ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು…
PST ಮತ್ತು GPT ಶಿಕ್ಷಕರ ಗೊಂದಲ ನಿವಾರಿಸಲು ಮಾನ್ಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಲಾಯಿತು.
ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಅವರನ್ನು ವಿಧಾನ ಸೌಧದ ಅವರ ಕೊಠಡಿಯಲ್ಲಿ ಭೇಟಿ ಮಾಡಿ, ರಾಜ್ಯಾದ್ಯಂತ PST ಮತ್ತು GPT ಶಿಕ್ಷಕರ ಮಧ್ಯ ಸಾಕಷ್ಟು ಗೊಂದಲಗಳು ಏರ್ಪಡುತ್ತಿದ್ದು, ಬೇಗನೆ PST ಮತ್ತು GPT ಶಿಕ್ಷಕರ ಗೊಂದಲಗಳನ್ನು ನಿವಾರಿಸಲು ಒತ್ತಾಯಿಸಲಾಯಿತು.
ಮಾನ್ಯ ಶಿಕ್ಷಣ ಸಚಿವರು ಪದವೀಧರ ಶಿಕ್ಷಕರ ಸಮಸ್ಯೆ ಗೊಂದಲಗಳು ಗಮನಕ್ಕೆ ಬರುತ್ತಿದ್ದು, ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರ ಆಪ್ತ ಕಾರ್ಯದರ್ಶಿಗಳೊಂದಿಗೆ, ಚರ್ಚಿಸಲು ತಿಳಿಸಿದರು. ಸಮಸ್ಯೆಯನ್ನು ಬಗೆ ಹರಿಸುವುದಾಗಿ ತಾವು ಸಹಕರಿಸಬೇಕು, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಈಗಾಗಲೇ ಬಜೆಟ್ ಅಧಿವೇಶನ ಮುಗಿದ ನಂತರ ತಮ್ಮ ಜೊತೆಗೆ ಚರ್ಚಿಸಿ ಈ ಸಮಸ್ಯೆ ಬಗೆ ಹರಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಸಮಸ್ತ ಶಿಕ್ಷಕರು ಹಾಗೂ ಸಂಘಟನೆಯ ಎಲ್ಲ ಪದಾಧಿಕಾರಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇವೆ….ರಾಜ್ಯದ ಶಿಕ್ಷಕರ ಸಂಘಟನೆ PST ಶಿಕ್ಷಕರ ಸಮಸ್ಯೆಯ ಬಗ್ಗೆ ಅದರ ಆಳ ಅರಿವು ಗಂಭೀರತೆಯ ಬಗ್ಗೆ ಸಂಪೂರ್ಣವಾದ ಪರಿಜ್ಞಾನ ಹೊಂದಿದ್ದು, ಪ್ರಸ್ತುತ ಸರ್ಕಾರಕ್ಕೆ ನಿಗದಿತ ಚರ್ಚೆಗೆ ಅವಕಾಶಗಳನ್ನು ಮಾನ್ಯ ಸಚಿವರೊಂದಿಗೆ ಚರ್ಚಿಸಬೇಕಾಗುತ್ತದೆ. ಆದಕಾರಣ ಸಮಯಾವಕಾಶ ನೀಡಿ ಸಮಸ್ಯೆ ಬಗೆ ಹರಿಸದಿದ್ದರೆ ಅನಿವಾರ್ಯವಾಗಿ ಹೋರಾಟಕ್ಕೆ ಹೋಗಲಾಗುವುದು ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಬಯಸುತ್ತಾ, ಸಂಘ ಶಿಕ್ಷಕರ, ವಿಶೇಷವಾಗಿ ಪದವೀಧರ ಶಿಕ್ಷಕರ ಸಮಸ್ಯೆ ಬಗೆ ಹರಿಸಲು ಬದ್ಧವಾಗಿದೆ ತಾವೆಲ್ಲರೂ ಸಹಕರಿಸಬೇಕೆಂದು, ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.
ಚಂದ್ರಶೇಖರ ನುಗ್ಗ ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಕೆ. ನಾಗೇಶ ರಾಜ್ಯಾಧ್ಯಕ್ಷರು