ಪುಸ್ತಕ ವಿಮರ್ಶೆ:- ಸತ್ಯನಿತ್ಯ ಕಥೆಗಳ ಹಂದರ “ನಲವತ್ತರ ಬಾಲಕಿ”.
“ನಲವತ್ತರ ಬಾಲಕಿ” ಮೊದಲು ಈ ಪುಸ್ತಕದ
ತಲೆಬರಹ ನನಗೆ ಆಕರ್ಷಸಿತು. ಹಾಗೇ ಈ ಕೆಥೆಗಳ
ಕಥೆಗಾರರದ ಶ್ರೀಯುತರಾದ ಪ್ರಭಾಕರ ಖೇಡದ್
ಸರ್ ಅವರು ಬರೆದ ಕಥೆಗಳನ್ನು ವಾಟ್ಸ್ ಅಪ್ ಲ್ಲಿ ಓದಿದ್ದೆವು, ಆದರೆ ಪುಸ್ತಕ ಭಂಡಾರದಲ್ಲಿ ಇರಬೇಕಾದ ಅಮೂಲ್ಯವಾದ ಪುಸ್ತಕ. ಅಮೂಲ್ಯವಾದ ಪುಸ್ತಕ ಅನ್ನಲು ಕಾರಣವೆಂದರೆ
ಕಥೆ, ಕವನ, ಕಾದಂಬರಿ ಇವೆಲ್ಲವೂ ಬರಹಗಾರನ
ಬರದಲ್ಲಿ ನಿಜ ಕಥೆಯ ಜೊತೆ ವರ್ಣನೆ ಅಥವಾ
ಹಾಗೇ ಕಲ್ಪನೆಗಳ ಲೋಕದಲ್ಲಿ ಬರೆದಿರುತ್ತಾರೆ.
ತಲೆಗೆ ಕುಟುಕುವ ಹಾಗೇ ಕಥೆಗಳನ್ನು ಹೆಚ್ಚು ಎಳೆಯದೆ ನೇರ ಕಥಾ ನಿರೂಪಣೆ ಮಾಡಿದ್ದಾರೆ.
ಹೀಗಾಗಿ ಎಲ್ಲ ರೀತಿಯ ಓದುಗರ. ಮನ ಸೆರೆಗೊಳ್ಳುವದರಲ್ಲಿ ಗೆದ್ದಿದೆ. ಇನ್ನೊಂದು ಹೇಳಬೇಕೆಂದರೆ ನನ್ನ ವಿಚಾರದಲ್ಲಿ ಒಂದು ವಸ್ತು ಖರೀದಿ ಮಾಡಬೇಕೆಂದರೆ ಅದರ ಕಂಪನಿ ನೋಡುತ್ತವೆ, ನಂತರ ವಸ್ತುವನ್ನು ಖರೀದಿ ಮಾಡುತ್ತೇವೆ. ಹಾಗೇ ಕಥೆ, ಕವನ ಏನೇ ಇರಲಿ ಬರೆದ. ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಖೇಡದ ಸರ್ ಅವರು ಬಸವಬಾಗೇವಾಡಿ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ನೇರ ಮಾತು, ಸಹೃದಯಿ ಸರ್, ಸಾಕಷ್ಟು ಚುಟುಕು, ನಗೆಹನಿ ಯಲ್ಲಿ ನೇರವಾಗಿ ಮನಮುಟ್ಟುವಂತೆ ಬರೆದಿದ್ದಾರೆ.ಅವರು ಸ್ಥಾಪಿಸಿದ ವಾಟ್ಸಅಪ್ ಗ್ರೂಪ್ ಮತ್ತು ಫೇಸ್ ಬುಕ್ ಮೂಲಕ ಅನೇಕ ಅಭಿಯಾನಗಳನ್ನು ಮಾಡಿ ಜನ ಮತ್ತು ಸಮಾಜ ಜಾಗೃತಿ ಮಾಡಿದ್ದಾರೆ.
