ಸದೃಢ ಮನಸ್ಸಿಗೆ ಕ್ರೀಢೆಯೇ ಔಷಧಿ- ಶ್ರೀ ಎಮ್ ಎಮ್ ಹವಳದ..
ವೈಯಕ್ತಿಕ ಓರೆಕೋರೆಗಳನ್ನು ತಿದ್ದಿಕೊಂಡು ಹೊಂದಾಣಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಲು ಕ್ರೀಡೆ ನೆರವಾಗುತ್ತದೆ. ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ಮೂಲಕ ಧೈರ್ಯ ಮತ್ತು ಸಾಹಸ ಗುಣಗಳನ್ನು ವೃದ್ಧಿಸುತ್ತದೆ. ಜೊತೆಗೆ ಸದೃಢ ಮನಸ್ಸಿಗೆ ಕ್ರೀಢೆಯು ಔಷಧಿಯಾಗುತ್ತದೆ ಎಂದು ಶ್ರೀ ಎಮ್ ಎಮ್ ಹವಳದ ದೈಹಿಕ ಶಿಕ್ಷಣ ಪರಿವೀಕ್ಷಕರು ಲಕ್ಷ್ಮೇಶ್ವರ ಗ್ರೂಪ್ 3ರ ಪ್ರಾಥಮಿಕ ಶಾಲಾ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಶ್ರೀ ಉಮಾವಿದ್ಯಾಲಯದಲ್ಲಿ ಲಕ್ಷ್ಮೇಶರ ಗ್ರುಪ 3 ಪ್ರಾಥಮಿಕ ವಿಭಾಗದ ಕ್ರಿಡಾಕೂಟಗಳು ಜರುಗಿದವು ಕ್ರಿಡಾಕೂಟದ ಧ್ವಜಾರೋಹಣವನ್ನು ತಾಲೂಕಾ ಪಿ.ಇ.ಓ ಹವಳದ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮಾ ವಿದ್ಯಾಲಯ ಲಕ್ಷ್ಮೇಶ್ವರ ಶಾಲೆಯ ಎಸ್ ಎಚ್. ಪೂಜಾರ ವಹಿಸಿ ಮಾತನಾಡಿ ಕ್ರೀಡೆಯಿಂದ ಶಿಸ್ತು, ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಕ್ರೀಡೆಯಲ್ಲಿ ಗೆಲ್ಲಲು ಉತ್ತಮ ತರಬೇತಿ ಅಗತ್ಯ. ಪರಿಣತಿಯನ್ನು ಗಳಿಸಲು ಸತತ ಸಾಧನೆ ಮಾಡಬೇಕು ಎಂದರು. ಮುಖ್ಯ ಅಥಿತಿಗಳಾಗಿ ಸಿ.ಆರ್.ಪಿ ಗಳಾದ ಸತೀಶ್ ಬೋಮಲೆ , ಆರ್ ಮಹಾಂತೇಶ, ಆರ್.ಎಫ್.ದೊಡ್ಡಮನಿ, ಸಂತೋಷ ಗುಡಗೇರಿ, ಸಂಗನಪೇಟ್, ವಿ ಎನ್ ಶೆಟ್ಟರ್, ಎಮ್ ಎಫ್ ಗೊಣೆಪ್ಪನವರ, ಎಚ್ ಎಫ್ ಪೂಜಾರ, ಜಿ ಎಮ್ ಕೆಂಚಕ್ಕನವರ, ಜಯಾ ಎಸ್ , ವಿ ಡಿ ಹುಲಬಜಾರ, ಎ ಜಿ ಲಿಂಗಶೆಟ್ಟಿ ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು. ಮತ್ತು ದೈಹಿಕ ಶಿಕ್ಷಕ ನಿರ್ಣಾಯಕರು ಹಾಗೂ ಗ್ರೂಪ್ ನ ಶಿಕ್ಷಕರು ಹಾಜರಿದ್ದರು. ವಂದನಾರ್ಪಣೆಯನ್ನು ಗೋಣೆಪ್ಪನವರ ಶಿಕ್ಷಕರು ನೆರವೇರಿಸಿದರು.