Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ : ಸಚಿವರ ಶ್ಲ್ಯಾಘನೆ ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ರಚಿಸಲು ಪೂರಕವಾದ ಮಾರ್ಗದರ್ಶಿ ವೀಡಿಯೋಗಳ ಉದ್ಘಾಟನೆ

Posted on October 22, 2023 By Pulic Today No Comments on ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ : ಸಚಿವರ ಶ್ಲ್ಯಾಘನೆ ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ರಚಿಸಲು ಪೂರಕವಾದ ಮಾರ್ಗದರ್ಶಿ ವೀಡಿಯೋಗಳ ಉದ್ಘಾಟನೆ
Share to all

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ : ಸಚಿವರ ಶ್ಲ್ಯಾಘನೆ

ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ರಚಿಸಲು ಪೂರಕವಾದ ಮಾರ್ಗದರ್ಶಿ ವೀಡಿಯೋಗಳ ಉದ್ಘಾಟನೆ

ಧಾರವಾಡ: ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ವ್ಯಾಸಂಗದ ಜ್ಞಾನಾರ್ಜನೆಗೆ ಹಾಗೂ ಅವರ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದಲ್ಲಿ ಕೈಗೊಂಡ ಕ್ರಮಗಳನ್ನು ಶಾಲಾ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಶ್ಲ್ಯಾಘಿಸಿದರು.

ಅವರು ಶನಿವಾರ ನಗರದ ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಆಯುಕ್ತರ ಕಚೇರಿಯಲ್ಲಿ ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ರಚಿಸಲು ಪೂರಕವಾದ ಮಾರ್ಗದರ್ಶಿ ಕಲಿಕಾ ವೀಡಿಯೋಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಷ್ಟ್ರ ಸೇವೆಗೆ ಶ್ರೇಷ್ಠ ಮಾನವ ಸಂಪನ್ಮೂಲ ಒದಗಿಸಲು ಕ್ರಿಯಾಶೀಲವಾಗಿ ಶಾಲಾ ಶಿಕ್ಷಣ ಬೋಧನಾ ವ್ಯವಸ್ಥೆ ರೂಪುಗೊಳ್ಳಲು ಇಲಾಖೆಯ ಎಲ್ಲ ಭಾಗೀದಾರರು ಶ್ರಮಿಸಬೇಕು.

ಸರಕಾರಿ ಶಾಲೆಗಳ ಸಬಲೀಕರಣ ಮತ್ತು ಉನ್ನತೀಕರಣಕ್ಕೆ ರಾಜ್ಯ ಸರ್ಕಾರ ಮೊದಲ ಆದ್ಯತೆಯನ್ನು ನೀಡಿದೆ. ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಪ್ರಧಾನವಾಗಿ ವಿಜ್ಞಾನದ ಅಧ್ಯಯನಕ್ಕೆ ಅನುಕೂಲವಾಗುವಂತೆ ಪ್ರೌಢ ಶಾಲೆಯ 8, 9 ಮತ್ತು 10 ನೇ ತರಗತಿಗಳ ವಿಜ್ಞಾನ ವಿಷಯದ ಕಲಿಕಾ ಪಠ್ಯ ಕ್ರಮವನ್ನು ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿಯೂ ರೂಪಿಸಿ ವಿದ್ಯಾರ್ಥಿಗಳಿಗೆ ಒದಗಿಸಲು ಕ್ರಮಕೈಕೊಳ್ಳಲಾಗಿದೆ. ಇದರಿಂದ ಉನ್ನತ ವ್ಯಾಸಂಗದ ಸಂದರ್ಭದಲ್ಲಿ ವಿಜ್ಞಾನದ
ಆಂಗ್ಲಭಾಷಾ ಸಂವಹನ ಸುಲಭವಾಗಲಿದೆ
ಎಂದರು.

ಸರ್ಕಾರಿ ಮತ್ತು ಅನುದಾನಿತ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಪಠ್ಯಪುಸ್ತಕ, ಸಮವಸ್ತ್ರ, ಪೂರಕ ಪೌಷ್ಟಿಕ ಆಹಾರ ಮುಂತಾದವುಗಳನ್ನು ಪೂರೈಕೆ ಮಾಡುತ್ತಿದ್ದು, ಇದು ಸಾರ್ವಜನಿಕರ ಅವಗಾಹನೆಗೆ ಮುಟ್ಟುವಲ್ಲಿ ಇಲಾಖಾ ಅಧಿಕಾರಿಗಳು ವ್ಯಾಪಕ ಪ್ರಚಾರ ಮಾಡಬೇಕು ಎಂದೂ ಸಲಹೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವ್ಹಿ. ಸಂಕನೂರ ಮಾತನಾಡಿ, ವಿದ್ಯಾಕಾಶಿ ಎಂಬ ಗೌರವಕ್ಕೆ ಪಾತ್ರವಾಗಿರುವ ಧಾರವಾಡ ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶ ಟಾಪ್ 10 ಒಳಗಡೆ ಬರುವಂತೆ ಎಲ್ಲರೂ ಶ್ರಮಿಸಬೇಕು. ಈಗಾಗಲೇ ತಾವು ಇಲಾಖೆಯ ಬಿಇಓ., ಡಿಡಿಪಿಐ ಸೇರಿದಂತೆ ವಿಭಿನ್ನ ಅಧಿಕಾರಿಗಳ ಜೊತೆಗೆ ಈ ಕುರಿತು ಸಭೆ ಮಾಡಿ ಮಾರ್ಗದರ್ಶನ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಕಾರ್ಯಗಳನ್ನು ಮೆಚ್ಚಿ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಅವರನ್ನು ಗೌರವಿಸಿದರು.

ಖಾಸಗಿ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಸಚಿವರು ಸರಕಾರದ ಮೂಲಕ ಅನುಮತಿ ಒದಗಿಸಬೇಕೆಂದು ಪ್ರೊ. ಸಂಕನೂರ ಮನವಿ ಮಾಡಿದರು.

ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಬೆಳಗಾವಿ ವಿಭಾಗದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಮಾತನಾಡಿ, ಎಸ್.ಎಸ್.ಎಲ್.ಸಿ. ಸೇರಿದಂತೆ ಒಟ್ಟು ಶಾಲಾ ಶಿಕ್ಷಣದ ಬೋಧನೆ ಕ್ರಿಯಾಪ್ರೇರಕವಾಗಲು ಹಾಗೂ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿಭಾಗದ 9 ಜಿಲ್ಲೆಗಳ ಅಧಿಕಾರಿಗಳ ಸಭೆ ಜರುಗಿಸಿ ಅವರಿಗೆ ನಿರ್ದಿಷ್ಟ ನೀಲನಕ್ಷೆ ಒದಗಿಸಲಾಗಿದೆ. ನವ್ಹೆಂಬರ್ ದಿಂದ 2024 ರ ಫೆಬ್ರವರಿ ವರೆಗೆ ತಾವು ಎಲ್ಲಾ ಜಿಲ್ಲೆಗಳಲ್ಲಿ ಸರಣಿ ಸಭೆಗಳನ್ನು ಜರುಗಿಸಿ ನಿಖರವಾಗಿ ಪ್ರಗತಿ ಪರಿಶೀಲನೆ ನಡೆಸುವೆ ಎಂದರು.

ಜಿಲ್ಲೆಯ ಆಡಳಿತ ಡಿಡಿಪಿಐ ಎಸ್.ಎಸ್. ಕೆಳದಿಮಠ, ಅಭಿವೃದ್ಧಿ ಡಿಡಿಪಿಐ ಜಯಶ್ರೀ ಕಾರೇಕರ, ಹುಬ್ಬಳ್ಳಿ ಗ್ರಾಮೀಣ ಬಿಇಓ ಉಮೇಶ ಬಮ್ಮಕ್ಕನವರ, ಧಾರವಾಡ ಗ್ರಾಮೀಣ ಬಿಇಓ ಆರ್. ಆರ್. ಸದಲಗಿ, ಇ-ಆಡಳಿತ ನಿರ್ವಹಣಾಧಿಕಾರಿ ಶಾಂತಾ ಮೀಸಿ, ಶಾಲಾ ಶಿಕ್ಷಣ ಇಲಾಖೆಯ ಹಲವಾರು ವೃಂದದ ಅಧಿಕಾರಿಗಳು ಇದ್ದರು.
****

