ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು..
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆಗೆ ಸಹಕರಿಸಿದ ನಿರ್ಗಮಿತ ರಾಜ್ಯಾಧ್ಯಕ್ಷರು,ರಾಜ್ಯ ಪದಾಧಿಕಾರಿಗಳು,ಜಿಲ್ಲಾ ಅಧ್ಯಕ್ಷರು,ಜಿಲ್ಲಾ ಕಾರ್ಯದರ್ಶಿಗಳು, ಹಾಗೂ ಎಲ್ಲಾ ಹಂತದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಾಗೂ ಮಾರ್ಗದರ್ಶಕರು ಹಿತೈಷಿಗಳಾದ ಶ್ರೀ ಬಸವರಾಜ್ ಗುರಿಕಾರ ಕಾರ್ಯಾಧ್ಯಕ್ಷರು ಅಖಿಲ ಭಾರತ ಶಿಕ್ಷಕರ ಪೆಡರೇಶನ್, ಶ್ರೀ ವಿಎಂ ನಾರಾಯಣಸ್ವಾಮಿ ಮಾಜಿ ಅಧ್ಯಕ್ಷರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಶ್ರೀ ಜಗದೀಶ್ ಗೌಡ ಪಾಟೀಲ್ ಮಾಜಿ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ,ವಿವಿ ಶಿವರುದ್ರಯ್ಯ ಗೌರವಾಧ್ಯಕ್ಷರು ಸರ್ಕಾರಿ ನೌಕರರ ಸಂಘ ,ಹಾಗೂ ನನ್ನ ಆಯ್ಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲಾ ಮಹನೀಯರುಗಳಿಗೆ ಕೃತಜ್ಞತೆಗಳು.
ರಾಜ್ಯಾಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕಾರ ಮಾಡಿದ್ದು ಶೀಘ್ರವೇ ಸರ್ಕಾರದ ಮುಖ್ಯಮಂತ್ರಿಗಳು,ಶಿಕ್ಷಣ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆಯುಕ್ತರೊಂದಿಗೆ ಸಮಾಲೋಚನೆ ಆರಂಭಿಸಿ, ಶಿಕ್ಷಕರ ವರ್ಗಾವಣೆ,ವೃಂದ ಮತ್ತು ನೇಮಕಾತಿ ತಿದ್ದುಪಡಿ ಸಮಸ್ಯೆ, ಮುಖ್ಯೋಪಾಧ್ಯಾಯರ ಪ್ರಭಾರ ಭತ್ಯೆ ಹಾಗೂ ನೆನೆಗುದಿಯಲ್ಲಿರುವ ಶಿಕ್ಷಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು
ಸರ್ಕಾರ ಹಾಗೂ ಶಿಕ್ಷಕರ ಮಧ್ಯೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಾ ಸೌಹಾರ್ದತೆ, ಸಮನ್ವಯತೆ ಸಾಧಿಸಿ ರಾಜ್ಯದ ಸಮಸ್ತ ಶಿಕ್ಷಕರು ನೆಮ್ಮದಿಯಿಂದ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತಹ ಆರೋಗ್ಯಕರ ವಾತಾವರಣ ನಿರ್ಮಿಸಲು ಕಂಕಣ ಬದ್ಧನಾಗಿ ಕೆಲಸ ನಿರ್ವಹಿಸಲು ರಾಜ್ಯದ ಸರ್ವ ಶಿಕ್ಷಕರ ಸಹಕಾರವನ್ನು ಬಯಸುತ್ತಿರುವ
ತಮ್ಮ ನಂಬುಗೆಯ..
ಶ್ರೀ ಕೆ ನಾಗೇಶ್ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ)ಬೆಂಗಳೂರು