ಸರ್ಕಾರಿ ಶಾಲೆ ಶಿಕ್ಷಕನಿಂದ ವಿದ್ಯಾರ್ಥಿನಿ ಮೇಲೆ ಆಸೀಡ್ ದಾಳಿ!! ಏನಿದು ಪ್ರಕರಣ? ಶಿಕ್ಷಕ ರಂಗಸ್ವಾಮಿ ಅವರು ಏನು ಹೇಳಿದ್ರು? ನೀವೆ ನೋಡಿ
ಚಿತ್ರದುರ್ಗ:ವಿದ್ಯಾರ್ಥಿನಿ ಮೇಲೆ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಆಸಿಡ್ ದಾಳಿ ನಡೆಸಿದ ಆರೋಪ ಕೇಳಿ ಬಂದಿದೆ.
ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಶಾಲೆ ಮುಖ್ಯ ಶಿಕ್ಷಕ ರಂಗಸ್ವಾಮಿ ಆರೋಪ ನಿರಾಕರಿಸಿದ್ದಾರೆ. ಶೌಚಾಲಯ ತೊಳೆಯುವ ಪೌಡರ್ ಪಾಕೆಟ್ ತೆರೆಯುವಾಗ ಘಟನೆ ನಡೆದಿದೆ.
ಇದು ಆಕಸ್ಮಿಕವಾಗಿ ನಡೆದ ಘಟನೆಯಾಗಿದ್ದು, ದುರುದ್ದೇಶದಿಂದ ಪೌಡರ್ ಎರಚಿಲ್ಲ ಎಂದು ತಿಳಿಸಿದ್ದಾರೆ.
ಬೆನ್ನಿಗೆ ಗಂಭೀರ ಗಾಯವಾಗಿ ವಿದ್ಯಾರ್ಥಿನಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