Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ನೋವು ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಪೂರಕವಾಗಿ ರೇಖಾಚಿತ್ರವನ್ನು ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ಒದಗಿಸಿರುವರು

Posted on June 30, 2023 By Pulic Today 1 Comment on ನೋವು ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಪೂರಕವಾಗಿ ರೇಖಾಚಿತ್ರವನ್ನು ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ಒದಗಿಸಿರುವರು
Share to all

ನೋವು……

ನಿನ್ನ ಕೈ ನೋವಿಗೆ
ಮುಲಾಮು ಸವರಲು
ಬರಬೇಕಾದವನು
ಬರಲಾಗದೇ ಕೊರಗುತಿಹೆನು
ಎಷ್ಟು ದೂರ ಎಷ್ಟು ಅಂತರ
ಏಕೀ ತಾಪ ಸಂಧಿಸಲಾಗದ ನೋವು

ಒಂಟಿ ಬದುಕು ಹೊತ್ತು ಕಳೆಯುವುದಿಲ್ಲ ಬರೀ ನಿರಾಸೆ
ನಿನ್ನ ನೋಡದ ಮನಸ್ಸು ತಡವರಿಸಿ ನೆನೆದು ಕೊರಗುತಿಹೆನು ಎದೆಯಲ್ಲಿ ಬಚ್ಚಿಟ್ಟು ನೋವನು


ಕಥೆ,ಕವನ, ಲೇಖನ,ಲಹರಿ ಇತ್ಯಾದಿ
ಹೆಸರಿನಲಿ ಗುರುತಿಸಿಕೊಂಡು
ನಿನ್ನ ನೆನಪಲಿ ಗೀಚುತಿರುವೆ
ಆದರೂ ನಿಜವಾಗಿಯೂ ನೀ
ನನ್ನ ತೋಳಲಿ ಬಂಧಿಯಾಗಲಾರೆ
ಎಂಬ ನೋವು

ದಿಂಬು ಒದ್ದೆಯಾಗಿ ನಿಮ್ಮ ನೆನಪಿಗೆ
ಬೆಳಗಾಗುವುದರೊಳಗೆ ಚಿತ್ತಾರ ಬಿಡಿಸಿಬಿಡುತ್ತದೆ
ಯಾರಿಗೂ ಕಾಣದಂತೆ
ಮೇಲ್ನೋಟಕೆ ಹಾಕಿದ ದಿಂಬಿನ ಕವರು ನಗುತ್ತಲೇ ಇರುತ್ತದೆ.ಇದ ನೆನೆದಾಗ ನೋವು ಮೋಬೈಲ್ ರಿಂಗಾದಾಗಲೆಲ್ಲ ನಿನ್ನದಿರಬಹುದೇ ಎಂದು

ಒಳ ಮನಸಿನ ತೊಳಲಾಟವನೆಲ್ಲ ಹುದುಗಿಸಿಕೊಂಡು
ನಿನ್ನ ನೆನಪಲಿ ದಿನಕಳೆಯುತಿರುವ
ಈ ಮನಕ್ಕೆ ನೀ ಸಿಗುವೆಯೋ
ಇಲ್ಲವೋ ಎಂಬ ನೋವು

ಇರಲಿ ಬಿಡು ಗೆಳತಿ
ಅಂತರವೆಂಬುದು
ಹೆಚ್ಚು ದಿನ ಇರಲಾರದು
ಮೌನದಲಿ ಮಾತು
ಮಾತಿನಲಿ ಮೌನ
ನಡೆಯುತ್ತಲೇ ಇದೆಯಲ್ಲಾ…ವ್ಯಾಟ್ಸಪ್ ಚಾಟ್ ನೊಳು

ಆದರೂ ನಿನ್ನ ಬಿಟ್ಟು ಇರಲು ಮನಸ್ಸಿಲ್ಲ ಇರಲೇಬೇಕಾದ
ಅನಿವಾರ್ಯ
ನನಗಿಲ್ಲಿ ಬಿಟ್ಟಿರಲು
ಹೇಳಲಾಗದ ಸಂಕಟ
ಕಾಯುತ್ತಿರುವೆ ನಿನಗಾಗಿ
ನೋವು ಕಳೆದು ನಲಿವು
ಬರಬಹುದು ಒಂದು ದಿನ ಎಂದು

ವೈ. ಬಿ. ಕಡಕೋಳ
ಶಿಕ್ಷಕ ಸಾಹಿತಿಗಳು
ಮಾರುತಿ ಬಡಾವಣೆ
ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
೯೪೪೯೫೧೮೪೦೦
೮೯೭೧೧೧೭೪೪೨

P Views: 83
ಮುಖ್ಯಾಂಶಗಳು, ಶಿಕ್ಷಣ Tags:ನೋವು ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಪೂರಕವಾಗಿ ರೇಖಾಚಿತ್ರವನ್ನು ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ಒದಗಿಸಿರುವರು, ವೈ.ಬಿ.ಕಡಕೊಳ

Post navigation

Previous Post: ವಿದ್ಯಾರ್ಥಿಯ ತಾಯಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ಶಿಕ್ಷಕನ ವಿರುದ್ಧ ಮಂಗಳವಾರ ಪ್ರಕರಣ ದಾಖಲಾಗಿದೆ.
Next Post: ವರ್ಗಾವಣೆಗೊಂಡ ಪ್ರಧಾನ ಗುರುಮಾತೆಗೆ ಭಾವ ಸ್ಪರ್ಶಿ ಬೀಳ್ಕೊಡುಗೆ ಮುತ್ತಿಗೆ ಹಾಕಿ ಬಿಟ್ಟು ಕೊಡದ ವಿದ್ಯಾರ್ಥಿನಿಯರು ಗಳ ಗಳನೆ ಅತ್ತು ಕಣ್ಣೀರು ಕೋಡಿ ಹರಿಸಿದ ಬಾಲೆಯರು ಒಲ್ಲದ ಮನಸ್ಸಿನಿಂದ ಬಿಡುಗಡೆಗೊಂಡ ಗುರು ಮಾತೆ

Comment (1) on “ನೋವು ಭಾವನಾತ್ಮಕ ಕವನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಂದ. ಪೂರಕವಾಗಿ ರೇಖಾಚಿತ್ರವನ್ನು ಚಿತ್ರ ಕಲಾ ಶಿಕ್ಷಕಿ ರೇಖಾ ಮೊರಬ ಒದಗಿಸಿರುವರು”

  1. Nandini+sanbal says:
    July 1, 2023 at 11:45 am

    ನೋವಿನಲ್ಲಿ ಮುಲಾಮಂತ್ತೆ ನಿಮ್ಮ ಪ್ರೀತಿ, ಬೇಗ ಸೇರಿ ಎಂದೂ ಪ್ರೀತಿಸುವೆನು

    Reply

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..
  • ಜೋಕುಮಾರನ ಆಗಮನ ಕುರಿತು ಶಿಕ್ಷಕ ಸಾಹಿತಿ ವೈ ಬಿ ಕಡಕೋಳ ಅವರ ಲೇಖನ
  • ಹಲವು ಬೇಡಿಕೆ ಹೊತ್ತು ಬೆಂಗಳೂರಿನತ್ತ ಹೊರಟ ಗ್ರಾಮೀಣ ಶಿಕ್ಷಕರ ಸಂಘ…

Copyright © 2023 Public Today.

Powered by PressBook WordPress theme