ಘನ ಸರ್ವೋಚ್ಚ ನ್ಯಾಯಾಲಯದ ಆದೇಶ ಅನುಸಾರ ಬರಗಾಲ ಪೀಡಿತ ಪ್ರದೇಶಗಳಲ್ಲಿ ಬೇಸಿಗೆ ರಜೆಯಲ್ಲಿಯೂ ಸಹ ಎಲ್ಲಾ ಸರ್ಕಾರಿ ಅನುದಾನಿತ ಒಂದರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಊಟವನ್ನು ವಿತರಿಸುವ ಕಾರ್ಯಕ್ರಮಕ್ಕೆ ಜೆ ಡಿ ಲಮಾಣಿ ಮುಖ್ಯ ಶಿಕ್ಷಕರು ಪಿ ಎಸ್ ಬಿ ಡಿ ಪ್ರೌಢಶಾಲೆ ಲಕ್ಷ್ಮೇಶ್ವರ ಚಾಲನೆ ನೀಡಿ ಮಾತನಾಡಿದರು.
ನಗರದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಕನ್ನಡ ಪ್ರಾಥಮಿಕ ಶಾಲೆ ಲಕ್ಷ್ಮೇಶ್ವರ ಇಲ್ಲಿ ಬರಗಾಲದ ನಿಮಿತ್ತ ಬೇಸಿಗೆ ರಜಾ ಅವಧಿಯಲ್ಲಿ ಬಿಸಿಯೂಟ ವಿತರಣೆ ಪ್ರಾರಂಭಿಸಲಾಯಿತು.
ಬಿಸಿಯೂಟ ಕೇಂದ್ರದ ಮುಖ್ಯಸ್ಥರಾದ ಆಯ್ ಬಿ ಜಕ್ಕನಗೌಡ್ರ ಮಾತನಾಡಿ ಸೃಜನಾತ್ಮಕ ಚಟುವಟಿಕೆಗಳೊಂದಗೆ ಎಪ್ರಿಲ್ 12 ರಿಂದ ಮೇ 28 ರ ವರೆಗೆ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಬಿಸಿಯೂಟವನ್ನು ಪ್ರಾರಂಭಿಸಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಆಡಳಿತ ಮಂಡಳಿಯ ಎಮ್ ಸಿದ್ದಲಿಂಗಯ್ಯ ನವರು ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಿದರು.
ಪಿ ಎಮ್ ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆ ಯ ಈ ಕಾರ್ಯಕ್ರಮದ ಸದುಪಯೋಗವನ್ನು ಪ್ರತಿ ದಿನ ತಪ್ಪದೇ ಪಡೆದುಕೊಳ್ಳಬೇಕು ಎಂದು ಸಿ ಆರ್ ಪಿ ಸತೀಶ ಬೋಮಲೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಸಿಯೂಟ ಕೇಂದ್ರ ಶಾಲೆಯ ಮುಖ್ಯ ಶಿಕ್ಷಕರಾದ ಆಯ್ ಬಿ ಜಕ್ಕನಗೌಡ್ರ, ಮತ್ತು ಟ್ಯಾಗ್ ಶಾಲೆಯ ಮುಖ್ಯ ಶಿಕ್ಷಕರಾದ ಜೆ ಡಿ ಲಮಾಣಿ, ಬಿ ಎಮ್ ಕುಂಬಾರ, ಎಸ್ ಎಸ್ ಜಿರಂಕಳಿ, ಆಡಳಿತ ಮಂಡಳಿಯ ಎಮ್ ಸಿದ್ದಲಿಂಗಯ್ಯ, ಸಿ ಆರ್ ಪಿ ಗಳಾದ ಸತೀಶ್ ಬೋಮಲೆ, ಉಮೇಶ ನೇಕಾರ , ಎನ್ ಎಸ್ ಬಂಕಾಪುರ, ಬಿ ಎಸ್ ನಾಗನಗೌಡ್ರ, ಆಯ್ ಎ ಬಳಿಗಾರ, ಮತ್ತು ಅಡುಗೆ ಸಿಬ್ಬಂದಿಯವರು, ವಿಧ್ಯಾರ್ಥಿಗಳು ಹಾಜರಿದ್ದರು.