ನಿನ್ನೆ ಬಹಿರಂಗವಾಗಿ ಸಚಿವ ಪ್ರಹ್ಲಾದ ಜೋಶಿ ವಿರುದ್ದ ಗುಡುಗಿದ್ದ ಶ್ರೀಗಳು..ಒಂದೇ ದಿನದಲ್ಲಿ ಉಲ್ಟಾ ಹೋಡೆದ ಮಠಾಧಿಪತಿಗಳು…
ನಿನ್ನೆ ಲಿಂಗಾಯತರಿಗೆ ಅವಮಾನ!! ಇವತ್ತು ಅವರಿಂದಲೆ ಸನ್ಮಾನ..
ಹುಬ್ಬಳ್ಳಿ: ಶಾಸಕ ಮಹೇಶ ಟೆಂಗಿನಕಾಯಿ ಆಯೋಜಿಸಿರುವ ಜಗ್ಗಲಗಿ ಹಬ್ಬದಲ್ಲಿ ಸಂಸದರಾದ ಪ್ರಹ್ಲಾದ ಜೋಶಿ ಅವರು ಪಾಲ್ಗೊಂಡಿದ್ದರು…
ನಗರದ ಮೂರು ಸಾವಿರ ಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೂರು ಸಾವಿರ ಮಠದ ಶ್ರೀಗಳು ಸೇರಿದಂತೆ ಅನೇಕ ಮಠಾಧಿಪತಿಗಳು ಪಾಲ್ಗೊಂಡಿದ್ದರು…
ನಿನ್ನೆಯಷ್ಟೇ ದಿಂಗಾಲೇಶ್ವರ ಶ್ರೀಗಳು ಜೋಶಿ ಅವರ ವಿರುದ್ದ ಹರಿಹಾಯ್ದಿದ್ದರು.ನಿನ್ನೆ ಪತ್ರಿಕಾಗೋಷ್ಠಿ ಇದ್ದಂತಹ ಮಠಾಧಿಪತಿಗಳ ಜೊತೆಗೆ ಇವತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವೇದಿಕೆ ಹಂಚಿಕೊಂಡಿದ್ದಾರೆ.
ಧಾರವಾಡ ಮುರುಘಾಮಠದ ಶ್ರೀಗಳು ಪತ್ರಿಕಾ ಪ್ರಕಟಣೆ ಮೂಲಕ ನಮ್ಮ ಮಠಕ್ಕೂ ಹಾಗೂ ದಿಂಗಾಲೇಶ್ವರ ರ ರಾಜಕೀಯ ಹೇಳಿಕೆಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ..
ಮೂರು ಸಾವಿರ ಮಠದ ಶಾಲೆಯ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಶ್ರೀಗಳಿದ್ದರು..
ಮೂರು ಸಾವಿರ ಮಠದ ಶ್ರೀಗಳ ಪಾದಕ್ಕೆ ನಮಸ್ಕರಿಸಿದ ಕೇಂದ್ರ ಸಚಿವ ಜೋಶಿ…ಶ್ರೀಗಳಿಂದಲೇ ವೇದಿಕೆ ಮೇಲೆ ಸನ್ಮಾನಿಸಿ ಕೊಂಡರು..
ದಿಂಗಾಲೇಶ್ವರ ಶ್ರೀಗಳು ಬಹಿರಂಗವಾಗಿ ಲಿಂಗಾಯತ ಸಮಾಜಕ್ಕೆ ಅನ್ಯಾಯ ವಾಗಿದೆ,ಜೋಶಿ ಅವರನ್ನು ಹೊರತು ಪಡಿಸಿ ಬೆರೆ ಅಬ್ಯರ್ಥಿ ಘೋಷಣೆ ಮಾಡುವಂತೆ ಬಿಜೆಪಿ ಹೈಕಮಾಂಡ ಗೆ ಷರತ್ತು ವಿಧಿಸಿದ್ದರು.. ಲಿಂಗಾಯತ ರಿಗೆ ಟಿಕೆಟ್ ನೀಡಬೇಕೆಂದು ಷರತ್ತು ಹಾಕಿದ್ದರು..
ಲೋಕಸಭೆ ಚುನಾವಣೆ ಗೆ ಅಬ್ಯರ್ಥಿ ಬದಲಾವಣೆ ಮಾಡುವುದಿಲ್ಲ ಎಂದು ಬಿಎಸ್ ಯಡಿಯೂರಪ್ಪ ಕೂಡ ಹೇಳಿದ್ದರು.ಅಷ್ಟೇಯಲ್ಲ ಎಲ್ಲ ಮಠಾಧಿಪತಿಗಳ ಜೊತೆ ಮಾತನಾಡುವುದಾಗಿ ತಿಳಿಸಿದ್ದರು..