Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಉಡುಪಿ ಮಾದರಿಯಲ್ಲೇ ಹುಬ್ಬಳ್ಳಿಯ ಪ್ರತಿ಼ಷ್ಠಿತ ಕಾಲೇಜಿನಲ್ಲಿ ಹುಡುಗಿಯರ ಅಶ್ಲೀಶ ಪೋಟೊ ಅಪಲೋಡ್..

Posted on August 4, 2023 By Pulic Today No Comments on ಉಡುಪಿ ಮಾದರಿಯಲ್ಲೇ ಹುಬ್ಬಳ್ಳಿಯ ಪ್ರತಿ಼ಷ್ಠಿತ ಕಾಲೇಜಿನಲ್ಲಿ ಹುಡುಗಿಯರ ಅಶ್ಲೀಶ ಪೋಟೊ ಅಪಲೋಡ್..
Share to all

ಉಡುಪಿಯ ಖಾಸಗೀ ಕಾಲೇಜಿನಲ್ಲಿ ನಡೆದಂತ ವೀಡಿಯೋ ಚಿತ್ರೀಕರಣ ಘಟನೆ ಹಸಿಯಾಗಿರುವ ಮುನ್ನವೇ, ಹುಬ್ಬಳ್ಳಿಯಲ್ಲೊಂದು ಆಘಾತಕಾರಿ ಗಟನೆ ನಡೆದಿದೆ. ವಿದ್ಯಾರ್ಥಿನಿಯರ ಪೋಟೋಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ, ಪ್ರಕಟಿಸುತ್ತಿದ್ದಂತ ಘಟನೆ ಬೆಳಕಿಗೆ ಬಂದಿದೆ.

ಹುಬ್ಬಳ್ಳಿ:
ಹುಬ್ಬಳ್ಳಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಟೋಗಳನ್ನು ಪ್ರಕಟಮಾಡಿರುವಂತ ಅಹಿತಕರ ಘಟನೆ ನಡೆದಿದೆ.

ವೆಬ್ ಸೈಟ್ ಗಳಿಂದ ಪಡೆದಂತ ಅಶ್ಲೀಲ ಚಿತ್ರಗಳಿಗೆ, ಕಾಲೇಜಿನ ವಿದ್ಯಾರ್ಥಿನಿಯರ ಮುಖವಾಡಗಳನ್ನು ಅಂಟಿಸಿ, ಎಡಿಟ್ ಮಾಡಿ, ಅಸಭ್ಯ ಭಾಷೆಯಲ್ಲಿ ಕಾಮೆಂಟ್ ಗಳನ್ನು ಬರೆದು, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರೋದಾಗಿ ತಿಳಿದು ಬಂದಿದೆ.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಕ್ರೀಯರಾದಂತ ಡಿಸಿಪಿ ಗೋಪಾಲ್ ಬ್ಯಾಕೋಡಾ ಖುದ್ದು ಕಾಲೇಜಿಗೆ ಭೇಟಿ ನೀಡಿ, ಆಡಳಿತ ಮಂಡಳಿಯ ಜೊತೆಗೆ ಚರ್ಚಿಸಿ, ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರ ಪೋಟೋಗಳಿಗೆ ಅಶ್ಲೀಲ ಪೋಟೋ ಎಡಿಟ್ ಮಾಡಿ ಪ್ರಕಟಿಸಿದ್ದು ಹೇಗೆ, ಯಾರು ಎನ್ನುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣಗಳ್ಲಲಿ ಅಶ್ಲೀಲ ಪೋಟೋಗಳು, ಅಸಭ್ಯ ಬರಹಗಳು ಕಂಡು ಬಂದ ಕಾರಣ, ವಿದ್ಯಾರ್ಥಿನಿಯರು, ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಈ ಪ್ರಕರಣಕ್ಕೆ ಕಾರಣರಾದವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಇದೀಗ ಹುಬ್ಬಳ್ಳಿ ನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಈ‌ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮೀಶನರ್ ಸಂತೋಷಬಾಬು, ಈ ಘಟನೆ ಮೂರು ತಿಂಗಳ ಹಿಂದೆ ನಡೆದಿದೆ. ತನಿಖೆ ನಡೆಯುತ್ತಿದೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು..

P Views: 104
Headlines, ಮುಖ್ಯಾಂಶಗಳು, ಶಿಕ್ಷಣ, ಹುಬ್ಬಳಿ-ಧಾರವಾಡ Tags:ಉಡುಪಿ ಮಾದರಿಯಲ್ಲೇ ಹುಬ್ಬಳ್ಳಿಯ ಪ್ರತಿ಼ಷ್ಠಿತ ಕಾಲೇಜಿನಲ್ಲಿ ಹುಡುಗಿಯರ ಅಶ್ಲೀಶ ಪೋಟೊ ಅಪಲೋಡ್.., ಹುಬ್ಬಳ್ಳಿ ಸಮರ್ಥ ಕಾಲೇಜು

Post navigation

Previous Post: ‌ಶಿಕ್ಷಕರಿಗೆ ಬಿಗ್‌ ಶಾಕ್!‌ ಮಕ್ಕಳು ಶಾಲೆಗೆ ಬರದಿದ್ದರೆ ಶಿಕ್ಷಕರ ಸಂಬಳ ಕಟ್! ಏನಿದು ಸರ್ಕಾರದ ಹೊಸ ರೂಲ್ಸ್?‌
Next Post: ತಾಲೂಕು ದಂಡಾಧಿಕಾರಿಗಳಾದ ಎಂ.ಎನ್.ಹೆಗ್ಗನ್ನವರ ಅವರಿಗೆ ಶಿಕ್ಷಕರ ಸಂಘಟನೆಯಿಂದ ಗೌರವ ಸನ್ಮಾನ.

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme