ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ಲ) ಬೆಂಗಳೂರು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ, ಅಧ್ಯಕ್ಷರಾದ ಕೆ ನಾಗೇಶ ಅವರ ನೇತೃತ್ವದಲ್ಲಿ
ಮಾನ್ಯ ಆಯುಕ್ತರಾದ ಸನ್ಮಾನ್ಯ ಶ್ರೀಮತಿ ಜಿ.ಬಿ. ಕಾವೇರಿ (ಭಾಅಸೇ) ಹಾಗೂ ಮಾನ್ಯ ನಿರ್ದೇಶಕರಾದ ಶ್ರೀ ಪ್ರಸನ್ನ ಕುಮಾರ್ ಅವರನ್ನು ಭೇಟಿ ಮಾಡಲಾಯಿತು.
ಇಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮಾನ್ಯ ಆಯುಕ್ತರಾದ ಶ್ರೀಮತಿ ಬಿ.ಬಿ. ಕಾವೇರಿ (ಭಾಅಸೇ) ಅವರನ್ನು ಭೇಟಿ ಮಾಡಲಾಯಿತು.ಈ ಕೆಳಗಿನ ಪ್ರಮುಖ ಅಂಶಗಳನ್ನು ಚರ್ಚಿಸಲಾಯಿತು.
1) ಶಿಕ್ಷಕರನ್ನು ಬಿ ಎಲ್ ಓ ಕೆಲಸಕ್ಕೆ ನಿಯೋಜಿಸಿದಂತೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲು ಇಂದು ಆದೇಶ ಮಾಡಲು ಮಾನ್ಯ ಆಯುಕ್ತರಿಂದ ಒಪ್ಪಿಗೆ ದೊರೆಯಿತು.
2) ಸೆಪ್ಟೆಂಬರ್ 5ರ ಒಳಗಾಗಿ ಮುಖ್ಯ ಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಬಡ್ತಿ ನೀಡುವ ಕುರಿತು ಚರ್ಚಿಸಲಾಯಿತು.
3) ಶಾಲಾ ವೇಳಾಪಟ್ಟಿಯಲ್ಲಿನ ಗೊಂದಲ ನಿವಾರಿಸಲು ಚರ್ಚಿಸಲಾಯಿತು.
4) ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಒ ಗಳಿಗೆ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಲಾಯಿತು.
5) ರಾಜ್ಯಮಟ್ಟದ ಶಿಕ್ಷಕರ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲು ವಿನಂತಿಸಲಾಯಿತು.
6) ವಿಜಯಪುರ ಜಿಲ್ಲೆಯ ಜಿಪಿಟಿ ಶಿಕ್ಷಕರ ವರ್ಗಾವಣೆ ಸಮಸ್ಯೆಯನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲೆಯ ಅಧ್ಯಕ್ಷರಾದ ಸಿದ್ದರಾಮ ಲೋಕನ್ನವರ, ಸಂಘದ ಪದಾಧಿಕಾರಿಗಳಾದ ಡಿ.ಜಿ.ಕಲಾರಕೊಪ್ಪ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು
ವಿಜಯಪುರ ಜಿಲ್ಲಾ ಕಾರ್ಯದರ್ಶಿಗಳಾದ ಅರ್ಜುನ್ ಲಮಾಣಿ,
ಜಿ.ಓ.ಸಿ.ಸಿ ನಿರ್ದೇಶಕರಾದ ಹನುಮಂತ ಹಾಗೂ ಇನ್ನಿತರರು ಉಪಸ್ಥಿತರಿದ್ದರು…