ಸನ್ಮಾನ್ಯ ಶಿಕ್ಷಣ ಸಚಿವರಿಗೆ ಶಿಕ್ಷಕಿಯರ ಸಂಘದಿಂದ ಮನವಿ ಕೊಡಲಾಯಿತು. ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ವತಿಯಿಂದ ಡಾ.ಲತಾ.ಎಸ್.ಮುಳ್ಳೂರ ರಾಷ್ಟ್ರೀಯ ಅಧ್ಯಕ್ಷ ರು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಷನ್ (ರಿ)ನವದೆಹಲಿ ಹಾಗೂ ಸಂಸ್ಥಾಪಕ ರಾಜ್ಯಾ ಧ್ಯಕ್ಷರು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ(ರಿ)ರಾಜ್ಯ ಘಟಕ ಧಾರವಾಡ ಅವರ ನೇತೃತ್ವದಲ್ಲಿ ಸನ್ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರಿಗೆ ಭೇಟಿಯಾಗಿ ಕಡಿತಗೊಳಿಸಲಾದ ದಸರಾ ರಜೆಯನ್ನು ಪುನರ ಪರಿಶೀಲಿಸಬೇಕು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ಶುಚಿ ಪ್ಯಾಡ್ ವಿತರಣೆ ಮತ್ತೆ ಪ್ರಾರಂಭಿಸಬೇಕು ಹಾಗೂ ಪದವೀಧರ PST ಶಿಕ್ಷಕರಿಗೆ ನ್ಯಾಯ ಒದಗಿಸಬೇಕು ಹಾಗೂ ಜನೇವರಿ 03 ಮಾತೇ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಯನ್ನು ಸರಕಾರದಿಂದ ಆಚರಿಸಬೇಕು.
NPS ಹೋಗಿ OPS ಜಾರಿಗೆ ಬರಬೇಕು ವಿಷಯಗಳ ಕುರಿತು ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಾಜಶ್ರೀ ಸಜ್ಜೆಶ್ವರ ಹಾಗೂ ರಾಜ್ಯ ಪದಾಧಿಕಾರಿಗಳಾದ ಶ್ರೀಮತಿ ಶಾಂತಾ.ಬಿರಾದಾರ್. ಶ್ರೀಮತಿ ಅನಸೂಯಾದೇವಿ. ಶ್ರೀಮತಿ ಪ್ರಭಾವತಿ. ಶ್ರೀಮತಿ. ಸಿ.ಕೆ.ಸರಸ್ವತಿ. ಶ್ರೀಮತಿ ಶಮಾ ಪಾಟೀಲ. ಶ್ರೀಮತಿ. H. Y. ಸರಸ್ವತಿ.ಶ್ರೀಮತಿ ಉಮಾದೇವಿ. ಶ್ರೀಮತಿ ಕಲ್ಪನಾ.ರವೀಂದ್ರನಾಥ. ಶ್ರೀಮತಿ ರಂಜಿತಾ.ಗೋಪಿ.ಶ್ರೀಮತಿ ಜಯಶ್ರೀ. ಬೆಣ್ಣಿ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳುಹಾಜರಿದ್ದರು…