ಶಿಕ್ಷಕಿ ಮಗಳು ನದಿಗೆ ಹಾರಿ ಆತ್ಮ ಹತ್ಯೆ: ಮಗಳಿಗೆ ಮೊಬೈಲ್ ಪೋನ್ ನೋಡಬೇಡಾ ಚೆನ್ನಾಗಿ ಓದುವಂತೆ ಬುದ್ದಿ ಮಾತು ಹೇಳಿದ್ದೇ ತಪ್ಪಾಯಿತೆ?..
ಚೆನ್ನಾಗಿ ಓದುವಂತೆ ಪೋಷಕರು ಬುದ್ಧಿ ಮಾತು ಹೇಳ್ತಾರೆ. ಆದ್ರೆ, ಅದನ್ನ ಕೇಳದ ಮಕ್ಕಳು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಇಂತದ್ದೇ ಒಂದು ಘಟನೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ನಡೆದಿದೆ.
ವಿದ್ಯಾ ಶ್ರೀ (15)ಮೃತ ವಿದ್ಯಾರ್ಥಿನಿ. 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾ ಶ್ರೀ ಪೋಷಕರ ಬುದ್ದು ಮಾತು ಹೇಳಿದ್ದರಿಂದ ಬೇಸತ್ತು ಸಾವಿಗೆ ಶರಣಾಗಿದ್ದಾಳೆ.
ವಿದ್ಯಾ ಶ್ರೀ ಖಾಸಗೀ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು, ಅದೇ ಶಾಲೆಯಲ್ಲಿ ತಾಯಿ ಕೂಡ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾಶ್ರೀ ಸರಿಯಾಗಿ ಓದದೇ ಯಾವಾಗಲೂ ಮೊಬೈಲ್ನೊಂದಿಗೆ ಆಟವಾಡಿಕೊಂಡು ಇರುತ್ತಿದ್ದಳಂತೆ. ತಡರಾತ್ರಿ ಮೊಬೈಲ್ ಹಿಡಿದಿದ್ದ ಮಗಳಿಗೆ ಓದುವಂತೆ ಪೋಷಕರು ಬುದ್ದಿ ಮಾತು ಹೇಳಿದ್ದಾರೆ. ಓದದಿದ್ರೆ ಮನೆ ಬಿಟ್ಟು ಹೋಗುವಂತೆ ತಾಕೀತು ಮಾಡಿದ್ದಾರೆ. ಇದೇ ಮಾತನ್ನ ಗಂಭೀರವಾಗಿ ತೆಗೆದುಕೊಂಡ ವಿದ್ಯಾ ಶ್ರೀ ಉತ್ತರ ಪಿನಾಕಿನಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ…