ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ,ಮಾನಸಿಕ ಜಾಗರೂಕತೆ ಮತ್ತು ಸ್ವಾಭಿಮಾನವನ್ನು ಕ್ರೀಡೆಗಳು ಬೆಳೆಸುತ್ತವೆ
ಮುರುಘೇಂದ್ರ ಮಹಾಸ್ವಾಮೀಜಿ..
ಮುನವಳ್ಳಿಃ ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ನಾಯಕತ್ವ,ತಾಳ್ಮೆ,ತಂಡದ ಸಾಂಘಿಕ ಪ್ರಯತ್ನ.ಒಗ್ಗಟ್ಟು,ಸಾಮಾಜಿಕ ಕೌಶಲ್ಯಗಳು ಬೆಳೆಯುವ ಜೊತೆಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ,ಮಾನಸಿಕ ಜಾಗರೂಕತೆ ಮತ್ತು ಸ್ವಾಭಿಮಾನ ಗುಣಗಳು ಬೆಳೆಯುತ್ತವೆ.ಮುನವಳ್ಳಿಯಲ್ಲಿ ಎಲ್ಲರ ಸಹಕಾರದಿಂದ ಕ್ರೀಡೆಗಳು ಜರುಗುತ್ತಿದ್ದು ಇಂದು ಭಾಗವಹಿಸುವ ವಿದ್ಯಾರ್ಥಿಗಳು ಸೋಲು ಗೆಲವು ಮುಖ್ಯವಾಗದೇ ಭಾಗವಹಿಸುವಿಕೆಯನ್ನು ತಮ್ಮಲ್ಲಿ ರೂಢಿಸಿಕೊಂಡು ಕ್ರೀಡೆಗಳಲ್ಲಿ ಪಾಲ್ಗೊಳ್ಳಿರಿ” ಎಂದು ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಮಹಾಸ್ವಾಮೀಜಿಯವರು ಕರೆ ನೀಡಿದರು.
ಅವರು ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಜರುಗಿದ ಮುನವಳ್ಳಿ ವಲಯ ಮಟ್ಟದ ಕ್ರೀಡಾಕೂಟವನ್ನು ಕ್ರೀಡಾಧ್ವಜ ಹಾಗೂ ಕ್ರೀಡಾಜ್ಯೋತಿಗೆ ಚಾಲನೆ ನೀಡುವ ಮೂಲಕ ಆಶೀರ್ವಚನ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಸವದತ್ತಿಯ ಯುವದುರೀಣ ಅಶ್ವತ್ಥ ವೈದ್ಯ.ಗಣ್ಯರಾದ ರವೀಂದ್ರ ಯಲಿಗಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ,ಶಿಕ್ಷಣ ಸಂಯೋಜಕರಾದ ಎಂ.ಡಿ.ಹುದ್ದಾರ.ಚಂದ್ರು ಜಂಬ್ರಿ,ವೀರೇಶ ಬ್ಯಾಹಟ್ಟಿ,ಮಾಧ್ಯಮ ಪ್ರತಿನಿಧಿಗಳಾದ ತಾಜಾಜಿರಾವ್ ಮುರಂಕರ,ಬಸವರಾಜ ತುಳಜನ್ನವರ.ಶ್ರೀಶೈಲ ಉಜ್ಜಿನಕೊಪ್ಪ,ಮುಖ್ಯೋಪಾಧ್ಯಾಯರು ಹಾಗೂ ದೈಹಿ ಶಿಕ್ಷಕರಾದ ಭವಾನಿ ಖೊಂದುನಾಯ್ಕ,ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಗೌರವಾಧ್ಯಕ್ಷರಾದ ಎಂ.ಎಸ್.ಹೊಂಗಲ.ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ಕಿತ್ತೂರ,ಪರಸಗಡ ಪ್ರಾಥಮಿ ಶಾಲಾ ಶಿಕ್ಷಕರ ಪತ್ತಿನ ಸಂಘದ ನಿರ್ದೇಶಕರಾದ ಗುರುನಾಥ ಪತ್ತಾರ,ಎಂ.ಜಿ.ಪರಸಪ್ಪನವರ,ತಾಲೂಕಿನ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ ಕಾಮನ್ನವರ,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎನ್.ಬಿ.ಪೆಂಟೇದ,ಜಿ,ಎಸ್,ಚಿಪ್ಪಲಕಟ್ಟಿ,ಎನ್.ಎ.