Skip to content
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
Public Today

Public Today

Kannada News Portal

  • Headlines
  • ಹುಬ್ಬಳಿ-ಧಾರವಾಡ
  • ರಾಷ್ರ್ಟೀಯ
  • ಶಿಕ್ಷಣ
  • Toggle search form

ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರ ಉತ್ತೆಜನಕಾರಿ : ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ ಎಮ್ ಮುಂದಿನಮನಿ.

Posted on July 10, 2023 By Pulic Today No Comments on ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರ ಉತ್ತೆಜನಕಾರಿ : ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ ಎಮ್ ಮುಂದಿನಮನಿ.
Share to all

ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರ ಉತ್ತೆಜನಕಾರಿ : ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ ಎಮ್ ಮುಂದಿನಮನಿ.

ಶಾಲಾ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೃಷ್ಟಿಯಿಂದ ಮತ್ತು ಶಾಲೆಯ ವರ್ಗ ಕೋಣೆಯಲ್ಲಿ ಶಿಕ್ಷಕರು ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಿರಹಟ್ಟಿ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ ಎಮ್ ಮುಂದಿನಮನಿ ಹೇಳಿದ್ದಾರೆ.


ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಛಬ್ಬಿ ತಾಂಡಾ ಶಾಲೆಯಲ್ಲಿ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕ / ಶಿಕ್ಷಕಿಯರ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು ಈ ಕೊರತೆಯನ್ನು ನೀಗಿಸಲು 111 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.

ನೇಮಕವಾಗಿರುವ ಅತಿಥಿ ಶಿಕ್ಷಕರು. Tch, D ed, B ed, ತರಬೇತಿಯನ್ನು ಪಡೆದು ಬಹಳ ವರ್ಷಗಳ ಕಾಲ ತರಗತಿ ಪ್ರಕ್ರಿಯೆಯಿಂದ ದೂರ ಇದ್ದವರಾಗಿತ್ತಾರೆ.

ಪ್ರಯುಕ್ತ ಶೈಕ್ಷಣಿಕ ವರ್ಷದ ಪ್ರಾರಂಭದಿಂದಲೇ
ನೇಮಕಗೊಂಡಿರುವ ಸದರಿ ಅತಿಥಿ ಶಿಕ್ಷಕ /ಶಿಕ್ಷಕಿಯರಿಗೆ ತರಗತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಎರಡು ವಿಭಾಗಗಳಾಗಿ ಮಾಡಲಾಗಿ 1ರಿಂದ 3ನೇ ತರಗತಿ ನಲಿಕಲಿ ವಿಭಾಗಕ್ಕೂ ಹಾಗೂ 4 ರಿಂದ 7/8 ಮತ್ತು 8 ರಿಂದ 10ನೇ ತರಗತಿಗೆ ಬೋಧಿಸುವ ಶಿಕ್ಷಕ-ಶಿಕ್ಷಕಿಯರನ್ನು ತಂಡವಾರು ವಿಭಾಗಿಸಿ ವಿಷಯವಾರು ತರಬೇತಿಯನ್ನು ತಾಲೂಕಿನ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಆಯೋಜಿಸಲಾಗಿದೆ.
ಹಿಂದಿನ ಎರಡು ವರ್ಷಗಳಲ್ಲಿ ಶಾಲಾ ಪ್ರಕ್ರಿಯೆಯು ಕ್ರಮವಾಗಿ ನಡೆಯದೇ ಇದ್ದ ಪ್ರಯುಕ್ತ ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ಹಿನ್ನಡೆ & ನಷ್ಟವನ್ನು ಭರಿಸಲು ಶೈಕ್ಷಣಿಕ ಕಾರ್ಯದ ಮುನ್ನಡೆಗೆ ನಮ್ಮ ಶಿಕ್ಷಕರೊಂದಿಗೆ ಸಹಕಾರಿಯಾಗುವ ದೃಷ್ಟಿಯಿಂದ ಸದರಿ ಅತಿಥಿ ಶಿಕ್ಷಕ ಶಿಕ್ಷಿಕರಿಗೆ ತರಬೇತಿಯನ್ನು ಆಯೋಜಿಸಿ ಅವರಿಗೆ ಆತ್ಯವಶ್ಯಕವಾದ ವಿದ್ಯಾ ಪ್ರವೇಶ,ನಲಿ-ಕಲಿ ಮತ್ತು ಕಲಿಕಾ ಚೇತರಿಕೆ ಉಪಕ್ರಮ-2023ರ ತರಬೇತಿ ಕಾರ್ಯಾಗಾರ ಉಪಯುಕ್ತವಾಗಿದೆ ಎಂದರು.
ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಿ ಆರ್ ಪಿ ಗಳಾದ ಐ ಎಸ್ ಮೆಡ್ಲೇರಿ, ಎಮ್ ಎನ್ ಭರಮಗೌಡರ, ಬಿ ಎಮ್ ಯರಗುಪ್ಪಿ, ವಿ ಎಚ್ ದೀಪಾಳಿ ಮತ್ತು ಸಿ ಆರ್ ಪಿ ಗಳಾದ ಆರ್ ಮಹಾಂತೇಶ, ಎನ್ ಎನ್ ಸಾವಿರಕುರಿ, ಶ್ರೀಮತಿ ಗೀತಾ ಸರ್ವಿ, ಶ್ರೀಮತಿ ಕೆ ಪಿ ಕಂಬಳಿ, ಶ್ರೀಮತಿ ಗಾಯತ್ರಿ ಹಳ್ಳದ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ವಾಯ್ ಬಿ ಪಾಟೀಲ ಹಾಗೂ ಶಾಲೆಯ ಪ್ರಧಾನ ಗುರು ಮಾತೆಯವರಾದ ವಿ ಎ ನರಗುಂದ ಮತ್ತು ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