P Views: 2,155
Headlines, ಮುಖ್ಯಾಂಶಗಳು, ರಾಷ್ರ್ಟೀಯ, ಶಿಕ್ಷಣ Tags:ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಕ್ರಮ : ಸಚಿವರ ಶ್ಲ್ಯಾಘನೆ ವಿಜ್ಞಾನದ ಚಿತ್ರಗಳನ್ನು ಸುಲಭವಾಗಿ ರಚಿಸಲು ಪೂರಕವಾದ ಮಾರ್ಗದರ್ಶಿ ವೀಡಿಯೋಗಳ ಉದ್ಘಾಟನೆ

Post navigation

Previous Post: ಶಿಕ್ಷಣ ಇಲಾಖೆಯ ಇಂದಿನ ವ್ಯವಸ್ಥೆಗೆ ಯಾರು ಕಾರಣ ಅಂತ ಸ್ವತಃ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರೆ ಹೇಳಿದ್ರು ನೋಡಿ… ದಸರಾ ರಜೆ  ವಿಸ್ತರಣೆ ಆಗುತ್ತದೆಯೋ?ಇಲ್ಲವೋ? ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ..ವಿಡಿಯೋ ಇದೇ ನೋಡಿ
Next Post: 1 ಲಕ್ಷ ರೂಪಾಯಿ ಲಂಚ ಸ್ವಿಕರಿಸುತ್ರಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಭಾರತಮ್ಮ್…

Leave a Reply Cancel reply

Your email address will not be published. Required fields are marked *

Archives

  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ರಾಜ್ಯ ಸರ್ಕಾರಿ ನೌಕರರಿಗೆ ಏಳನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ ಸದನದ ಒಳಗಡೆ ಪರಿಷತ್ ಸದಸ್ಯರಿಂದ ಪ್ರತಿಭಟನೆ:ವೇತನ ಆಯೋಗ ಕುರಿತ ಅಪಡೆಟ್ ಸುದ್ದಿ ಇಲ್ಲಿದೆ ನೋಡಿ
  • ಪತಿಯ ಸಹಕಾರದಿಂದ ಕೂಲಿ ಕಾರ್ಮಿಕರ ಮಕ್ಕಳಿಗೆ ಅಕ್ಷರದ ಬೆಳಕು ಹರಿಸಿದ ಡಾ, ವೀಣಾ ಟಿ.
  • ಡಿಸೆಂಬರ್ 6 ಮಹಾ ಪರಿನಿರ್ವಾಣ ದಿನ ಆಚರಣೆ ಕುರಿತು ಶಿಕ್ಷಕಿ ನಂದಿನಿ ಸನಬಾಲ ಅವರ ಬರಹ
  • ಬೆಳಗಾವಿ ಚಳಿಗಾಲದ ಅಧೀವೇಶನದಲ್ಲಿ ಚರ್ಚೆಯಾಯಿತು ಏಳನೇ ವೇತನ ಆಯೋಗ ಹಾಗೂ ಓಪಿಎಸ್… ಪ್ರಶ್ನೇಗಳೇನು?ಸರ್ಕಾರ ಉತ್ತರವೇನು? ಇಲ್ಲಿದೆ ಮಾಹಿತಿ.
  • ಅನಿಲಕುಮಾರ ಪಾಟೀಲ ಅವರ ಮಗನ ಆರತಕ್ಷತೆಗೆ ಕ್ಷಣಗಣಣೆ!! ಸ್ಥಳಕ್ಕೆ ಭೇಟಿ ನೀಡಿದ ಹು_ಧಾ ಪೋಲಿಸ್ ಕಮಿಷನರ್

Copyright © 2023 Public Today.

Powered by PressBook WordPress theme