Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಕಣ್ಣೀರು ಹಾಕುತ್ತಿರುವ ಶಿಕ್ಷಕ!! ಯಾರೋ ಮಾಡಿದ ತಪ್ಪಿಗೆ ಇವರಿಗೇಕೆ ಶಿಕ್ಷೆ?… 38 ವರ್ಷ ಸೇವೆ ಸಲ್ಲಿಸಿದ ಈ ಶಿಕ್ಷಕರಿಗೆ ಇದೆಂಥಹ ಶಿಕ್ಷೆ???

Posted on September 30, 2023 By Pulic Today No Comments on ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಕಣ್ಣೀರು ಹಾಕುತ್ತಿರುವ ಶಿಕ್ಷಕ!! ಯಾರೋ ಮಾಡಿದ ತಪ್ಪಿಗೆ ಇವರಿಗೇಕೆ ಶಿಕ್ಷೆ?… 38 ವರ್ಷ ಸೇವೆ ಸಲ್ಲಿಸಿದ ಈ ಶಿಕ್ಷಕರಿಗೆ ಇದೆಂಥಹ ಶಿಕ್ಷೆ???
Share to all

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಕಣ್ಣೀರು ಹಾಕುತ್ತಿರುವ ಶಿಕ್ಷಕ!! ಯಾರೋ ಮಾಡಿದ ತಪ್ಪಿಗೆ ಇವರಿಗೇಕೆ ಶಿಕ್ಷೆ?…

38 ವರ್ಷ ಸೇವೆ ಸಲ್ಲಿಸಿದ ಈ ಶಿಕ್ಷಕರಿಗೆ ಇದೆಂಥಹ ಶಿಕ್ಷೆ???

ಬೆಳಗಾವಿ: ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿಳಂಭ ಧೋರಣೆಯಿಂದ ತಮಗೆ ದೊರೆಯಬೇಕಾದ ವೇತನ ಹಾಗೂ ಪಿಂಚಣಿ ಕಳೆದ ನಾಲ್ಕು ತಿಂಗಳಿನಿಂದ ದೊರೆಯುತ್ತಿಲ್ಲ ಎಂದು ಶಿಕ್ಷಕರೊಬ್ಬರು ಕಚೇರಿಯ ಎದುರಲ್ಲಿ ಕಣ್ಣೀರು ಹಾಕಿದ್ದಾರೆ

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ನಿವೃತ್ತ ಶಿಕ್ಷಕ ಜಿನ್ನೆಸಾಬ್ ಹಸನಸಾಬ್ ಶೇಖ್ ಕಣ್ಣೀರು ಹಾಕಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ತಾನು ಜೀವನವಿಡಿ ದುಡಿದು ನಿವೃತ್ತಿ ಹೊಂದಿದ ಬಳಿಕ ಪಿಂಚಣಿ ಪಡೆಯಲು ಈ ನಿವೃತ್ತ ಶಿಕ್ಷಕನಿಗೆ ತಪ್ಪದ ನಿತ್ಯ ಅಲೆದಾಟ ಮಳೆ- ಬಿಸಿಲು ಲೆಕ್ಕಿಸದೆ ಕಚೇರಿ ಎದುರು ಗಂಟೆ ಗಟ್ಟಲೆ ಕಾದು ಕುಳಿತರೂ ಅಧಿಕಾರಿಗಳ ಸುಳಿವೇ ಇಲ್ಲ, ಪಿಂಚಣಿ ಯಾವಾಗ ಎಂಬ ಪ್ರಶ್ನೆಗೆ ನಾಳೆ ಬಾ ಅನ್ನೋ ಟೊಳ್ಳು ಭರವಸೆ,ಯಾರೂ ಕೂಡ ಈನಿವೃತ್ತ ಶಿಕ್ಷನನ್ನ ಕ್ಯಾರೆ ಅನ್ನುತ್ತಿಲ್ಲ ಇದರಿಂದ ಹತಾಶರಾಗಿ ಹೋದ ನಿವೃತ್ತ ಶಿಕ್ಷಕ ಬಿಇಓ ಕಚೇರಿಯ ಎದುರು ಅಸಹಾಯಕರಾಗಿ ಕಣ್ಣೀರು ಹಾಕಿದ್ದಾರೆ

ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ಶಿಕ್ಷಕನಾಗಿ ಸುಧೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದ ಮೆ 31 ರಂದು ನಿವೃತ್ತಿ ಹೊಂದಿದ್ದಾರೆ.

ಆದ್ರೆ ನಿವೃತ್ತಿಗೂ ಮೊದಲೇ ಆರು ತಿಂಗಳ ಮುಂಚೆ ದಾಖಲೆ ಪರಿಷ್ಕರಣೆಗೆ ಕಳುಹಿಸದೆ ಸ್ಥಳೀಯ ಅಧಿಕಾರಿಗಳು ಎಡವಟ್ಟು ಮಾಡಿದ್ದು ಶಿಕ್ಷಕ ಜಿನ್ನೆಸಾಬ್ ಹಸನಸಾಬ್ ಶೇಖ್ ನಿವೃತ್ತಿ ಬಳಿಕ ತಮಗೆ ಸಿಗಬೇಕಾದ ಸೇವಾ, ನಿವೃತ್ತಿ ವೇತನ ಹಾಗೂ ನಾಲ್ಕು ತಿಂಗಳಿಂದ ಪಿಂಚಣಿ ಸಿಗದೆ ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ.