P Views: 261
Headlines, ಮುಖ್ಯಾಂಶಗಳು, ಶಿಕ್ಷಣ Tags:ಅತಿಥಿ ಶಿಕ್ಷಕರ ತರಬೇತಿ ಕಾರ್ಯಗಾರ ಉತ್ತೆಜನಕಾರಿ : ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜಿ ಎಮ್ ಮುಂದಿನಮನಿ.

Post navigation

Previous Post: ಪರಿಸರ ಪ್ರೇಮ ತಂಡ ದಿಂದ ಟಿ ಮಲ್ಲಿಕಾರ್ಜುನ್  ರವರಿಗೆ ಹೃದಯಸ್ಪರ್ಶಿ ಬಿಳ್ಕೂಡುಗೆ…
Next Post: ಸರಕಾರಿ ಶಾಲೆಯ ಸಹ ಶಿಕ್ಷಕ:ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ಸಂದ್ರಪ್ಪ ನಿಧನ. ರಾಜ್ಯದ ಸಮಸ್ತ ಶಿಕ್ಷಕ ವೃಂದ, ಅಧಿಕಾರಿಗಳು,ಶಾಲೆಯ ಸಿಬ್ಬಂದಿ ವರ್ಗ ಸಂತಾಪ ಸೂಚಿಸದ್ದಾರೆ…

Leave a Reply Cancel reply

Your email address will not be published. Required fields are marked *

Archives

  • September 2023
  • August 2023
  • July 2023
  • June 2023
  • May 2023

Categories

  • Headlines
  • ಮುಖ್ಯಾಂಶಗಳು
  • ರಾಷ್ರ್ಟೀಯ
  • ಶಿಕ್ಷಣ
  • ಹುಬ್ಬಳಿ-ಧಾರವಾಡ

Recent Posts

  • ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ರಾಜ್ಯ ನಿರ್ದೇಶಕರಿಗೆ ಖಡಕ್ ಮನವಿ ಸಲ್ಲಿಸಿ ಚರ್ಚಿಸಿದ ಗ್ರಾಮೀಣ ಶಿಕ್ಷಕರ ಸಂಘ..
  • ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ ಡಿಸಿ ಕೆ ಎ ದಯಾನಂದ… ಕಾವೇರಿಗಾಗಿ ಕರುನಾಡು ಬಂದ್!!
  • ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ..ರಾಜ್ಯದ ಸರಕಾರಿ ಶಾಲೆಯ ಬಹುಮುಖ ಪ್ರತಿಭೆಯುಳ್ಳ ಮಕ್ಕಳು ರಾಜ್ಯ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು
  • ನೌಕರರ ಸಂಘದಲ್ಲಿ ನಡೆದ ಅತಿದೊಡ್ಡ ಬ್ರಷ್ಟಾಚಾರ!!! ನೂರಾರು ನೌಕರರಿಂದ ಲಕ್ಷಾಂತರ ರೂಪಾಯಿ ವಂಚನೆ!! ಯಾರಿವರು?ಏನಿದು ಪ್ರಕರಣ ನೀವೆ ನೋಡಿ
  • ಶಿಕ್ಷಕರನ್ನು ಗೌರವಿಸಿ ಸತ್ಕರಿಸುವ ಜನಸಮುದಾಯ, ಅದರಲ್ಲೂ ಶಾಲಾಭಿವೃದ್ದಿ ಸಮಿತಿಯ ಕಾರ್ಯ ಶ್ಲಾಘನೀಯ ಶಿವಲೀಲಾ ವಿನಯ ಕುಲಕರ್ಣಿ..

Copyright © 2023 Public Today.

Powered by PressBook WordPress theme