ವರ್ಗಾವಣೆಗೊಂಡ ಪ್ರಧಾನ ಗುರುಮಾತೆಗೆ ಭಾವ ಸ್ಪರ್ಶಿ ಬೀಳ್ಕೊಡುಗೆ
ಮುತ್ತಿಗೆ ಹಾಕಿ ಬಿಟ್ಟು ಕೊಡದ ವಿದ್ಯಾರ್ಥಿನಿಯರು
ಗಳ ಗಳನೆ ಅತ್ತು ಕಣ್ಣೀರು ಕೋಡಿ ಹರಿಸಿದ ಬಾಲೆಯರು
ಒಲ್ಲದ ಮನಸ್ಸಿನಿಂದ ಬಿಡುಗಡೆಗೊಂಡ ಗುರು ಮಾತೆ
ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬ್ಯಾಹಟ್ಟಿ ಕ್ಲಸ್ಟರ್ ವ್ಯಾಪ್ತಿಯ ಹೆಬಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಪ್ರಧಾನ ಗುರು ಮಾತೆಯರಾದ ರತ್ನಾ ಗ್ರಾಮಪುರೋಹಿತ.ಇವರು ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮರು ಹೊಂದಾಣಿಕೆ ವರ್ಗಾವಣೆ ಅಧಿನಿಯಮದಡಿಯಲ್ಲಿ ಕುಂದಗೋಳ ತಾಲೂಕಿನ ಸ.ಹಿ.ಪ್ರಾ.ಶಾಲೆ ಹೊಸಹಂಚಿನಾಳಕ್ಕೆ ವರ್ಗಾವಣೆಗೊಂಡು ಬಿಡುಗಡೆಯಾದ ಸಂದರ್ಭದಲ್ಲಿ ಎರಡುನೂರ ಐವತ್ತು ವಿದ್ಯಾರ್ಥಿನಿಯರು ಮುತ್ತಿಗೆ ಹಾಕಿ ತಬ್ಬಿಕೊಂಡು ಗಳ ಗಳನೆ ಅತ್ತು ಕಣ್ಣೀರು ಕೋಡಿ ಹರಿಸಿದ್ದು ಶಿಕ್ಷಕಿಯರ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿಯಾಗಿತ್ತು.
ಹೃದಯ ಸ್ಪರ್ಶಿ ಬೀಳ್ಕೊಡುವ ಸಮಾರಂಭದಲ್ಲಿ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ. ಎಸ್.ಡಿ.ಎಮ್.ಸಿ.ಅಧ್ಯಕ್ಷರಾದ ಪುರದಪ್ಪ ಗಾಳಿ.ಉಪಾಧ್ಯಕ್ಷರಾದ ಅಶ್ವಿನಿ ಕೊಣ್ಣೂರ.ಸದಸ್ಯರಾದ ವೆಂಕಣ್ಣ ತಳವಾರ.ವೀಣಾ ಈಟಿ.ಕಾವೇರಿ ಅಕ್ಕಿ.ರಾಜೇಸಾಬ ನಾಯ್ಕರ ಗ್ರಾಮದ ಗಣ್ಯರಾದ ಮಲ್ಲಿಕಾರ್ಜುನ ಬಸರಿಕಟ್ಟಿ.ಪಾಟೀಲ ಹಿರೇಗೌಡರ.ವಿಜಯಲಕ್ಷ್ಮಿ ಹಾಗೂ ಶಾಲಾ ಗುರು ವೃಂದ ಉಪಸ್ಥಿತರಿದ್ದರು.