ಮಕ್ಕಳಲ್ಲಿ ಹುದುಗಿರುವ ವಿಶೇಷ ಕಲೆಗಳನ್ನು ಹೊರಹಾಕಲು ಬೇಸಿಗೆ ಶಿಬಿರ ಸಹಕಾರಿ ಲಕ್ಕಮ್ಮನವರ.
ಧಾರವಾಡ
ಧಾರವಾಡದ ಬಾರಾಕೂಟ್ರದ ಚಾಂಪಿಯನ್ಸ್ ಸ್ಕೂಲ್ ನಲ್ಲಿ ಚಂದ್ರಶೇಖರ ಮಾಡಲಗೇರಿ ಅವರ ಸಾರಥ್ಯದಲ್ಲಿ, ಜರುಗಿದ ಮಕ್ಕಳ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ, ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಕಾರ್ಯಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ ಮಕ್ಕಳಿಗೆ ಬಹುಮಾನ ವಿತರಿಸಿ, ಮಕ್ಕಳು ಮೊಬೈಲ್ ಮತ್ತು ಟಿವಿಯಿಂದ ದೂರವಿರಲು, ಬೇಸಿಗೆ ಶಿಬಿರ ಅತ್ಯಂತ ಸಹಕಾರಿಯಾಗಲಿವೆ, ಮಕ್ಕಳಿಗೆ ಕತೆ ಕಟ್ಟುವುದು, ಕವನ ಬರೆಯುವುದು, ನಾನು ವರದಿಗಾರ, ನಿಧಿ ಶೋಧ, ಚಿತ್ರಕಲೆ, ಸೃಜನಾತ್ಮಕ ಚಟುವಟಿಕೆ, ಹಳ್ಳಿಯ ಆಟಗಳು ಮುಂತಾದ ಚಟುವಟಿಕೆಗಳು ಮುದನೀಡಲಿವೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿ, ಮಕ್ಕಳಿಗೆ ವಿಶೇಷ ಆಕರ್ಷಕ ಬಹುಮಾನಗಳನ್ನು ನೀಡಿ ಮಾತನಾಡಿದ ಅಪ್ನಾದೇಶ ಫೌಂಡೇಶನ್ ನ ಡೈರೆಕ್ಟರ್ ಅಜೀತಸಿಂಗ ರಜಪೂತ, ಮಕ್ಕಳು ಈ ಶಿಬಿರದಲ್ಲಿ ನೃತ್ಯ ಏಕಪಾತ್ರಾಭಿನಯ, ಮುಂತಾದ ಕಲೆಗಳನ್ನು ತುಂಬಾ ಚನ್ನಾಗಿ ಕಲಿಯುಕೊಂಡಿದ್ದಾರೆ, ಇಂತಹ ಶಿಬಿರಗಳು ನಿತ್ಯ ನಿರಂತರವಾಗಿ ನಡೆಯಬೇಕು, ಮಕ್ಕಳ ವಿಕಾಸಕ್ಕೆ ಉತ್ತಮ ವೇದಿಕೆ ಎಂದರು.
ಪ್ರಿನ್ಸಿಪಾಲರಾದ ಚೈತನ್ಯರವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಭಾಗ್ಯಶ್ರೀ ರಜಪೂತ, ಪ್ರಾಸ್ತಾವಿಕವಾಗಿ ಮಾತನಾಡಿ, ಮೇ ೧ ರಿಂದ ಮತ್ತೆ ಈ ಬೇಸಿಗೆ ಶಿಬಿರವನ್ನು ವಿಶಿಷ್ಟ ರೀತಿಯಲ್ಲಿ ಅಂದರೆ ಮಕ್ಕಳಿಗೆ ನಟನೆಯ ಕುರಿತು ತರಬೇತಿ, ಮತ್ತು ಜಾನಪದ ನೃತ್ಯ, ಭಾಷಣ ಕಲೆ, ನಿರೂಪಣೆ ಕಲೆ, ವ್ಯಕ್ತಿತ್ವ ವಿಕಸನದ ಪಾಠಗಳು, ನೀತಿಪಾಟಗಳನ್ನು, ರೂಡಿಸಲಾಗುವುದು, ಗಣಿತದ ಚಟುವಟಿಕೆಗಳನ್ನು ಮತ್ತು ಹಳ್ಳಿಯ ಹಳೆಯ ಆಟಗಳನ್ನು ರೂಡಿಸಲಾಗುವುದು, ಎಂದರು,ಎಲ್ಲಾ ಮಕ್ಕಳು ಪ್ರಮಾಣಪತ್ರವನ್ನು ನೀಡಲಾಯಿತು, ಸಂಪನ್ಮೂಲ ವ್ಯಕ್ತಿ ಪ್ರತಿಭಾ ಪಾಟೀಲ್ ಸ್ವಾಗತಿಸಿ ನಿರೂಪಿಸಿದರು ವಿದ್ಯಾ ದೇವಗಿರಿ ವಂದಿಸಿದರು.