ಸತ್ಯ ನೇರ ನುಡಿಯುವ ಸಾಹಿತಿಗಳು. ಹೀಗಾಗಿ ಈ ಪುಸ್ತಕದಲ್ಲಿಯೂ ಸಹ ಸಮಾಜದಲ್ಲಿ ನೋಡುವ, ಕಾಣುವ ಸತ್ಯ ಘಟನೆಗಳನ್ನು ಬರೆದಿದ್ದಾರೆ.
ಹೀಗಾಗಿ “ನಾಲಾವತ್ತರ ಬಾಲಕಿ ” ಒಂದು ಅರ್ಥವತ್ತಾದ ಯೋಗ್ಯವಾದ ಪುಸ್ತಕ.
. ಇನ್ನು “ನಾಲವತ್ತರ ಬಾಲಕಿ “ಈ ಪದಗಳ ಬಗ್ಗೆ ವಿಚಾರ ಚಿಂತನೆ ಮಾಡಿದಾಗ ಮತ್ತು
ಇದರಲ್ಲಿರುವ ಸಮಾಜಿಕ ಘಟನೆಗಳನ್ನು ಅವಲೋಕಿಸಿದಾಗ ಒಂದು ಹೊಳವು ಬಂತು.
ಮನುಷ್ಯನ ಮನಸ್ಸು ಎರಡು ಹಂತದಲ್ಲಿ ತನ್ನ ಹತೋಟಿ ತಪ್ಪಲು ಸಾಧ್ಯವಿರುತ್ತದೆ.
ಒಂದು ೧೫ ರಿಂದ ೧೮ ವಯಸ್ಸಿನವರಿಗೆ ಒಂದು ರೀತಿಯ ಯೌವ್ವನದ ಆಕರ್ಷಣೆಯಲ್ಲಿ ಬಿದ್ದು
ಹಾಳಾಗುತ್ತಾರೆ. ಇನ್ನೊಂದು ಹಂತವೆಂದರೆ
ಮಧ್ಯ ವಯಸ್ಸಿನಲ್ಲಿ ೩೫ ರಿಂದ ೫೦ ವಯಸ್ಸಿನಲ್ಲಿ
ಅಹಂಕಾರ, ಹಣ, ಅಂತಸ್ತು,ಹೀಗೆ ಹಲವಾರು ಮದ ಜೊತೆ ಕಾಮ, ಯಾವ ವಯಸ್ಸಿನವರನ್ನು ಬಿಡುವುದಿಲ್ಲ ಹಾಳಾಗಿ ಆತ್ಮಹತ್ಯಗೆ
ಶರಣಾಗುತ್ತಾರೆ. ಹೀಗಾಗಿ ಈ ಪುಸ್ತಕದ
ಶೀರ್ಷಿಕೆ “ನಲವತ್ತರ ಬಾಲಕಿ” ಬಹಳ ಸೂಕ್ತವೆನಿಸಿದೆ. ಯಾವ ಕಥೆಗಳನ್ನು ಎಳೆಯದೆ
ನೇರ, ಕುತೂಹಲಬರಿತ ಓದಿಸಿಕೊಂಡು ಹೋಗುತ್ತದೆ.
ಇನ್ನು ಕಥೆಗಳ ಬಗ್ಗೆ ಹೇಳಬೇಕಾದರೆ :
“ಆ ಪವಿತ್ರ ಚುಂಬನ ” ಕಥೆ ಓದುತ್ತಾ ಹೋದಾಗ
ಕೊನೆಗೆ ಪ್ರೊಫೆರ್ ಕಂಡ ಕನಸು ಅಂತ ಗೊತ್ತಾಗುತ್ತದೆ. ಅಲ್ಲಿಯವರಿಗೂ ನಡೆದ ಕಥೆ ಅನಿಸುವ ಭಾವ ಹೊಂದಿರುತ್ತದೆ.
ಇನ್ನೊಂದು ಕಥೆಯಾದ ನಮ್ಮ ಪುಸ್ತಕದ ಶೀರ್ಷಿಕೆಯಾದ “ನಾಲವತ್ತರ ಬಾಲಕಿ”
ಕಥೆಯಲ್ಲಿ ಭುದ್ದಿಮಾಂದ್ಯ ಇರುವ ತಂಗಿಯನ್ನು
ಅವಳ ಅಣ್ಣ ಮತ್ತು ಅತ್ತಿಗೆ ಪ್ರೀತಿಯಿಂದ ನೋಡಿಕೊಳ್ಳುವ ಪರಿ ನಂತರ ಅಣ್ಣನ ಸೊಸೆ ಬಂದ ನಂತರ ಜಗಳದಿಂದ, ಈ ಮೂವರು ಮನೆ ಬಿಟ್ಟು ಹೋಗುವ ಪರಿ, ಯಾವ ಸುಖವನ್ನು ಕಾಣದ ಈ ನಾಲವತ್ತರ ಬಾಲಕಿ ಹಾಗೇ ಅಣ್ಣನ ಜೀವನದಲ್ಲಿನ ವಿಧಿಯಾಟ ಹೀಗೆ ನೇರವಾಗಿ ಕರುಳು ಹಿಂಡುವಂತೆ, ಮನಮುಟ್ಟುವ ಹಾಗೇ ಬರೆದಿದ್ದಾರೆ.
ಮತ್ತೊಂದು ಕಥೆಯಲ್ಲಿ ತಮಗೆ ತಿಳಿದ ವಿಷಯದ ಬಗ್ಗೆ, ಎಲೆಕ್ಟ್ರಿಕಲ್ ಅಂಗಡಿಗೆ ಬಂದ ಗಿರಾಕಿಯ ಕಥೆ
ವ್ಯಥೆ, ಆ ಗಿರಾಕಿಯ ತಮ್ಮನ ಜೀವನದಲ್ಲಿ ವಿಚಿತ್ರ ಕಾಯಿಲೆಯಿಂದ ಇಡಿ ಕುಟುಂಬ ವಿಚಿತ್ರ ಕಾಯೆಲೆಗೆ ತುತ್ತಾಗಿ ಒಂದು ಕುರುಹು ಇರದೇ ಎಲ್ಲರೂ ಆ. ಕಾಯಿಲೆಗೆ ಬಲಿಯಾಗಿದ್ದು ಓದಿದಾದಾಗ ಬೆಚ್ಚಿಬಿಳಿಸುತ್ತದೆ.
“ಒಬ್ಬಳೇ ಮಗಳು ” ಅನ್ನುವ ಕಥೆಯಲ್ಲಿ ಹೆಣ್ಣಿಗೆ
ಮುದ್ದಿನಿಂದ ಬೆಳಿಸಿ ಅವಳ ಅಹಂಕಾರದ ಅಧೋಗತಿ ಇಳಿಸುತ್ತದೆ. ಹೆಣ್ಣಿಗೆ ವಿದ್ಯೆ ಜೊತೆ ವಿನಯ ಮತ್ತು ಸಂಸ್ಕಾರ ಇಲ್ಲದಿದ್ದರೇ ಏನಾಗುತ್ತದೆ ಎಂದು ಈ ಕಥೆಯಲ್ಲಿ ಹೇಳಿದ್ದಾರೆ.
“ಇದು ಕಥೆಯಲ್ಲ” ಕಥೆಯಲ್ಲಿ ಖೇಡದ ಸರ್ ತಾವು ಕಲಿತ ಶಾಲೆಯ ಬಗ್ಗೆ ಹಾಗೂ ಅಂದಿನ ಗುರುಗಳ ಸ್ಮರಣೆ ಪ್ರಸಾದ ನಿಲಯದಲ್ಲಿ ಊಟ ಮಾಡುವ ಮುನ್ನ ಹೇಳುವ ಶಾಂತಿ ಮಂತ್ರ ಮತ್ತು ಸಹಬಾಳ್ವೆ, ಭಾರತೀಯ ಸಂಸ್ಕೃತಿ ಎಲ್ಲವೂ ಓದಿದಾಗ ನಮ್ಮ ಶಾಲಾ ದಿನಗಳು ನೆನಪಾದವು. ಹಾಗೇ ಇಂದಿನ ಶೈಕ್ಷಣಿಕ ಶಾಲೆಗಳು ವ್ಯಾಪಾರಿಕರಣವಾಗಿವೆ ಎಂದು
ಮನಸ್ಸಿಗೆ ಅನಿಸಿದ್ದು ಸುಳ್ಳಲ್ಲ.
