ಮುಖ್ಯ ಮಂತ್ರಿಗಳು ಪ್ರಮಾಣ ವಚನ ಸ್ವಿಕರಿಸುತ್ತಿದ್ದಂತೆ ಇತ್ತ ಸರಕಾರಿ ಶಾಲೆಯ ಶಿಕ್ಷಕರನ್ನು ಅಮಾನತ್ ಮಾಡಿ ಆದೇಶ ಮಾಡಲಾಗಿದೆ.ನೂತನ ಮುಖ್ಯಮಂತ್ರಿಗಳ ಪ್ರಮಾಣವವನಕ್ಕೂ ಹಾಗೂ ಶಿಕ್ಷಕರ ಅಮಾನತ್ ಮಾಡಲು ಕಾರಣ ಏನು ಅಂತ ನೀವೆ ನೋಡಿ…
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಾನುಬೇನಹಳ್ಳಿಯ ಪ್ರಾಥಮಿಕ ಶಾಲಾ ಶಿಕ್ಷಕ ಶಾಂತಮೂರ್ತಿ, ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿದ್ದ ವೇಳೆ ಅವಹೇಳನಕಾರಿಯಾಗಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಸಾಲ ಪಡೆದ ಕುರಿತು, ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ 3590 ಕೋಟಿ ರು, ಧರ್ಮಸಿಂಗ್ 15,635 ಕೋಟಿ ರು, ಎಚ್.ಡಿ ಕುಮಾರಸ್ವಾಮಿ 3,545 ಕೋಟಿ ರು, ಬಿಎಸ್ವೈ 25,653ಕೋಟಿ ರು, ಸದಾನಂದ ಗೌಡ 9,464 ಕೋಟಿ ರು, ಜಗದೀಶ್ ಶೆಟ್ಟರ್ 13,464 ಕೋಟಿ ರು, ಸಿದ್ದರಾಮಯ್ಯ 2,42,000 ಕೋಟಿ ರು. ಎಸ್.ಎಂ ಕೃಷ್ಣ ಅವರಿಂದ ಜಗದೀಶ್ ಶೆಟ್ಟರ್ ವರೆಗೆ ಮಾಡಿದ ಒಟ್ಟು ಸಾಲ 71,331 ಕೋಟಿ ರು. ಹಾಗೂ ಕಳೆದ ಭಾರಿ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾಡಿದ ಸಾಲ 2,42,000 ಕೋಟಿ ರು. ಇದ್ದು, ಬಿಟ್ಟಿಭಾಗ್ಯ ಕೊಡದೆ ಇನ್ನೇನು ಎಂದು ಮುಖ್ಯಮಂತ್ರಿಗಳು ರಾಜ್ಯಕ್ಕಾಗಿ ಮಾಡಿದ ಸಾಲಗಳನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪ್ರಕಟಿಸಿದ್ದರು.ಶಿಕ್ಷಕನ ವರ್ತನೆ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಬಂದಿದ್ದು, ಚಿತ್ರದುರ್ಗ ಡಿಡಿಪಿಐ ಆದೇಶದಂತೆ ಅಮಾನತ್ ಆದೇಶ ಹೊರಡಿಸಲಾಗಿದೆ.
ಸರ್ಕಾರಿ ಸೇವಾ ನಿಯಮಗಳ ಉಲ್ಲಂಘನೆ ಆರೋಪ ಹಿನ್ನೆಲೆ ಕ್ರಮ ಕೂಗೊಂಡಿದ್ದು, ಶಿಕ್ಷಕನಿಗೆ ಅಮಾನತ್ ಶಿಕ್ಷೆ ವಿಧಿಸಿ ಶಿಸ್ತು ಪ್ರಾಧಿಕಾರದ ಎಲ್. ಜಯಪ್ಪ ಆದೇಶ ಹೊರಡಿಸಿದ್ದಾರೆ.