“ಪ್ರೌಢಶಾಲಾ ಶಿಕ್ಷಕರಿಗೆ ಇಲ್ಲ ಪರೀಕ್ಷೆ ಹೊಣೆ” ಈ ನಿರ್ಧಾರ ಖಂಡನೀಯ.”. ಮಲ್ಲಿಕಾರ್ಜುನ ಚಿಕ್ಕಮಠ
ತಲೆಬರಹದಡಿಯಲ್ಲಿ ಇತ್ತಿಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ನೋಡಿ ಮನಸ್ಸಿಗೆ ಕಸಿವಿಸಿಯಾಗುತ್ತಿದೆ.ನಕಲು ಮಾಡಲು ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಶಿಕ್ಷಕರೇ ಸಹಕರಿಸಿರುವುದು ಪತ್ತೆಯಾಗಿದೆ ಎಂಬ ಕಾರಣ ನೀಡುತ್ತಾ ಆ ಕಾರಣದಿಂದ ಮೇಲ್ವಿಚಾರಣಾ ಕಾರ್ಯ ನೀಡದಿರಲು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ಧರಿಸಿರುವುದು ಅವಸರದ ಕ್ರಮ ಎಂಬುದು ನನ್ನ ಭಾವನೆ.ಯಾರೋ ಕೆಲ ಶಿಕ್ಷಕರು ತಪ್ಪು ಮಾಡಿದ್ದರೆ ನೇರವಾಗಿ ಅವರ ಮೇಲೆ ಕ್ರಮ ಕೈಗೊಳ್ಳಲು ಅಭ್ಯಂತರ ಇಲ್ಲ.ಆದರೆ ಪ್ರೌಢ ಶಾಲಾ ಶಿಕ್ಷಕರೆಲ್ಲರನ್ನೂ ಒಂದೇ ಪರಡಿಯಲ್ಲಿ ತೂಗಿ ಅರೋಪಿಸುವದನ್ನು ಒಪ್ಪಲಾಗದು.ಹಾಗೆಯೇ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕೊಠಡಿ ಮೇಲ್ವಿಚಾರಕರಾಗಿ ನೇಮಕ ಮಾಡುವ ಕ್ರಮ ಹೊಸದೇನಲ್ಲ.ಆ ಪ್ರಯೋಗ ಈಗಾಗಲೇ ಆಗಿದೆ.ಆಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆ ಗಳು ವಿರೋಧ ವ್ಯಕ್ತಪಡೆಸಿದ್ದೂ ಇದೆ.ಅಲ್ಲೂ ನಕಲು ಮಾಡುವುದು ನಿಂತಿರಲಿಲ್ಲ. ಆಯಾ ಶಾಲಾ ಶಿಕ್ಷಕರು ಬೇರೆ ಶಾಲೆಗೆ ಮೇಲ್ವಿಚಾರಣೆಗೆ ಹೋಗುವುದು,ಮಕ್ಕಳು ಬೇರೆ ಶಾಲೆಯಲ್ಲಿ ಪರೀಕ್ಷೆ ಬರೆಯುವುದು,ಪ್ರಶ್ನೆ ಪತ್ರಿಕೆ ಕಾಯಲು ಕಸ್ಟೋಡಿಯನ್ ನೇಮಕ, ವಿಚಕ್ಷಕ ದಳ ರಚನೆ ,ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಪ್ರಶ್ನೋತ್ತರ ಪತ್ರಿಕೆ ಜಾರಿಗೊಳಿಸಿದ ಇವೆಲ್ಲ ಪ್ರಯೋಗಗಳನ್ನು ಮಾಡಿ ಆದರೂ ನಕಲು ಹಾವಳಿ ದ್ವಿಗುಣ ಅಗುತ್ತಲೇ ಇದೆ.ಈ ಬಗ್ಗೆ ಗಂಭೀರ ಚಿಂತನೆ ಅಗತ್ಯವಿದೆ. ಹಾಗೆಯೇ ಇನ್ಯಾವುದೇ ಇಲಾಖೆಯ ನೌಕರರು ವಿಚಕ್ಷಕರಾಗಿ ಬರುವರಾದರೆ ಅವರೆಲ್ಲ ಶಿಕ್ಷಕರಿಗಿಂತ ಹೆಚ್ಚು ಪ್ರಾಮಾಣಿಕರೆಂದು ಹೇಳಿದಂತಾಯ್ತು.