200 ವಿದ್ಯಾರ್ಥಿಗಳಿರುವ ಶಾಲೆಗೆ ಒಬ್ಬರೆ ಶಿಕ್ಷಕ!!
ಗ್ರಾಮ ಪಂಚಾಯತಿ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ…
ಬೀದರ್: ಪ್ರೌಢ ಶಾಲೆಗೆ ಶಿಕ್ಷಕರ ಕೊರತೆ ಉಂಟಾಗಿದೆ. ಕರ್ನಾಟಕದಲ್ಲಿ ಅದೆಷ್ಟೋ ಶಿಕ್ಷಕರು ಹೊಸದಾಗಿ ನೇಮಕಗೊಳ್ಳಲು ಕಾಯುತ್ತಿದ್ದಾರೆ ಆದರೂ ಸಹ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆ ಉಂಟಾಗುತ್ತಿದೆ. ಬೀದರ್ನಲ್ಲಿ ಕೂಡ ಇದೇ ರೀತಿ ಸಮಸ್ಯೆ ಎದುರಾಗಿದೆ ಅಲ್ಲಿನ ಪ್ರೌಢ ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗಿದೆ.ಇದಕ್ಕಾಗಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ತಮಗೆ ಹೊಸ ಶಿಕ್ಷಕರನ್ನು ನೀಡುವಂತೆ ಕೇಳುತ್ತಿದ್ದಾರೆ. ಗ್ರಾಪಂ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ ಮಾಡುತ್ತಿದ್ದಾರೆ.
ಔರಾದ್ ತಾಲೂಕಿನ ಜಂಬಗಿ ಗ್ರಾಮದ ಪ್ರೌಢ ಶಾಲಾ ಮಕ್ಕಳಿಂದ ಪ್ರತಿಭಟನೆ ನಡೆಯುತ್ತಿದೆ. ಶಾಲೆಯ 200 ಕ್ಕೂ ಹೆಚ್ಚು ಮಕ್ಕಳಿಗೆ ಒಬ್ಬರೆ ಶಿಕ್ಷಕ, ವಿದ್ಯಾರ್ಥಿಗಳು ಪರದಾಟ ಮಾಡುತ್ತಿದ್ದಾರೆ. ವಿಷಯಕ್ಕೆ ಒಬ್ಬರಂತೆ ಶಿಕ್ಷಕರನ್ನ ನೇಮಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.
ಶಾಲೆಯಲ್ಲಿ ಗಣಿತ ಬೋಧಿಸುವ ಒಬ್ಬ ಶಿಕ್ಷಕರಿಂದ ಎಲ್ಲರಿಗೂ ಪಾಠ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಶಿಕ್ಷಕರಿಗೂ ಇದು ಕಷ್ಟ ಸಾಧ್ಯವಾಗಿದೆ. ಹೀಗೆ ಆದರೆ ನಮ್ಮ ಮುಂದಿನ ಭವಿಷ್ಯದ ಗತಿಯೇನು? ಎಂಬುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಶಾಲಾ ಮಕ್ಕಳ ಸಮಸ್ಯೆಯನ್ನ ಕೇಳುವವರು ಯಾರು ಇಲ್ಲವೇ?
ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರ ಸಂಖ್ಯೆ ಇರಲೇ ಬೇಕಾಗುತ್ತದೆ. ಆದರೆ ಇಲ್ಲಿ ಹಾಗಿಲ್ಲ. ಇಂದು ಪಂಚಾಯತ ಮುಂದೆ ಪ್ರತಿಭಟನೆ ಮಾಡಿದ್ದೇವೆ, ಮುಂದೆ ಉಗ್ರ ಹೋರಾಟ ಮಾಡ್ತೇವೆ ಎಂದ ವಿದ್ಯಾರ್ಥಿಗಳು ಹೇಳಿದ್ದಾರೆ. ನಾವೇನು ರಾಮಾನುಜಾಚಾರ್ಯರಲ್ಲ, ಒಂದೇ ವಿಷಯದಲ್ಲಿ ಪಂಡಿತರಾಗಿ ಸಾಧನೆ ಮಾಡಲು ಎಂದು ಅವರು ಹೇಳಿದ್ದಾರೆ.
ನಮಗೆ ಎಲ್ಲ ವಿಷಯದ ಶಿಕ್ಷಕರನ್ನ ನೀಡಿ, ಶಿಕ್ಷಣದ ಪ್ರಮುಖ ಘಟ್ಟ 10 ನೇ ತರಗತಿ ಇದರಲ್ಲಿ ನಾವು ಸರಿಯಾಗಿ ಅಂಕ ಗಳಿಸದೇ ಇದ್ದರೆ ಮುಂದೆ ನಮಗೆ ತೊಂದರೆಯಾಗುತ್ತದೆ. ನಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ನಮಗೆ ಸರಿಯಾದ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ.