ಭೋಜರಾಜ ಟಿ.ಎಸ್ ಅವರಿಗೆ ಡಾಕ್ಟರೇಟ್
ಭೋಜರಾಜ ಟಿ.ಎಸ್ ಅವರಿಗೆ ಡಾಕ್ಟರೇಟ್ ಬೆಳಗಾವಿ:ಕೊಪ್ಪಳ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಉಪನ್ಯಾಸಕರಾದ ಭೋಜರಾಜ ಟಿ. ಎಸ್. , ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಡಾ. ಶೋಭಾ ನಾಯಕ ಅವರ ಮಾರ್ಗದರ್ಶನದಲ್ಲಿ ‘ಯಶೋಧರ ಚರಿತೆಯ ಕೇಂದ್ರಿತ ಆಧುನಿಕ ಮೀಮಾಂಸೆ’ (ಮನಃಶಾಸ್ತ್ರೀಯ ವಿಮರ್ಶೆಗಳನ್ನು ಅನುಲಕ್ಷಿಸಿ) ಎಂಬ ಸಂಶೋಧನಾ ಮಹಾಪ್ರಬಂಧವನ್ನು ಸಲ್ಲಿಸಿದ್ದಕ್ಕಾಗಿ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.ಇವರು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಗ್ರಾಮದ ವಾಸಿಯಾಗಿದ್ದಾರೆ.