“ಬೀದಿ ಹೆಣ” ಈ ಕಥೆಯಲ್ಲಿ ಒಬ್ಬ ವ್ಯಕ್ತಿ ಹುಟ್ಟು ಮತ್ತು ಸಾವಿನ ನಡುವೆ ಅವನು ಗಳಿಸಿದ ವ್ಯಕ್ತಿತ್ವದ ಮೇಲೆ ಅವನ ಗೌರವ ಇರುತ್ತದೆ. ಹಾಗೇ ಸತ್ತ ಮೇಲು ಇರುತ್ತದೆ. ಒಬ್ಬ ಒಳ್ಳೆಯ ಪರೋಪಕಾರಿ ತೀರಿಹೋದರೆ ಇದ್ದಾಗಲೂ ಮತ್ತು ತೀರಿ ಹೋದಾಗಲು ಎಲ್ಲರೂ ಅವನನ್ನು ಮೆಚ್ಚುಗೆಯಲ್ಲಿ
ನೆನಪಿಟ್ಟುಕೊಂಡು ಸ್ಮರಿಸುತ್ತಾರೆ. ಅದೇ ರೀತಿ
ಸ್ವಾರ್ಥ, ಅಪರೋಪಕಾರಿ ದುಷ್ಟ ವ್ಯಕ್ತಿ ತೀರಿ ಹೋದರೆ ಇದ್ದಾಗಲೂ ಸತ್ತಮೇಲೂ ಅವನನ್ನು ಬೈಯುತ್ತಾರೆ. ವಿಷಯವಸ್ತುವನ್ನು ಚೆನ್ನಾಗಿ ಬರೆದಿದ್ದಾರೆ.
ಹೀಗೆ ಒಟ್ಟಾರೆ ೫೨ ಕಥೆಗಳುಳ್ಳ ಕಥಾಗುಚ್ಚವಾಗಿದೆ.
ಒಂದೊಂದು ಕಥೆಗಳು ಸಮಾಜದ ನಿತ್ಯ ಹಾಸುಹೋಕ್ಕಾಗಿದೆ. ಈ ಪುಸ್ತಕದಲ್ಲಿ ಅಷ್ಟ ಮದಗಳ ಏರಿದ ಜೀವನ ಕಥೆಗಳು ಇವೆ.ಓದಲು ಕುಳಿತಾಗ ಒಂದೊಂದು ಸನ್ನಿವೇಶ ಸಾಲುಗಳು
ಚಿಂತನೆಗೆ ಹಚ್ಚುತ್ತದೆ. ಹಾಗೇ ನಮ್ಮ ಆಟ ಏನು ಇಲ್ಲ, ಭಗವಂತನ ಆಟ ಎಂದು ತಿಳಿದು ಬರುತ್ತದೆ.
ಇನ್ನು ಬಹಳ ಕಥೆಗಳು ಕುತೂಹಲ ರೋಮಾಂಚಕಾರಿಯಾಗಿವೆ.ಹೀಗಾಗಿ ಪುಸ್ತಕ ಸಂಗ್ರಹದಲ್ಲಿ ಇರಬೇಕಾದ ಪುಸ್ತಕ. ಮತ್ತು ಇನ್ನೊಬ್ಬರಿಗೆ ಕಾಣಿಕೆ ಮತ್ತು ಬಹುಮಾನವಾಗಿ
ಕೋಡಬೇಕಾದಂತಹ ಪುಸ್ತಕ.
ಸರ್ ಇನ್ನಷ್ಟು ನಿಮ್ಮ ಕೃತಿಗಳು ಸಾರಸ್ವತ ಲೋಕಕ್ಕೆ
ಬರಲಿ ಎಂಬ ಶುಭಾಶಯಗಳು.
✍️ ಪ್ರಿಯಾ ಪ್ರಾಣೇಶ ಹರಿದಾಸ
. (ಕವಿಯತ್ರಿ, ಬರಹಗಾರ್ತಿ,)