ಕೌನ್ಸಲಿಂಗ್ ಗೆ ಗೈರ ಉಳಿದರೂ ಎ ವಲಯ ವರ್ಗಾವಣೆ ಆದೇಶ ನೀಡಿದ ರಣಧೀರ ಡಿಡಿಪಿಆಯ್ ……!?
ಏನಿದು ಪ್ರಕರಣ…..!?
ಆದೇಶ ನೀಡಿದವರ …ಪಡೆದವರ ಕಹಾನಿ ಇಲ್ಲಿದೆ ನೋಡಿ..
ವಿಜಯಪುರ: 2021_22 ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸಲಿಂಗ್ ನಡೆದಿತ್ತು.. ಸುರೇಶ ಚನ್ನಬಸಪ್ಪ ಶೀನಳ್ಳಿ ಎಂಬ ಶಿಕ್ಷಕ ವಿಜಯಪುರ ದ ಸರ್ಕಾರಿ ಪ್ರಾಥಮಿಕ ಶಾಲೆ ನಂ೩ ಶಾಲೆಗೆ ನಿಯುಕ್ತಿಗೊಳಿಸಿ ವಿಜಯಪುರ ಡಿಡಿಪಿಐ ಆದೇಶ ಮಾಡಿದ್ದಾರೆ…
ಆದ್ರೆ ಈ ಶಿಕ್ಷಕ ಸುರೇಶ ಅವರು ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಗೈರಾಗಿದ್ದರು ಕೂಡ ಮಾನ್ಯ ಡಿಡಿಪಿಐ ವಿಜಯಪುರ( ನಾಗನಗೂರ) ಇವರಿಗೆ ಸ್ಥಳ ನಿಯುಕ್ತಿ ಮಾಡಿದ್ದಾರೆ..
ವಿಜಯಪುರ ದ ಶಿಕ್ಷಕರಾದ ಹಣಂಮತ ಕೊಣದ ಎಂಬ ಸಹ ಶಿಕ್ಷಕರು ಈ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಆಯಕ್ತರ ಗಮನಕ್ಕೆ ತಂದಿದ್ದರು.. ವಿಚಾರಣೆ ನಡೆಸಿದಾದ ಸಹ ಶಿಕ್ಷಕರು ಕೌನ್ಸಲಿಂಗ್ ನಲ್ಲಿ ಪಾಲ್ಗೊಳ್ಳದೆ ವರ್ಗಾವಣೆ ಪಡೆದಿದ್ದಾರೆ ಎಂಬುದು ತಿಳಿದು ಬಂದಿದೆ..
ಡಿಡಿಪಿಐ ಹಾಗೂ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಜ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.