ಮಾಜಿ ಶಿಕ್ಷಣ ಸಚಿವರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತು ವಿವಾದಾತ್ಮಕ ಹೇಳಿಕೆ..
ಶಿಕ್ಷಕರು ಮಾಡಿದ್ರೆ ಅಮಾನತ್ ಶಿಕ್ಷೆ!! ಮತ್ತೊಂದು ಮಗದೊಂದು...
ಚಾಮರಾಜನಗರ: ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯುವ ಮಕ್ಕಳಿಗೆ ಸಿಸಿ ಕ್ಯಾಮರಾ ಕಣ್ಗಾವಲು ಏಕೆ? ವಿದ್ಯಾರ್ಥಿಗಳು ಏನು ಕಳ್ಳರೇ? ಕಾಪಿ ಹೊಡೆಯುವುದು ಮಹಾ ಅಪರಾಧವೇ? ಎಂದು ಮಾಜಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಗುಂಡ್ಲುಪೇಟೆ ಪಟ್ಟಣದ ಡಾ.ಬಿಆರ್ ಅಂಬೇಡ್ಕರ್ ಭವನದಲ್ಲಿ ಬಿಜೆಪಿ ಅಭ್ಯರ್ಥಿ ಬಾಲರಾಜು ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾನು ಇನ್ನು ಒಂದು ವರ್ಷ ಶಿಕ್ಷಣ ಸಚಿವನಾಗಿದ್ದರೆ ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯುವ ತೆರೆದ ಪುಸ್ತಕ ಪರೀಕ್ಷೆ ನೀತಿಯನ್ನು ಜಾರಿಗೆ ತರುತ್ತಿದ್ದೆ ಎಂದು ಹೇಳಿದರು.
15-16 ವರ್ಷದ ಮಕ್ಕಳು ಕಷ್ಟಪಟ್ಟು ಓದಿಕೊಂಡು ಪರೀಕ್ಷೆಗೆ ಬಂದಿರುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಭಯದ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಒಂದು ವೇಳೆ ಕಾಪಿ ಹೊಡೆದರೆ ಏನು ತಪ್ಪು? ಅದು ಮಹಾ ಅಪರಾಧವೇ? ಮಕ್ಕಳು ಓದಿರುವುದು ಏನು ಎಂದು ಗೊತ್ತಿದ್ದರೆ ಬರೆಯುತ್ತಾರೆ. ಇಲ್ಲ ಎಂದರೆ ಎಲ್ಲಿ ಬರೆಯುತ್ತಾರೆ? ಅದಕ್ಕೆ ಸಿಸಿ ಕ್ಯಾಮರಾ ಬೇಕೆ? ಎಂದು ಪ್ರಶ್ನಿಸಿದರು.