ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು..
ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಆಯುಕ್ತರಾಗಿ ಆಗಮಿಸಿದ ಶ್ರೀಮತಿ ಬಿ.ಬಿ.ಕಾವೇರಿ (ಭಾಅಸೇ) ಅವರನ್ನು ತುಂಬು ಹೃದಯದಿಂದ ಸ್ವಾಗತಿಸಲಾಯಿತು.
ಬೆಂಗಳೂರು:
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನೂತನ ಆಯುಕ್ತರಾಗಿ ಆಗಮಿಸಿದ ಅತ್ಯಂತ ಸರಳರು ಸಜ್ಜನರು ಆದ ಸನ್ಮಾನ್ಯ ಶ್ರೀಮತಿ ಬಿ.ಬಿ.ಕಾವೇರಿ (ಭಾಅಸೇ) ಅವರನ್ನು ಇಂದು ಭೇಟಿ ಮಾಡಿ ಸ್ವಾಗತಿಸಿ ಶಿಕ್ಷಕರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
1) ಜೂನ್ 30 ರವರೆಗೆ ಖಾಲಿಯಾಗುವ ನಿವೃತ್ತಿಯಾಗುವ ಹುದ್ದೆಗಳನ್ನು ವರ್ಗಾವಣೆಗೆ ಪರಿಗಣಿಸಲು ವಿನಂತಿಸಲಾಯಿತು.
2) ಶಾಲೆಗಳಲ್ಲಿ ಪೂರ್ಣ ಪ್ರಮಾಣದ ಶಾಲಾ ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸಲು ವಿನಂತಿಸಲಾಯಿತು.
3) ರಾಜ್ಯಾದ್ಯಂತ ಶಾಲಾ ವೇಳಾಪಟ್ಟಯಲ್ಲಿ ಆಗಿರುವ ವ್ಯತ್ಯಾಸವನ್ನು ಸರಿಪಡಿಸಿ ಉಪನಿರ್ದೇಶಕರ ಹಂತದಲ್ಲಿ ಕೈಗೊಳ್ಳಲು ಒತ್ತಾಯಿಸಲಾಯಿತು.
ಮಾನ್ಯ ಆಯುಕ್ತರು ಶಿಕ್ಷಕರ ಸಂಘಟನೆಯ ಜೊತೆ ಅತ್ಯಂತ ವಿಸ್ತಾರವಾಗಿ ಚರ್ಚೆ ನಡೆಸಲಾಯಿತು ಎಂದು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಲಿ ಅವರು ಮಾಹಿತಿ ನೀಡಿದರು..
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಬಸವರಾಜ ಬಾಗೆನ್ನವರ ಅವರು,ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಸಿದ್ರಾಮ ಲೋಕನ್ನವರ ಅವರು, ಗದಗ
ಜಿಲ್ಲಾಧ್ಯಕ್ಷರಾದ ವಿ. ಎಮ್.ಹಿರೇಮಠ ಅವರು, ಇನ್ನು ಆದಂತೆ ಗದಗ,
ರಾಯಚೂರ, ಹಾಗೂ ವಿವಿಧ ತಾಲೂಕಾ ಘಟಕಗಳ, ಜಿಲ್ಲಾ ಘಟಕಗಳ,
ಕಾರ್ಯದರ್ಶಿಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಚಂದ್ರಶೇಖರ ನುಗ್ಗಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಕೆ. ನಾಗೇಶ ರಾಜ್ಯಾಧ್ಯಕ್ಷರು
ಉಪಸ್ಥಿತರಿದ್ದರು…