BEO ರಿಗೆ ಲಂಚ ಕೊಡಲು ಶಿಕ್ಷಕನೇ ಏಜಂಟ….
ಸಿಕ್ಕಿ ಬಿದ್ದ ತಿಮಿಂಗಲುಗಳು
ಹಿಡಿದು ಕೊಟ್ಟ ರಣಧೀರ ಯಾರು …..ಏನಿದು ಕಹಾನಿ
ನೀವೇ ನೋಡಿ….
ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ ರಮೇಶ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ವಿಶೇಷ ಚೇತನ ಶಿಕ್ಷಕ ನರಸಿಂಹಮೂರ್ತಿ ಅವರು 3 ತಿಂಗಳ ಬಾಕಿ ವೇತನ ಬಿಡುಗಡೆಗೆ 10 ಸಾವಿರ ರೂ. ಲಂಚದ ಬೇಡಿಕೆಯನ್ನ ಬಿಇಓ ಇಟ್ಟಿದ್ದರಂತೆ.
ಇಂದು ಬಿಇಒ ಕಚೇರಿಯಲ್ಲಿ 5 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದ ಬಿಇಓ ಶಿವಲಿಂಗಯ್ಯ.
ಬಿಇಓಗೆ ಮಧ್ಯ ವರ್ತಿಯಾಗಿ ಕೆಲಸ ಮಾಡುತ್ತಿದ್ದ ಶಿಕ್ಷಕ ರಮೇಶನನ್ನು ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.