ಹೀಗೆ ಅರ್ಥೈಸಿದರೆ ಇಡೀ ಶಿಕ್ಷಕ ಸಮುದಾಯನ್ನು ಅವಮಾನಿಸಿದಂತೆ. ಇಂದಿನ ವರದಿಯೇ ಹೇಳುವಂತೆ ಮೇಲಧಿಕಾರಿಗಳಿಂದ,ಆಡಳಿತ ಮಂಡಳಿಯ ಫಲಿತಾಂಶ ಹೆಚ್ಚಳದ ಒತ್ತಡವೇ ನಕಲಿಗೆ ಕಾರಣ.ಅಷ್ಟೇ ಅಲ್ಲ ಹೇಗಾದರಾಗಲಿ ಮಕ್ಕಳ ಅಂಕಗಳು ಗರಿಷ್ಟತೆ ತುಪಬೇಕೆಂಬ ಪಾಲಕರ ಹಂಬಲ,ಮನೆ ಪಾಠ ಮಾಡುವವರು ತಮ್ಮಲ್ಲಿ ಹೆಚ್ಚೆಚ್ಚು ಮಕ್ಕಳು ತಮ್ಮಲ್ಲೇ ಪ್ರವೇಶ ಪಡೆಯಬೇಕೆಂಬ ಬಯಕೆ, ನಕಲು ಮಾಡುವಾಗ ಶಿಕ್ಷಕರ ಗಮನಕ್ಕೇ ಬಂದರೂ ಏನೂ ಕ್ರಮ ಕೈಗೊಳ್ಳಲು ಅಸಹಾಯಕ ಸ್ಥಿತಿ,ಬಾಹ್ಯ ಬೆದರಿಕೆ, ಶಿಕ್ಷಣ ಕ್ಷೇತ್ರದ ಅಧಿಕಾರಿಗಳು ತಮ್ಮ ತಾಲೂಕಿನ, ಜಿಲ್ಲೆಯ ಫಲಿತಾಂಶ ಕ್ರಮಾಂಕ ಮೆಲ್ ಸ್ಥರದಲ್ಲಿದ್ದು ಶಾಭಾಶಗಿರಿ ಪಡೆಯಲು ಆಶಿಸುವುದು ಹೀಗೆ ಕಾರಣಗಳ ಪಟ್ಡಿ ಬೆಳೆಯುತ್ತಲೇ ಹೋಗುತ್ತದೆ. ಇವೆಲ್ಲಕ್ಕೂ ಪರಿಹಾರ ಹುಡುಕದೆ ಕೇವಲ ಪ್ರೌಢಶಾಲಾ ಶಿಕ್ಷಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸಮಾಜದಲ್ಲಿ ಅವರ ಗೌರವಕ್ಕೆ ಧಕ್ಕೆ ತರುವಂತೆ ನಿರ್ಧಾರ ಮಾಡಿರುವುದು ಖಂಡನಾರ್ಹ.ಕನಿಷ್ಠ ಐದನೇ ವರ್ಗದಿಂದ ಕಡ್ಡಾಯ ಪಾಸು ಮಾಡುವ ನೀತಿಯನ್ನು ತೆಗೆದು ಮೊದಲಿನಿಂದಲೂ ಇದ್ದ ಅರ್ಹ ವಿದ್ಯಾರ್ಥಿಗಳು ಮಾತ್ರ ತೇರ್ಗಡೆ ಹೊಂದಿ ಮುಂದಿನ ವರ್ಗಕ್ಕೆ ಹೋಗುವಂತಾಗಬೇಕು.ಶಿಕ್ಷಕರ ಕೊರತೆ ನೀಗಬೇಕು.ನಿಯಮಿತವಾಗಿ ಅರ್ಹ ಶಿಕ್ಷಕರ ನೇಮಕಾತಿ ಆಗಬೇಕು.ಪಠ್ಯ ಬದಲಾದಂತೆ ಎಲ್ಲ ಶಿಕ್ಷಕರಿಗೆ ಪುನಶ್ಚೇತನ ತರಬೇತಿ ನೀಡಬೇಕು. ಅಧಿಕಾರಿಗಳು ಶಾಲಾ ತಪಾಸಣೆ ಕಡ್ಡಾಯವಾಗಿ ಮಾಡುವ ಮೂಲಕ ಮಾರ್ಗದರ್ಶನ ನೀಡಬೇಕು.ನೆಪ ಮಾತ್ರಕ್ಕೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಿಶೇಷ ವರ್ಗಗಳು ನಡೆಯದೇ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.ಒಟ್ಟಾರೆ ಬೀಸುವ ದೊಣ್ಣೆ ತಪ್ಪಿಸಲು ಅನುಸರಿಸುವ ಮಾರ್ಗ ನಕಲು ಎಂಬಂತಾಗಿದೆ. ಶಿಕ್ಷಣ ಇಲಾಖೆಯು ಪ್ರಾಮಾಣಿಕ ಕಾರ್ಯ ಮಾಡಿದಲ್ಲಿ ಪ್ರಾಮಾಣಿಕ ಸಮಾಜ ನಿರ್ಮಾಣ ಆಗಲು ಸಾಧ್ಯ. ಕಾರಣ ಸಧ್ಯದ ನಿರ್ಧಾರವನ್ನು ಪುನರ್ ಪರೀಶೀಲನೆ ಮಾಡಬೇಕೆಂದು ನನ್ನ ಅನಿಸಿಕೆ.
ಮಲ್ಲಿಕಾರ್ಜುನ ಚಿಕ್ಕಮಠ
ನಿವೃತ್ತ ಶಿಕ್ಷಕರು,ಧಾರವಾಡ.