ಮೂಲತಃ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಹಿರಸಂಘ ಗ್ರಾಮದರಾದ ಜಿನ್ನೆಸಾಬ ಶೇಖ ಅವರು ಬೆಳಗಾವಿ ಜಿಲ್ಲೆಯ ಹಲವು ಕಡೆಗಳಲ್ಲಿ ಶಿಕ್ಷಕನಾಗಿ ಸುಧೀರ್ಘ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ಕಳೆದ ಮೆ 31 ರಂದು ನಿವೃತ್ತಿ ಹೊಂದಿದ್ದಾರೆ.

ನಿವೃತ್ತಿಗೂ ಆರು ತಿಂಗಳ ಮುಂಚೆ ಶಿಕ್ಷಕನ ದಾಖಲೆಗಳನ್ನು ಪರಿಷ್ಕರಣೆಗೆ ಕಳುಹಿಸದೇ ಸ್ಥಳೀಯ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ, ಇದರಿಂದ ಶಿಕ್ಷಕ ಜಿನ್ನೆಸಾಬ್ ಹಸನಸಾಬ್ ಶೇಖ್ ಅವರಿಗೆ ನಿವೃತ್ತಿ ಬಳಿಕ ಸಿಗಬೇಕಾದ ಸೇವಾ, ನಿವೃತ್ತಿ ವೇತನ ಹಾಗೂ ನಾಲ್ಕು ತಿಂಗಳಿಂದ ಪಿಂಚಣಿ ಸಿಗದೆ ನಿವೃತ್ತ ಶಿಕ್ಷಕ ಪರದಾಡುವಂತಾಗಿದೆ.

ಸ್ಥಳೀಯ ಅಧಿಕಾರಿಗಳ ವಿಳಂಬ ಧೋರಣೆ ಅನುಸರಿಸಿದ ಹಿನ್ನೆಲೆ ಇವತ್ತು ಸೇವಾ ನಿವೃತ್ತ ಶಿಕ್ಷಕ ಸುದೀರ್ಘ 38 ವರ್ಷಗಳ ಸೇವೆ ಸಲ್ಲಿಸಿದರೂ ಕೂಡ ಪಿಂಚಣಿ ಭಾಗ್ಯಕ್ಕಾಗಿ ಕಚೇರಿ ಎದುರೆ ಕಣ್ಣೀರಿಡುವಂತಾಗಿದ್ದು ಇನ್ನಾದರೂ ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಿ ನಿವೃತ್ತ ಶಿಕ್ಷಕನ ಕಣ್ಣೀರು ಒರೆಸುತ್ತಾ ಅಂತ ಕಾಯ್ದು ನೋಡಬೇಕಿದೆ.

P Views: 1,105
Headlines, ಮುಖ್ಯಾಂಶಗಳು, ಶಿಕ್ಷಣ Tags:ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ .ಜಿ.ಎಂ.ಮುಂದಿನಮನಿ ಯವರ ಮಾರ್ಗದರ್ಶನದಲ್ಲಿ ಸರ್ಕಾರಿ ಪ್ರೌಢಶಾಲೆ ಲಕ್ಷ್ಮೇಶ್ವರ ದಲ್ಲಿ ಲಕ್ಷ್ಮೇಶ್ವರ ಉತ್ತರ ಹಾಗೂ ಮಾಗಡಿ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮ

Post navigation

Previous Post: ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿಗೆ ಹೃದಯಘಾತ!!9 ನೇ ತರಗತಿ ವಿದ್ಯಾರ್ಥಿ ಸಾವು.. ಕಂಬನಿ ಮಿಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ..
Next Post: ರಾಜ್ಯದ ಸಮಸ್ತ ಶಿಕ್ಷಕರ ಈ ಬೇಡಿಕೆಗೆ ಮಾನ್ಯ ಷಡಕ್ಷಯರಿಯವರು ಸ್ಪಂದಿಸಬೇಕಿದೆ.. ಸರ್ಕಾರದ ಹಾಗೂ ಶಿಕ್ಷಣ ಸಚಿವರಿಗೆ ಮನವರಿಕೆ  ಮಾಡಬೇಕಿದೆ… ಏನಿದು ಬೇಡಿಕೆ ? ನೀವೆ ನೋಡಿ…

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ರಿಗೆ ಸಿದ್ದೇಶ್ವರ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ..
  • ಇಬ್ಬರು ಅಧಿಕಾರಿಗಳನ್ನು ಅಮಾನತ್ ಮಾಡಿ ಆದೇಶ ಮಾಡಿದ ಸರ್ಕಾರ!! ಇವರು ಮಾಡಿರುವ ಪಾಪದ ಕೃತ್ಯಕ್ಕೆ ಕೇವಲ ಅಮಾನತ್ ಆದ್ರೆ ಸಾಲದು..!! ಇಂಥಹ ಅಧಿಕಾರಿಗಳಿಗೆ ಯಾವ ಶಿಕ್ಷೆ ನೀಡಬೇಕು ಅಂತ ನೀವೆ ಹೇಳಿ..
  • ಮೇಘನಾ ರಿಗೆ ಡಾಕ್ಟರೇಟ್
  • ರಾಜ್ಯ ಸರ್ಕಾರಿ ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್‌ ವಿರುದ್ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು…
  • ಭಾರತದ ಔನ್ನತ್ಯಕ್ಕೆ ಒಗ್ಗೂಡಿ ಶ್ರಮಿಸಲು ಕರೆ ಅಮ್ಮಿನಬಾವಿ ಗ್ರಾಮದೇವಿ ದೇವಾಲಯದ ಕಾರ್ತಿಕ ದೀಪೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ.

Copyright © 2023 Public Today.

Powered by PressBook WordPress theme