ಬುದ್ಧ ಪೂರ್ಣಿಮೆ
ಆಸೆ ಗಳಿಗಾಗಿ ಬದುಕಲ್ಲ
ಆದರ್ಶ ಕ್ಕಾಗಿ ಬದುಕು
ಶಾಂತಿ ಸಂದೇಶ ಸಾರಿದ
ಭಗವಾನ್ ಬುದ್ಧ ನಮ್ಮ ಆದರ್ಶ
ಸಾವಿರ ಯುದ್ಧಗಳ ಗೆಲ್ಲುವ
ಮೊದಲು ನಿಮ್ಮ ನೀವು ಗೆಲ್ಲಿ
ನಿಮ್ಮ ಬಳಿ ಇರುವುದರ ಪ್ರೀತಿಸಿ
ಇರದುದರೆಡೆಗೆ ಚಿಂತಿಸಿ ಫಲವಿಲ್ಲ ಸಂದೇಶ ನಮಗೆ ಪ್ರೇರಕ
ಕೆಳಗೆ ಕುಳಿತ ವ್ಯಕ್ತಿ ಎಂದೂ
ಬೀಳಲಾರ
ನಾನೇ ಶ್ರೇಷ್ಠ ಎನ್ನುವ ಅಹಂಕಾರ ಬೇಡವೆನುತ
ಆತ್ಮವಿಶ್ವಾಸದ ಪ್ರತೀಕ
ಶಾಂತಿ ಕರುಣೆ ಅಹಿಂಸಾ ಜೀವನ ನಮ್ಮದಾಗಲಿ
ದ್ವೇಷ ಅಸೂಯೆ ಅಳಿಯಲಿ
ಹುಟ್ಟು ಸಾವಿನ ನಡುವೆ ಇರಲಿ ಪ್ರೀತಿ
ದುಃಖ ಶಾಶ್ವತವಲ್ಲ ಪ್ರೀತಿ ಅಮರ
ಬುದ್ಧ ನುಡಿಗಳೆಮಗೆ ದಾರಿದೀಪ
ಅನುದಿನದ ಪಾಲಿಸುತ ಅವನ ಆದರ್ಶ
ಬುದ್ಧ ಪೂರ್ಣಿಮೆ ಸಾರ್ಥಕಗೊಳಿಸೋಣ
ಶಾಂತಿ ಅಹಿಂಸಾ ಜೀವನ ಸಂದೇಶ ಸಾರೋಣ
ನಂದಿನಿ ಸನಬಾಳ್
ಜಿಲ್ಲಾ ಪಿಸ್ಟ್ ಮುಖ್ಯಸ್ಥರು ಸಾವಿತ್ರಿಬಾಯಿ ಫುಲೆ ಶಿಕ್ಷಕರ ಸಂಘ ಕಲಬುರಗಿ ಹಾಗೂ ಅಧ್ಯಕ್ಷರು ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ಕಲಬುರ್ಗಿ