ಮದ್ಯ ಪ್ರದೇಶದಲ್ಲೂ ಓಪಿಎಸ್ ಜಾರಿ!!ಓಟ್ ಫಾರ್ ಓಪಿಎಸ್ ಅಭಿಯಾನದ ಎಫೆಕ್ಟ್ ಆಗುತ್ತಾ!!!!
2023 ರಲ್ಲಿ ನಡೆಯುವ ಚುನಾವಣೆಗಳಲ್ಲಿ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡುವ ಭರವಸೆಯನ್ನು ಬಿಜೆಪಿ ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳು ಇದನ್ನೇ ಬಂಡವಳನ್ನಾಗಿ ಮಾಡಿಕೊಂಡಿವೆ..
ಇದೇ ತಿಂಗಳು ನಡೆದ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಎನ್ಪಿಎಸ್ ತೊಲಗಿಸಿ ಓಪಿಎಸ್ ಜಾರಿ ಮಾಡಲಾಗುವದೆಂದು ಹೇಳಿತ್ತು.ಅದೇ ರಿತಿ ಓಪ್ ಫಾರ್ ಓಪಿಎಸ್ ಆಭಿಯಾನವನ್ನು ಕೂಡ ಕರ್ನಾಟಕದಲ್ಲಿ ಮಾಡಲಾಗಿತ್ತು..ಇದೀಗ ಮದ್ಯ ಪ್ರದೇಶದಲ್ಲೂ ಇದು ವರ್ಕವೌಟ್ ಆಗಿತ್ತಾ ಎಂಬುದನ್ನು ಕಾದು ನೋಡೊಣ..
ರ್ನಾಟಕದಲ್ಲಿ ನೀಡಿದ 5 ಗ್ಯಾರಂಟಿ ಸಕ್ಸಸ್ ಅದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶದಲ್ಲಿ ಮತ್ತೊಂದು ನಿರ್ಣಾಯಕ ವಿಧಾನಸಭಾ ಚುನಾವಣೆಯತ್ತ ಮುಖಮಾಡಿದ್ದು, ಸೋಮವಾರ ಐದು ಭರವಸೆಗಳನ್ನು ಘೋಷಿಸಿದೆ.ಒಂದು ಗ್ಯಾಸ್ ಸಿಲಿಂಡರ್ ಬೆಲೆ ₹ 500 ಮತ್ತು ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ ₹ 1500 ಸೇರಿದಂತೆ ಐದು ಭರವಸೆಗಳನ್ನು ಕಾಂಗ್ರೆಸ್ ನೀಡಿದೆ.
1. ಗ್ಯಾಸ್ ಸಿಲಿಂಡರ್ ₹500
2. ಪ್ರತಿ ಮಹಿಳೆಗೆ ತಿಂಗಳಿಗೆ ₹ 1500
3. 100 ಯೂನಿಟ್ ಉಚಿತ ವಿದ್ಯುತ್, 200 ಯೂನಿಟ್ ಗೆ ಅರ್ಧ ಹಣ
4. ಕೃಷಿ ಸಾಲ ಮನ್ನಾ
5. ಹಳೆಯ ಪಿಂಚಣಿ ಯೋಜನೆ ಜಾರಿ..
ಅದೇ ರೀತಿ ಜೂನ್ 12 ರಂದು ಹಿರಿಯ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನರ್ಮದಾ ನದಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಜಬಲ್ಪುರದಲ್ಲಿ ರೋಡ್ ಶೋ ಮತ್ತು ರ್ಯಾಲಿಯೊಂದಿಗೆ ಮಧ್ಯಪ್ರದೇಶದಲ್ಲಿ ಪಕ್ಷದ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ.
2023 ರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ ಎಂದು ರಾಜ್ಯಸಭಾ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.