Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಜಯದೇವ ಹಿರೇಮಠರಿಗೆ ಅಮೇರಿಕಾ ಸೆಂಟ್ರಲ್ ವಿ.ವಿ.ಯ ಗೌರವ ಡಾಕ್ಟರೇಟ್

Posted on August 21, 2023 By Pulic Today No Comments on ಜಯದೇವ ಹಿರೇಮಠರಿಗೆ ಅಮೇರಿಕಾ ಸೆಂಟ್ರಲ್ ವಿ.ವಿ.ಯ ಗೌರವ ಡಾಕ್ಟರೇಟ್
Share to all

ಜಯದೇವ ಹಿರೇಮಠರಿಗೆ ಅಮೇರಿಕಾ ಸೆಂಟ್ರಲ್ ವಿ.ವಿ.ಯ ಗೌರವ ಡಾಕ್ಟರೇಟ್

ಧಾರವಾಡ: ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ತಮ್ಮದೇ ಆದ ವಿಶಿಷ್ಟ ಪಾಂಡಿತ್ಯವನ್ನು ಹೊಂದಿರುವ ನಗರದ ಜಯದೇವ ಹಿರೇಮಠ ಅವರಿಗೆ ಅವರ ಜೀವಮಾನ ಸಾಧನೆಯನ್ನು ಪರಿಗಣಿಸಿ ಅಮೇರಿಕಾದ ಸೆಂಟ್ರಲ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ.

ಭಾರತ ಹಾಗೂ ಕುವೈತ್ ರಾಷ್ಟçಗಳಲ್ಲಿಯ ಗ್ರಂಥಾಲಯ ವ್ಯವಸ್ಥೆ, ಜೊತೆಗೆ ಅದನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳುವ ಕುರಿತು ಅಪಾರ ಅನುಭವವನ್ನು ಹೊಂದಿದ್ದಾರೆ. ಈ ಹಿಂದೆ ಜಯದೇವ ಹಿರೇಮಠ ಕರ್ನಾಟಕ ಕಾನೂನು ವಿಶ್ವವಿದ್ಯಾಲಯ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಭೂಪಾಲದ ದಿ. ಬ್ರಿಟಿಷ್ ಕೌನ್ಸಿಲ್ ಟೈಬ್ರರಿ, ಮುಂಬೈದ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಕ್ಯಾಪಿಟಲ್ ಮಾರ್ಕೆಟ್, ನವದೆಹಲಿಯ ನ್ಯಾಷನಲ್ ಕೌನ್ಸಿಲ್ ಫಾರ್ ಸಿಮೆಂಟ್ ಆ್ಯಂಡ್ ಬಿಲ್ಡಿಂಗ್ ಮಟೀರಿಯಲ್ ಸಂಸ್ಥೆಗಳಲ್ಲಿ ಗ್ರಂಥಪಾಲಕರಾಗಿ ವಿಶಿಷ್ಟ ಸೇವೆ ಸಲ್ಲಿಸಿದ್ದಾರೆ.

ಅಮೇರಿಕನ್ ಯುನಿರ್ವಸಿಟಿ ಆಫ್ ಕುವೈತ್ ಹಾಗೂ ಇಂಡಸ್ಟ್ರಿಯಲ್ ಬ್ಯಾಂಕ್ ಆಫ್ ಕುವೈತ್ ಸಂಸ್ಥೆಗಳ ಸಂಲಗ್ನತೆಯೊಂದಿಗೆ ಅಲ್ಲಿಯ ಗ್ರಂಥಾಲಯಗಳನ್ನು ಹೊಸ ವಿನ್ಯಾಸ ಮತ್ತು ಮಾಹಿತಿ ವಿಜ್ಞಾನದೊಂದಿಗೆ ಆಧುನೀಕರಣಗೊಳಿಸುವಲ್ಲಿ ಜಯದೇವ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ತಂತ್ರಜ್ಞಾನವನ್ನು ಪರಿಚಯಿಸಿ, ಗ್ರಂಥಾಲಯ ಮತ್ತು ಮಾಹಿತಿ ಸೇವೆಗಳ ಹಂಚಿಕೆಯಲ್ಲಿ ಪರಿಣಾಮಕಾರಿತ್ವ ಹಾಗೂ ವೇಗವನ್ನು ತರುವುದರ ಮೇಲೆ ಇವರ ಚಿಂತನೆ ಕೇಂದ್ರೀಕೃತವಾಗಿದೆ.

ಭಾರತೀಯ ಗ್ರಂಥಾಲಯಗಳ ಸಂಘ, ಇಂಡಿಯನ್ ಅಸೋಸಿಯೇಷನ್ ಆಫ್ ಸ್ಪೆಷಲ್ ಲೈಬ್ರರೀಸ್ ಆ್ಯಂಡ್ ಇನ್‌ಫರ‍್ಮೇಷನ್ ಸೆಂಟರ್ಸ ಅಮೇರಿಕಾದ ವಿಶೇಷ ಗ್ರಂಥಾಲಯಗಳ ಸಂಘ, ಇಂಗ್ಲೆಂಡಿನ ವಿಶೇಷ ಗ್ರಂಥಾಲಯಗಳು ಹಾಗೂ ಮಾಹಿತಿ ವಿನಿಮಯ ಕೇಂದ್ರಗಳ ಸಂಘದ ಆಜೀವ ಸದಸ್ಯರಾಗಿದ್ದು, ಭಾರತದ ಹಲವಾರು ಸಲಹಾ ಮಂಡಳಿಗಳ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಕ.ವಿ.ವಿ. ಮೂಲಕ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದಲ್ಲಿ ಮೊದಲ ರ‍್ಯಾಂಕ್‌ದೊಂದಿಗೆ ಪದವಿ ಪಡೆದಿರುವ ಜಯದೇವ ಅವರು, ಕನ್ನಡ ವಾಙ್ಮಯ ಲೋಕದ ಹಿರಿಯ ವಿದ್ವಾಂಸ ಡಾ. ಪಂಚಾಕ್ಷರಿ ಹಿರೇಮಠ ಅವರ ಹಿರಿಯ ಪುತ್ರ.
—————————————————————-

P Views: 240
Headlines, ಮುಖ್ಯಾಂಶಗಳು, ಹುಬ್ಬಳಿ-ಧಾರವಾಡ Tags:ಜಯದೇವ ಹಿರೇಮಠರಿಗೆ ಅಮೇರಿಕಾ ಸೆಂಟ್ರಲ್ ವಿ.ವಿ.ಯ ಗೌರವ ಡಾಕ್ಟರೇಟ್

Post navigation

Previous Post: ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
Next Post: ಒಂದೇ ಖುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಜಿದ್ದಾಜಿದ್ದಿ!! ವರ್ಗಾವರ್ಗಿ… ಅಧಿಕಾರಿಯ ಮೇಲೆ ಇನ್ನೊಬ್ಬ ಅಧಿಕಾರಿ ದರ್ಪ..

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme