ಮೃತ ನೌಕರನ ಖಾತೆಗೆ ತಿಂಗಳ ಸಂಬಳ !!
ಬಾಗಲಕೋಟೆ: ಸರ್ಕಾರಿ ನೌಕರ ಮರಣ ಹೊಂದಿ ಒಂದು ವರ್ಷ ಮೂರು ತಿಂಗಳಾದ ಬಳಿಕವೂ ಆತನ ಖಾತೆಗೆ ಒಂದು ತಿಂಗಳ ವೇತನ (80,634 ರೂ.) ಜಮಾ ಆಗಿದೆ.
ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಬಸವರಾಜ ಉಂಕಿ 2022 ಜ.3ರಂದು ಮೃತರಾಗಿದ್ದು, ಶಾಲೆಯ ಮುಖ್ಯಸ್ಥರು ಎಚ್ಎಂಎಸ್ನಲ್ಲಿ ಹೆಸರು ತೆಗೆಯದೆ ನಿರ್ಲಕ್ಷ್ಯ ವಹಿಸಿದ್ದರಿಂದ ಬಸವರಾಜ ಅವರ ಖಾತೆಗೆ 2023ರ ಏಪ್ರಿಲ್ ವೇತನ ಜಮಾ ಆಗಿದೆ. ಈಗ ಹಣ ವಾಪಸ್ ಮಾಡಲು ಮೃತ ನೌಕರನ ಪತ್ನಿ ಹಿಂದೇಟು ಹಾಕಿದ್ದಾರೆ. ಹಣ ವಾಪಸ್ ತುಂಬದಿದ್ದರೆ ಸರ್ಕಾರದಿಂದ ತಮಗೆ ಬರುವ ಪಿಂಚಣಿ ಹಾಗೂ ಇತರ ಸೌಲಭ್ಯ ತಡೆಹಿಡಿಯಲು ಮಹಾಲೇಖಪಾಲಕರಿಗೆ ಶಿಫಾರಸು ಮಾಡಲಾಗುವುದೆಂದು ಎಚ್ಚರಿಸಿ ಮುಖ್ಯಶಿಕ್ಷಕ ಪತ್ರ ಬರೆದಿದ್ದಾರೆ..