ಪ್ರೀತಿಗೆ ಶರಣು ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಪೂರಕವಾಗಿ ರೇಖಾಚಿತ್ರಗಳನ್ನು ಅಣ್ಣೀಗೇರಿಯ ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ಅವರಿಂದ
ಪ್ರೀತಿಗೆ ಶರಣು ಕಾರಣ ಕೇಳದಿರು ನಿನ್ನ ಪ್ರೀತಿಸುತ್ತಿರಲು.. ವ್ಯಕ್ತಪಡಿಸಲಾರೆನು ಮನದೊಳಗಿನ ಅಳಲು..|| ಸವಿಯಬೇಕು ಬಿಡದಂತೆ ಈ ದೇಹ ಸಿಗುವೆಯಾ ನೀ ಈ ಸ್ಪರ್ಶಕೆ ಮನಸ್ಸು ತೊಳಲಾಟದಿ ನಿನ್ನ ನೆನಪಲಿಹದು ಭಾವನಾತ್ಮಕ ಲೋಕದೊಳು ನಿನ್ನ ಮನ ಬಯಸಿದೆ ಸೇರಬೇಕಿದೆ ನಿನ್ನ ಜೊತೆ ಬೆರೆತಾಗ ನನ್ನ ಲೋಕವು ನಿನ್ನುಸಿರಿನ ಸ್ಪರ್ಶ.. ತಿಳಿ ತಂಪಲ್ಲಿ ಮನಕೆ ಯಾಕೋ ಬೇಸರ.. ಗುನುಗುತಿಹೆ ಪದೇ ಪದೇ ನಿನ್ನ ಹೆಸರು ಮದುವೆ ಎಂಬುದು ಸ್ವರ್ಗ ದಲಿ ನಿಶ್ಚಯವಾಗಿರುವುದಂತೆ?? ನನಗೆ ನೀ ಪರಿಚಯವಾದ ಕ್ಷಣ ಪುನರ್ಜನ್ಮದಿ ನಂಟಾಗಿ…