ಹೊನ್ನಳ್ಳಿ,ಮೀರಾ ಮುರನಾಳ,ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಯುವ ದುರೀಣ ಅಶ್ವತ್ಥ ವೈದ್ಯ ಮಾತನಾಡಿ “ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವವಾದ ಸ್ಥಾನವಿದ್ದು ಗುರು ಎಲ್ಲ ರೀತಿಯ ವಿದ್ಯಗಳನ್ನು ಮಕ್ಕಳಿಗೆ ಧಾರೆ ಎರೆಯುತ್ತಾನೆ,ವಿದ್ಯಾರ್ಥಿಗಳಿಗೆ ಆರೋಗ್ಯವಾಗಿರಲು ಕ್ರೀಡೆ ಸಹಕಾರಿಯಾಗಿದೆ.ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಂಡದ ಆಟಗಾರರ ಪಾತ್ರವನ್ನು ಹಾಗೂ ನಾಯಕತ್ವ ಪಾತ್ರವನ್ನು ಅವರವರ ಅನುಭವದ ಮೇಲೆ ನಿರ್ವಹಿಸುತ್ತಾರೆ.ಇಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು”ಎಂದು ಕರೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಮಾತನಾಡಿ “ಕ್ರೀಡೆಗಳಲ್ಲಿ ಭಾಗವಹಿಸಿದ ಮಕ್ಕಳು ಸಕಾರಾತ್ಮಕ ರೀತಿಯಲ್ಲಿ ಪಾಲ್ಗೊಳ್ಳಬೇಕು.ಸೋಲು ಗೆಲವು ಮುಖ್ಯವಲ್ಲ., ಇಲ್ಲಿ ನಿರ್ಣಾಯಕರ ನಿರ್ಣಯವೇ ಅಂತಿಮ.ನಿರ್ಣಾಯಕರು ಕೂಡ ನಿಷ್ಪಕ್ಷಪಾತವಾಗಿ ನಿರ್ಣಯ ನೀಡುವ ಮೂಲಕ ಉತ್ತಮ ಪ್ರತಿಭೆಗಳು ಹೊರಹೊಮ್ಮುವಂತೆ ಮಾಡಿರಿ”ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗಣ್ಯರಾದ ಅಶ್ವತ್ಥ ವೈದ್ಯ ಕಳೆದ ವರ್ಷ ಧಾರವಾಡದ ಲೂಸಿ ಸಾಲ್ಡಾನಾ ದತ್ತಿ ಸಂಸ್ಥೆಯಿಂದ ಶಿಕ್ಷಕ ರತ್ನ ಪ್ರಶಸ್ತಿ ಪುರಷ್ಕೃತ ಶಿಕ್ಷಕ ಡಾ.ನಾಗೇಂದ್ರ ಚಲವಾದಿ ಹಾಗೂ ಟ್ರೋಫಿ ದೇಣಿಗೆ ನೀಡಿದ ದಾನಿಗಳಾದ ಚಂದ್ರು ಜಂಬ್ರಿಯವರನ್ನು,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ಕಿತ್ತೂರ.ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ದೈಹಿಕ ಶಿಕ್ಷಕ ಭವಾನಿ ಖೊಂದುನಾಯ್ಕ ಕ್ರೀಡೆಗಳ ಮಹತ್ವ ಮತ್ತು ನಿರ್ಣಾಯಕರ ಪಾತ್ರ ಕುರಿತು ತಿಳಿಸಿದರು. ಎನ್.ಎ.ಹೊನ್ನಳ್ಳಿ “ಕ್ರೀಡಗಳಲ್ಲಿ ಭಾಗವಹಿಸುವ ಮಕ್ಕಳ ದೈಹಿಕ ಮಾನಸಿಕ ಶಾರೀರಿಕ ಪ್ರಾಮುಖ್ಯತೆ” ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಧ ಶಾಲೆಗಳಿಂದ ನಿರ್ಣಾಯಕರಾಗಿ ಆಗಮಿಸಿದ್ದ ದೈಹಿಕ ಶಿಕ್ಷಕರಾದ ಎಂ.ಎಂ.ಲಕ್ಕನ್ನವರ,ಎಸ್.ಜಿ.ತುಡುವೇಕರ,ಪರಶುರಾಮ ಕದಂ,ಕಿರಣ,ನಾಯ್ಕರ,ಕೆ.ಕೆ.ಲಮಾಣಿ,ಅನ್ವರ್ ಮುಲ್ಲಾ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕಿ ಉಮಾದೇವಿ ಏಣಗಿಮಠ ಪ್ರಾರ್ಥನಾ ಗೀತೆ ಹೇಳಿದರು.ಶಿಕ್ಷಕ ವೈ.ಟಿ.ತಂಗೋಜಿ ಸ್ವಾಗತಿಸುವುದರೊಂದಿಗೆ ನಿರೂಪಿಸಿದರು.ದೈಹಿಕ ಶಿಕ್ಷಕ ಎಂ.ಎ.ಕಮತಗಿ ಪ್ರತಿಜ್ಞಾವಿಧಿ ಬೋಧಿಸಿದರು,ನಿರ್ಮಲಾ ಕುರಿ ವಂದಿಸಿದರು.