ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸವದತ್ತಿ ವತಿಯಿಂದ ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸ್ವಾಗತ..
ಸವದತ್ತಿ : ತಾಲೂಕಿನ ನೂತನ ತಹಸೀಲ್ದಾರ್ ರಾಗಿ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಎನ್ ಹೆಗ್ಗನ್ನವರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಮೋಹನ್ ದಂಡಿನ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸವದತ್ತಿ ವತಿಯಿಂದ ತಾಲೂಕಿನ ಸಮಸ್ತ ಅಧಿಕಾರಿಗಳು /ನೌಕರರ ಪರವಾಗಿ ಆತ್ಮೀಯ ಗೌರವ ಹಾಗೂ ಸ್ವಾಗತ ಸಮಾರಂಭವನ್ನು ಜರುಗಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಆನಂದಕುಮಾರ ಮೂಗಬಸವ ಮಾತನಾಡಿ “ಶಿಕ್ಷಣ ಮತ್ತು ಕಂದಾಯ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳು ಒಂದನ್ನೊಂದು ಪೂರಕವಾಗಿ ಕಾರ್ಯ ಮಾಡುವಲ್ಲಿ ನಮ್ಮ ಸಹಕಾರ ಸದಾ ನೀಡುತ್ತೇವೆ. ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಪದಾಧಿಕಾರಿಗಳಾದ ಎ. ಕೆ. ಮುಲ್ಲಾ, ವಿಠ್ಠಲ ದೇವರಡ್ಡಿ,ಮಹಾಂತೇಶ ಮುಂಡರಗಿ, ಸಂಗಮೇಶ ಖನ್ನಿನಾಯ್ಕರ, ಎಸ್. ಜಿ. ಸಿಂಗಾರಗೊಪ್ಪ, ಕಾರದಗಿ, ಎಂ. ಕೆ, ಪಾಟೀಲ, ತಹಸೀಲ್ದಾರ್ ಕಾರ್ಯಾಲಯದ ಉಪ ತಹಸೀಲ್ದಾರ್ ಶಶಿರಾಜ. ವನಕಿ.ಗ್ರೇಡ್ 2 ತಹಸೀಲ್ದಾರ್ ಎಂ.ವ್ಹಿ.ಗುಂಡಪ್ಪಗೋಳ.ರಾಮಣ್ಣ ಗುಡಗಾರ ಮೊದಲಾದವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಹಾಜರಿದ್ದರು