ಭಗತಸಿಂಗ್ ಸೇವಾ ಸಂಘದ ವತಿಯಿಂದ ಹುಬ್ಬಳ್ಳಿಯ ಪಾಲಿಕೆಯ ಚಿಟಗುಪ್ಪಿ ಉದ್ಯಾನವನದಲ್ಲಿ ಪ್ರತಿಷ್ಟಾಪಿಸಲಾಗಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕಳಪೆ ಕಾಮಗಾರಿಯಿಂದ ಕುಸಿದು 04 ವರ್ಷಗಳೇ ಆದರೂ ಇಲ್ಲಿಯವರಿಗೂ ಪುರ್ನನಿರ್ಮಾಣ ಮಾಡದೇ ಇರುವುದನ್ನು ಖಂಡಿಸಿ ಹು-ಧಾ ಮಹಾನಗರ ಪಾಲಿಕೆಯ ಆಯುಕ್ತರಾದ ಈಶ್ವರ ಉಳ್ಳಾಗಡ್ಡಿ ಅವರಿಗೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾದ ದಿನವೇ 04 ನೇ ಮನವಿಯನ್ನು ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಅನೇಕ ಬಾರಿ ಮನವಿ ಸಲ್ಲಿಸಿದರು ಕೇವಲ ಹಾರೈಕೆಯ ಉತ್ತರವನ್ನು ನೀಡುತ್ತ ಬಂದಿರುವ ಪಾಲಿಕೆಯ ಅಧಿಕಾರಿಗಳು ಇಲ್ಲಿಯವರಿಗೂ ಯಾವುದೇ ಕ್ರಮವನ್ನು ಕೈಗೊಂಡಿರುವುದಿಲ್ಲ ಅದ್ದರಿಂದ ಪಾಲಿಕೆಯ ಆಯುಕ್ತರಿಗೆ ಮೂರ್ತಿ ಪ್ರತಿಷ್ಟಾಪನೆಗೆ ಒಂದು ನಿರ್ದಿಷ್ಟ ಕಾಲಾವಧಿಯನ್ನು ತಿಳಿಸುವಂತೆ ಒತ್ತಾಯಿಸಲಾಯಿತು. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಆಯುಕ್ತರು ಮೂರು ದಿನಗಳಯೊಳಗೆ ಈ ವಿಷಯದ ಕುರಿತು ತಮಗೆ ತಿಳಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳದೇ ಇದ್ದಲ್ಲಿ ನಮ್ಮ ಭಗತಸಿಂಗ್ ಸೇವಾ ಸಂಘದ ವತಿಯಿಂದ ಸಮಾಜದ ಮುಖಂಡರೊಂದಿಗೆ ಪಾಲಿಕೆಗೆ ಮುತ್ತಿಗೆ ಹಾಕುವುದರ ಮೂಲಕ ಉಗ್ರ ಪ್ರತಿಭಟನೆ ಮಾಡುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಸಲಾಯಿತು.