಿನಗಳಲ್ಲಿ ಮಹಾ ಪರಿನಿರ್ವಾಣ ಕುರಿತು ಯೋಚಿಸಿದ ಡಾ. ಅಂಬೇಡ್ಕರರು ಮಹಾಮಾನವತಾವಾದಿ ಎನಿಸಿದರು.
ನಾವು ಅವರ ಬದುಕಿನ ಪ್ರತಿ ಸಂಗತಿಗಳನ್ನು ಈ ಸಂದರ್ಭದಲ್ಲಿ ನೆನೆಯಲೇಬೇಕು. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಯ ಫಲವಾಗಿ ಭಾರತೀಯ ರಿಜರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣೀಭೂತರಾದರು. ತಮ್ಮ ಪ್ರಖರ ಓದು ಮತ್ತು ಅಧ್ಯಯನ ಶೀಲತೆಯಿಂದ ಸಮಾಜದ ಹಿತ ಮತ್ತು ಶೋಷಿತ ವರ್ಗದ ಧ್ವನಿಯಾಗಿ ಅಂಬೇಡ್ಕರ್ ದುಡಿದಿದ್ದಾರೆ
ಮುಂದಿನ ಪೀಳಿಗೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಪ್ರೇರಣಾದಾಯಕವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ವ್ಯಕ್ತಿಯ ಅಭಿವೃದ್ಧಿ ಎಂಬುದನ್ನು ಅವರು ನಂಬಿದ್ದರು ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರ್ಯ ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಭಾರತ ಸಂವಿಧಾನ ರಚಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಗಲಿರುಳು ಶ್ರಮಿಸಿದ್ದಾರೆ. ಭಾರತದ ಎಲ್ಲಾ ವರ್ಗದ ಕಟ್ಟ ಕಡೆಯ ಜನರಿಗೂ ಸಂವಿಧಾನದ ಸೌಲಭ್ಯಗಳು ತಲುಪುವಲ್ಲಿ ಶ್ರಮಿಸುವ ಮೂಲಕ ರಾಷ್ಟ್ರದ ಅಭ್ಯುದಯ ಸಾಧ್ಯ ಎಂದು ಅಂಬೇಡ್ಕರ್ ನಂಬಿದ್ದರು
ಡಾ.ಬಿ.ಆರ್.ಅಂಬೇಡ್ಕರ್ ಅವರು ವಿಶ್ವದ ಜ್ಞಾನಿಯಾಗಿ ಹಾಗೂ ಭಾರತ ಭಾಗ್ಯವಿಧಾತರಾಗಿ ಸದಾ ಕಣ್ಣುಮುಂದೆ ಇದ್ದಾರೆ. ಇವರ ಸಾರ್ಥಕ ಬದುಕಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ಅವರು ಶೋಷಿತ ಸಮುದಾಯಗಳ ಏಳಿಗೆಗೆ ಇಡೀ ಜೀವನವನ್ನೇ ತ್ಯಾಗ ಮಾಡಿದ್ದಾರೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಎಲ್ಲರಂತೆ ಬದುಕಬೇಕು. ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂಬ ಕನಸನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಹೊಂದಿದ್ದರು. ಅವರ ಮಹಾ ಪರಿನಿರ್ವಾಣ ಆಲೋಚನೆ ನಿಜಕ್ಕೂ ಶ್ಲಾಘನೀಯ.
ಈ ದಿನದಂದು ಧರ್ಮನಿಷ್ಠ ಬೌದ್ಧರು ಮತ್ತು ಅನುಯಾಯಿಗಳು ಬಿಳಿ ಬಟ್ಟೆಗಳನ್ನು ಮಾತ್ರ ಧರಿಸುತ್ತಾರೆ. ಬೌದ್ಧ ಧ್ವಜದ ವಿಧ್ಯುಕ್ತ, ಗೌರವಾನ್ವಿತ-ಆರೋಹಣ ಮತ್ತು ಪವಿತ್ರ ತ್ರಿವಳಿ ರತ್ನವನ್ನು ಸ್ತುತಿಸುವ ಸ್ತೋತ್ರಗಳನ್ನು ಹಾಡಲು ಅವರು ಬೆಳಗಿನ ಮುಂಚೆಯೇ ತಮ್ಮ ವಿಹಾರಗಳು ಅಥವಾ ದೇವಾಲಯಗಳಲ್ಲಿ ಸೇರುತ್ತಾರೆ: ಬುದ್ಧ, ಧರ್ಮ (ಅವನ ಬೋಧನೆಗಳು), ಮತ್ತು ದಿ ಸಾಘ (ಅವನ ಶಿಷ್ಯರು) . ಈ ದಿನದಂದು, ಬೌದ್ಧರು ಪಕ್ಷಿಗಳು ಮತ್ತು ಪ್ರಾಣಿಗಳನ್ನು ಪಂಜರಗಳಿಂದ ಮುಕ್ತಗೊಳಿಸುತ್ತಾರೆ, ಬಡವರು ಮತ್ತು ರೋಗಿಗಳಿಗೆ ಹಣ್ಣು ಮತ್ತು ಬಟ್ಟೆಗಳನ್ನು ವಿತರಿಸುತ್ತಾರೆ.
ಬಟ್ಟೆಗಳನ್ನು ಮಾತ್ರ ಧರಿಸುತ್ತಾರೆ. ಈ ರೀತಿಯ ಆಲೋಚನೆ ನಿಜಕ್ಕೂ ಭೌತಿಕ ಬದುಕಿನಿಂದ ಇಹಲೋಕ ತ್ಯಜಿಸುವ ಮೂಲಕ ಜೀವನ ಸಾರ್ಥಕತೆ ಪಡೆಯುವುದಾಗಿದೆ.ನಮ್ಮ ದೈನಂದಿನ ಜೀವನದಲ್ಲಿ ಇತರರಿಗೆ ಒಳಿತನ್ನು ಮಾಡುವ ಜೊತೆಗೆ ಬಡವರ ಪಾಲಿಗೆ ಹಾಗೂ ಬಡಜನರ ಶ್ರೇಯೋಭಿವೃದ್ಧಿಗೆ ಕನಸು ಕಂಡ ಅಂಬೇಡ್ಕರ್ ನಮ್ಮ ಮುಂದಿನ ಆದರ್ಶವಾದಿ. ತಮ್ಮ ಅಂತಿಮ ದಿನದಲ್ಲಿ ಮಹಾ ಪರಿನಿರ್ವಾಣ ಆಲೋಚನೆ ನಿಜಕ್ಕೂ ಹೆಮ್ಮೆ ಪಡುವಂತಹದು.ಈ ದಿನ ನಾವು ಆಚರಣೆ ಜೊತೆಗೆ ಅವರ ಬದುಕಿನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರೆ ಜೀವನ ಸಾರ್ಥಕ.
ನಂದಿನಿ ಸನಬಾಲ
ರಾಜ್ಯ ಕಾರ್ಯಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ಅರೆ ಸರಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘ ರಾಜ್ಯ ಘಟಕಕೇಂದ್ರ ಕಛೇರಿ ಕಲಬುರಗಿ