Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಭೆಯ ನಿರ್ಣಯ.. ಕಾವೇರಿ ನದಿ ನೀರಿನ ಹಂಚಿಕೆಯ ಅನ್ಯಾಯದ ಖಂಡನೆ

Posted on September 29, 2023 By Pulic Today No Comments on ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಭೆಯ ನಿರ್ಣಯ.. ಕಾವೇರಿ ನದಿ ನೀರಿನ ಹಂಚಿಕೆಯ ಅನ್ಯಾಯದ ಖಂಡನೆ
Share to all

ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಭೆಯ ನಿರ್ಣಯ..

ಕಾವೇರಿ ನದಿ ನೀರಿನ ಹಂಚಿಕೆಯ ಅನ್ಯಾಯದ ಖಂಡನೆ

ಧಾರವಾಡ : ಕನ್ನಡ ನಾಡಿನಲ್ಲಿಯೇ ಹುಟ್ಟಿ ಹರಿದಿರುವ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯದ ರೈತರ ಹಿತಾಸಕ್ತಿ ಕಾಪಾಡದೇ ಆರಂಭದಿಂದಲೂ ಕರ್ನಾಟಕ್ಕೆ ಆಗುತ್ತಿರುವ ಅನ್ಯಾಯವನ್ನು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಬಲವಾಗಿ ಖಂಡಿಸಿದೆ.

ನಗರದಲ್ಲಿ ಶುಕ್ರವಾರ ಜರುಗಿದ ಸಮಿತಿಯ ಸರ್ವ ಸದಸ್ಯರ ಸಭೆಯು ಈ ಕುರಿತು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಹಿಂದಿನಿಂದಲೂ ಕಾವೇರಿ ನದಿ ಪಾತ್ರದ ರೈತರ ಹಿತಾಸಕ್ತಿ ಕಡೆಗಣಿಸಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗಿದೆ. ಪ್ರಸ್ತುತ ಮಳೆಯ ಕೊರತೆಯಿಂದಾಗಿ ಕಾವೇರಿ ಕಣಿವೆಯಲ್ಲಿ ನೀರಿಲ್ಲದಿದ್ದರೂ ಮತ್ತೆ ಮತ್ತೆ ತಮಿಳುನಾಡಿಗೆ ನೀರು ಬಿಡಬೇಕೆಂಬ ನಿರ್ಣಯಗಳು ರಾಜ್ಯದ ಪಾಲಿಗೆ ಮಾರಕವಾಗಿವೆ. ಮೈಸೂರು, ಮಂಡ್ಯ ಸೇರಿದಂತೆ ಕಾವೇರಿ ನದಿ ಪಾತ್ರದ ನಾಡಿನ ರೈತರು ತೀವ್ರ ಕಷ್ಟದ ಸಂದರ್ಭವನ್ನು ಎದುರಿಸುತ್ತಿದ್ದು, ಈಗ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವಿರೋಧಿಸಿದೆ.

ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಕಾವೇರಿ ನದಿ ನೀರು ಮತ್ತು ಕೃಷ್ಣರಾಜ ಸಾಗರ ಜಲಾಶಯಗಳ ವಾಸ್ತವ ಸ್ಥಿತಿಯ ವರದಿಗಳನ್ನು ಅನಾವರಣಗೊಳಿಸಿದ್ದು, ಬರುವ ದಿನಗಳಲ್ಲಿ ಕನ್ನಡಿಗರ ಕುಡಿಯುವ ನೀರಿಗೂ ತತ್ವಾರ ಉಂಟಾಗುವ ಸಂದರ್ಭ ಎದುರಾಗಿದ್ದು, ಇಂತಹ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಮಧ್ಯಂತರ ಆದೇಶಗಳನ್ನು ಪುನರ್ ಪರಿಶೀಲಿಸಬೇಕೆಂದು ಸಮಿತಿಯು ತನ್ನ ನಿರ್ಣಯದಲ್ಲಿ ಆಗ್ರಹಪಡಿಸಿದೆ.

ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಮಿತಿಯ ಪದಾಧಿಕಾರಿಗಳಾದ ಶಿವಶಂಕರ ಹಿರೇಮಠ, ಎಸ್.ಎಚ್. ಮಿಟ್ಟಲಕೋಡ, ಶಂಕರ ಕುಂಬಿ, ನಿಂಗಣ್ಣ ಕುಂಟಿ, ಹನುಮಾಕ್ಷಿ ಗೋಗಿ, ಶಶಿಧರ ತೋಡಕರ, ಗುರುಮೂರ್ತಿ ಯರಗಂಬಳಿಮಠ, ಕೆ.ಎಚ್. ನಾಯಕ, ಡಾ. ರಾಮು ಮೂಲಗಿ, ನಾಗರತ್ನಾ ಹಡಗಲಿ, ವ್ಹಿ.ಎನ್. ಕೀರ್ತಿವತಿ, ವಿಶೇಷ ಆಮಂತ್ರಿತರಾಗಿದ್ದ ಶಾಸಕ ಅರವಿಂದ ಬೆಲ್ಲದ, ಮಾಜಿ ಮೇಯರ್ ಪೂರ್ಣಾ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರುಗಳಾದ ವಿಜಯಾನಂದ ಶೆಟ್ಟಿ, ಮಂಜುನಾಥ ಬಟ್ಟೆಣ್ಣವರ ಇತರರು ಇದ್ದರು.

1981-82ರಲ್ಲಿ ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕೆ ಪೂರಕವಾದ ಗೋಕಾಕ ಚಳುವಳಿಯ ಸಂದರ್ಭದಲ್ಲಿ ಕನ್ನಡದ ಅಸ್ಮಿತೆಗಾಗಿ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸುದೀರ್ಘ ಹೋರಾಟವನ್ನು ನಡೆಸಿ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

P Views: 42
Headlines, ಮುಖ್ಯಾಂಶಗಳು, ಹುಬ್ಬಳಿ-ಧಾರವಾಡ Tags:ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಸಭೆಯ ನಿರ್ಣಯ.. ಕಾವೇರಿ ನದಿ ನೀರಿನ ಹಂಚಿಕೆಯ ಅನ್ಯಾಯದ ಖಂಡನೆ

Post navigation

Previous Post: G ರಂಗಸ್ವಾಮಿ ಮಧುಗಿರಿ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ ರಿ ರಾಜ್ಯ ಸಂಘ ಧಾರವಾಡ..ಇವರು ಮಾನ್ಯ ಸಿಎಮ್ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಾಡಿರುವ ಮನವಿ ಏನು ಅಂತ ನೀವೆ ನೋಡಿ..ಸರ್ಕಾರ ಕೂಡಲೇ ಇವರ ಮನವಿಗೆ ಸ್ಪಂದಿಸಲಿ..
Next Post: ಪರೀಕ್ಷೆ ಬರೆಯುತ್ತಿದ್ದ ವೇಳೆ ವಿದ್ಯಾರ್ಥಿಗೆ ಹೃದಯಘಾತ!!9 ನೇ ತರಗತಿ ವಿದ್ಯಾರ್ಥಿ ಸಾವು.. ಕಂಬನಿ ಮಿಡಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ..

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸದನದ ಒಳಗಡೆ ಪರಿಷತ್ ಸದಸ್ಯರಿಂದ ಪ್ರತಿಭಟನೆ:ವೇತನ ಆಯೋಗ ಕುರಿತ ಅಪಡೆಟ್ ಸುದ್ದಿ ಇಲ್ಲಿದೆ ನೋಡಿ
  • ಪತಿಯ ಸಹಕಾರದಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರದ ಬೆಳಕು ಹರಿಸಿದ ಡಾ, ವೀಣಾ ಟಿ.
  • ಡಿಸೆಂಬರ್ 6 ಮಹಾ ಪರಿನಿರ್ವಾಣ ದಿನ ಆಚರಣೆ ಕುರಿತು ಶಿಕ್ಷಕಿ ನಂದಿನಿ ಸನಬಾಲ ಅವರ ಬರಹ
  • ಬೆಳಗಾವಿ ಚಳಿಗಾಲದ ಅಧೀವೇಶನದಲ್ಲಿ ಚರ್ಚೆಯಾಯಿತು ಏಳನೇ ವೇತನ ಆಯೋಗ ಹಾಗೂ ಓಪಿಎಸ್… ಪ್ರಶ್ನೇಗಳೇನು?ಸರ್ಕಾರ ಉತ್ತರವೇನು? ಇಲ್ಲಿದೆ ಮಾಹಿತಿ.
  • ಅನಿಲಕುಮಾರ ಪಾಟೀಲ ಅವರ ಮಗನ ಆರತಕ್ಷತೆಗೆ ಕ್ಷಣಗಣಣೆ!! ಸ್ಥಳಕ್ಕೆ ಭೇಟಿ ನೀಡಿದ ಹು_ಧಾ ಪೋಲಿಸ್ ಕಮಿಷನರ್

Copyright © 2023 Public Today.

Powered by PressBook WordPress theme